Thursday, May 2, 2024
Homeರಾಷ್ಟ್ರೀಯ553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ

553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ

ಬೆಂಗಳೂರು – ಅಮೃತ್ಭಾರತ್ಸ್ಟೇಷನ್ಯೋಜನೆಯಡಿ 19,000 ಕೋಟಿರೂ.ಗಳವೆಚ್ಚದಲ್ಲಿ 553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆನೆರವೇರಿಸಿ ಪುನರಾಭಿವೃದ್ಧಿಗೋ ಮತಿ ನಗರ ರೈಲ್ವೆ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಸುಮಾರು 21,520 ಕೋಟಿರೂ.ಗಳ ವೆಚ್ಚದಲ್ಲಿ ದೇಶಾದ್ಯಂತ 1500 ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳನ್ನು ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.

“ಒಂದೇ ಬಾರಿಗೆ 2000 ಯೋಜನೆಗಳನ್ನು ಪ್ರಾರಂಭಿಸುವುದರೊಂದಿಗೆ, ಭಾರತವು ತನ್ನ ರೈಲ್ವೆ ಮೂಲಸೌಕರ್ಯದ ಮೆಗಾ ಪರಿವರ್ತನೆಗೆ ಸಾಕ್ಷಿಯಾಯಿತು “ಭಾರತ ಇಂದು ಏನು ಮಾಡಿದರೂ, ಅದು ಅಭೂತಪೂರ್ವ ವೇಗ ಮತ್ತು ಪ್ರಮಾಣದಲ್ಲಿ ಮಾಡುತ್ತದೆ. ನಾವು ದೊಡ್ಡ ಕನಸುಗಳನ್ನು ಕಾಣುತ್ತೇವೆ ಮತ್ತು ಅವುಗಳನ್ನು ಸಾಕಾರಗೊಳಿಸಲು ದಣಿವರಿಯದೆ ಕೆಲಸಮಾಡುತ್ತೇವೆ. ಈ ಸಂಕಲ್ಪವು ಈ ವಿಕಸಿತ ಭಾರತ್ವಿಕಸಿತ ರೈಲ್ವೆ ಕಾರ್ಯಕ್ರಮದಲ್ಲಿಗೋಚರಿಸುತ್ತದೆ” ಎಂದು ಹೇಳಿದರು.

“ಅಮೃತ್ಭಾರತ್ನಿಲ್ದಾಣಗಳುವಿಕಾಸ್ಮತ್ತುವಿರಾಸತ್ಎರಡರಸಂಕೇತಗಳಾಗಿವೆ” ಕಳೆದ 10 ವರ್ಷಗಳಲ್ಲಿ ವಿಕಸಿತ ಭಾರತ್ರಚನೆಯು ರೈಲ್ವೆಯಲ್ಲಿ ವಿಶೇಷವಾಗಿ ಸ್ಪಷ್ಟವಾಗಿದೆ, ವಿಮಾನ ನಿಲ್ದಾಣಗಳಲ್ಲಿನ ಆಧುನಿಕ ಸೌಲಭ್ಯಗಳನ್ನು ಈಗ ರೈಲ್ವೆನಿಲ್ದಾಣಗಳಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಲಭ್ಯವಾಗುವಂತೆಮಾಡಲಾಗುತ್ತಿದೆ”

ವ್ಹೀಲಿಂಗ್ ಹಾವಳಿ: 6 ಯುವಕರ ವಿರುದ್ಧ ಎಫ್‍ಐಆರ್

“ರೈಲ್ವೆ ನಾಗರಿಕರಿಗೆ ಪ್ರಯಾಣವನ್ನು ಸುಲಭಗೊಳಿಸುವ ಪ್ರಮುಖ ಅಂಶವಾಗುತ್ತಿದೆ ಮೂಲಸೌಕರ್ಯಕ್ಕಾಗಿ ಖರ್ಚುಮಾಡುವ ಪ್ರತಿ ಪೈಸೆ ಹೊಸ ಆದಾಯದ ಮೂಲಗಳನ್ನು ಮತ್ತು ಹೊಸ ಉದ್ಯೋಗವನ್ನು ಸೃಷ್ಟಿಸುತ್ತದೆ, ಭಾರತೀಯ ರೈಲ್ವೆ ಕೇವಲ ಪ್ರಯಾಣಿಕರ ಸೌಲಭ್ಯವಲ್ಲ ಆದರೆ ಭಾರತದ ಕೃಷಿ ಮತ್ತು ಕೈಗಾರಿಕಾ ಪ್ರಗತಿಯ ಅತಿದೊಡ್ಡ ವಾಹಕವಾಗಿದೆ” ಎಂದು ಪ್ರಧಾನಿ ಮೋದಿ ಉದ್ಗರಿಸಿದರು.

RELATED ARTICLES

Latest News