Sunday, May 5, 2024
Homeರಾಷ್ಟ್ರೀಯರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕರಸೇವಕರಿಗೂ ಆಹ್ವಾನ

ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕರಸೇವಕರಿಗೂ ಆಹ್ವಾನ

ಅಯೋಧ್ಯೆ(ಉತ್ತರಪ್ರದೇಶ),ಜ.10- ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಮಮಂದಿರ ನಿರ್ಮಾಣದಲ್ಲಿ ಪಾತ್ರವಹಿಸಿದ್ದ ಹಲವು ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ. ಇದರೊಂದಿಗೆ ಕರಸೇವೆಯ ವೇಳೆ ತಲಾ 100 ರೂ. ದೇಣಿಗೆ ನೀಡಿದ ಕರಸೇವಕರಿಗೂ ಆಹ್ವಾನ ನೀಡಲಾಗಿದೆ.

ನಿನ್ನೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಭೆ ನಡೆಸಿದ ಸಂದರ್ಭದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಕರ ಸಂಕ್ರಾಂತಿಯ ನಂತರ ಪ್ರಾರಂಭವಾಗುವ ಪ್ರಾಣ ಪ್ರತಿಷ್ಠೆಯ ವೈದಿಕ ಆಚರಣೆಗಳ ಬಗ್ಗೆ ಮಾಹಿತಿ ಪಡೆದ ಆದಿತ್ಯನಾಥ್, ಸಮಾರಂಭದ ಭದ್ರತೆ ಮತ್ತು ಇತರ ವ್ಯವಸ್ಥೆಗಳಲ್ಲಿ ತೀರ್ಥ ಕ್ಷೇತ್ರ ಟ್ರಸ್ಟ್‍ಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುವಂತೆ ಅಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಬರುವ ಗಣ್ಯರಿಗೆ ಅಯೋಧ್ಯೆಯಲ್ಲಿ ಉತ್ತಮ ಆತಿಥ್ಯ ಸಿಗಬೇಕು, ಪ್ರತಿ ವಿಐಪಿ ಅತಿಥಿಗಳ ವಿಶ್ರಾಂತಿ ಸ್ಥಳವನ್ನು ಮುಂಚಿತವಾಗಿ ಆಯ್ಕೆ ಮಾಡಬೇಕು. ಹವಾಮಾನವನ್ನು ಪರಿಗಣಿಸಿ, ಕೆಲವು ಅತಿಥಿಗಳು ಒಂದು ಅಥವಾ ಎರಡು ದಿನ ಮುಂಚಿತವಾಗಿ ಬರುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಅವರ ವಾಸ್ತವ್ಯಕ್ಕೆ ಉತ್ತಮ ವ್ಯವಸ್ಥೆಗಳು ಇರಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಪಾಕ್ ಜೈಲಿನಲ್ಲಿ 78 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್

ಅಯೋಧ್ಯೆಯಲ್ಲಿ ಹೋಟೆಲ್‍ಗಳು ಮತ್ತು ಧರ್ಮ ಶಾಲಾಗಳಿವೆ. ಹೋಮ್ ಸ್ಟೇ ವ್ಯವಸ್ಥೆಯೂ ಲಭ್ಯವಿದೆ. ಟೆಂಟ್ ನಗರಗಳ ಸಂಖ್ಯೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಕುಂಭ ಮಾದರಿಯಲ್ಲಿ ಅಯೋಧ್ಯೆಯಲ್ಲಿ 25-50 ಎಕರೆ ಪ್ರದೇಶದಲ್ಲಿ ಭವ್ಯ ಟೆಂಟ್ ಸಿಟಿ ನಿರ್ಮಾಣವಾಗಬೇಕು.

ಜ.22ರ ನಂತರ ಪ್ರಪಂಚದಾದ್ಯಂತದ ರಾಮ ಭಕ್ತರು ಅಯೋಧ್ಯೆಗೆ ಆಗಮಿಸುತ್ತಾರೆ ಮತ್ತು ಅವರ ಅನುಕೂಲಕ್ಕಾಗಿ ಇಡೀ ನಗರದಲ್ಲಿ ವಿವಿಧ ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಈ ಮಾರ್ಗಸೂಚಿಗಳು ಸಂವಿಧಾನದ 8ನೇ ಶೆಡ್ಯೂಲ್‍ನಲ್ಲಿರುವ ಭಾಷೆಗಳಲ್ಲಿ ಮತ್ತು ವಿಶ್ವಸಂಸ್ಥೆಯ ಆರು ಭಾಷೆಗಳಲ್ಲಿ ಇರಬೇಕು ಎಂದಿದ್ದಾರೆ.

ಜ.22ರಂದು ಸಂಜೆ ಹರ್ ದೇವ್ ದೇವಸ್ಥಾನದಲ್ಲಿ ದೀಪೋತ್ಸವವನ್ನು ಆಚರಿಸಲಾಗುವುದು. ಪ್ರತಿಯೊಬ್ಬ ಸನಾತನ ಭಕ್ತರು ತಮ್ಮ ಮನೆ/ಸಂಸ್ಥೆಗಳಲ್ಲಿ ರಾಮಜ್ಯೋತಿಯನ್ನು ಬೆಳಗಿಸುವ ಮೂಲಕ ರಾಮಲಲ್ಲಾನನ್ನು ಸ್ವಾಗತಿಸುತ್ತಾರೆ. ಹೀಗಾಗಿ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಅಲಂಕರಿಸಬೇಕು. ಸಂಜೆ ಪಟಾಕಿ ಸಿಡಿಸುವ ವ್ಯವಸ್ಥೆಯನ್ನೂ ಮಾಡಬೇಕು. ಪಟ್ಟಾಕಾರ ಸಮಾರಂಭವನ್ನು ಅಯೋಧ್ಯೆಯಲ್ಲಿ ನೇರಪ್ರಸಾರ ಮಾಡಬೇಕು. ಇದಕ್ಕಾಗಿ ಮೊಬೈಲ್ ವ್ಯಾನ್, ಎಲ್‍ಇಡಿ ಪರದೆ ಇತ್ಯಾದಿ ವ್ಯವಸ್ಥೆ ಮಾಡಬೇಕು ಎಂದೂ ಅವರು ಸೂಚಿಸಿದ್ದಾರೆ.

RELATED ARTICLES

Latest News