Sunday, April 28, 2024
Homeಅಂತಾರಾಷ್ಟ್ರೀಯವಿಶ್ವಸಂಸ್ಥೆಯಲ್ಲಿ ವಸುದೈವ ಕುಟುಂಬಕಂ ನಾಮಫಲಕ ಅನಾವರಣ

ವಿಶ್ವಸಂಸ್ಥೆಯಲ್ಲಿ ವಸುದೈವ ಕುಟುಂಬಕಂ ನಾಮಫಲಕ ಅನಾವರಣ

ನ್ಯೂಯಾರ್ಕ್, ಅ 12 (ಪಿಟಿಐ) ವಿಶ್ವಸಂಸ್ಥೆಯ ಭಾರತದ ಖಾಯಂ ಮಿಷನ್ ಆವರಣದಲ್ಲಿ ವಸುದೈವ ಕುಟುಂಬಕಂ ಎಂಬ ಬರಹವಿರುವ ಫಲಕವನ್ನು ಸ್ಥಾಪಿಸಲಾಗಿದ್ದು, ಏಕತೆ ಮತ್ತು ಜಾಗತಿಕ ಸಹಯೋಗಕ್ಕೆ ನವದೆಹಲಿಯ ಬದ್ಧತೆಯನ್ನು ಸಾಕಾರಗೊಳಿಸಲಾಗಿದೆ.

ವಿಶ್ವಸಂಸ್ಥೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾರತೀಯ ಸಾಂಸ್ಕøತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಅಧ್ಯಕ್ಷ ಡಾ ವಿನಯ್ ಸಹಸ್ರಬುದ್ಧೆ ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಫಲಕವನ್ನು ಅನಾವರಣಗೊಳಿಸಿದರು.

ವಸುದೈವ ಕುಟುಂಬಕಂ ಎಂಬ ಪದವನ್ನು ಹಿಂದಿಯಲ್ಲಿ ಮತ್ತು ದಿ ವಲ್ಡರ್ ಈಸ್ ಒನ್ ಫ್ಯಾಮಿಲಿ ಎಂದು ಇಂಗ್ಲಿಷ್‍ನಲ್ಲಿ ಬರೆದಿರುವ ಚಿನ್ನದ ವರ್ಣದ ಫಲಕವು ನಗರದ ಭಾರತದ ಖಾಯಂ ಮಿಷನ್‍ನ ಆವರಣದ ಪ್ರವೇಶದ್ವಾರದ ಗೋಡೆಯಲ್ಲಿ ಬರೆಯಲಾಗಿದೆ.

ಹಮಾಸ್ ದಾಳಿ ಯಹೂದಿಗಳ ಮೇಲಿನ ನರಮೇಧದ ನೆನಪು ತರಿಸುತ್ತದೆ : ಬಿಡೆನ್

2023 ರ ಭಾರತದ ಜಿ20 ಪ್ರೆಸಿಡೆನ್ಸಿ ವಸುಧೈವ ಕುಟುಂಬಕಂ ಅಥವಾ ಒಂದು ಭೂಮಿ – ಒಂದು ಕುಟುಂಬ – ಒಂದು ಭವಿಷ್ಯ ಎಂಬ ಥೀಮ್ ಅನ್ನು ಅಳವಡಿಸಿಕೊಂಡಿದೆ, ಇದು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಏಕತೆ ಮತ್ತು ಸಹಯೋಗವನ್ನು ಪರಿಣಾಮಕಾರಿಯಾಗಿ ಫೋಷಿಸುವ ಭಾರತದ ಬದ್ಧತೆಯನ್ನು ಸೂಚಿಸುತ್ತದೆ.

ಒಂದು ರೀತಿಯಲ್ಲಿ, ವಸುಧೈವ ಕುಟುಂಬಕಂ ಹಿಂದಿನ ತತ್ತ್ವಶಾಸವು ಆಧುನಿಕ ಭಾಷೆಯಲ್ಲಿ, ನಾವು ಬ್ರಾಂಡ್ ಇಂಡಿಯಾ ಎಂದು ಕರೆಯಬಹುದಾದುದನ್ನು ಸೃಷ್ಟಿಸಿದೆ. ಇದು ಭಾರತದ ಗುರುತು; ಇದು ಭಾರತದ ವಿಶ್ವ ದೃಷ್ಟಿಕೋನವಾಗಿದೆ, ಎಂದು ಸಹಸ್ರಬುದ್ಧೆ ಅನಾವರಣದಲ್ಲಿ ಹೇಳಿದರು.

1ಕೆ.ಜಿ ಆಭರಣ ಕಳ್ಳತನ ಮಾಡಿದ್ದ ಸೇಲ್ಸ್‍ಮ್ಯಾನ್ ಸೇರಿ ಇಬ್ಬರ ಬಂಧನ

ವಿಶ್ವಸಂಸ್ಥೆಯಲ್ಲಿನ ಹಲವಾರು ಭಾರತೀಯ ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಐಸಿಸಿಆರ್ ಅಧಿಕಾರಿಗಳು, ಡೈರೆಕ್ಟರ್ ಜನರಲ್ ಕುಮಾರ್ ತುಹಿನ್ ಮತ್ತು ಡೆಪ್ಯುಟಿ ಡೈರೆಕ್ಟರ್ ಜನರಲ್ ಅಭಯ್ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.

RELATED ARTICLES

Latest News