Saturday, July 27, 2024
Homeರಾಷ್ಟ್ರೀಯಬದರಿನಾಥ ಧಾಮ ಸಾರ್ವಜನಿಕರಿಗೆ ಮುಕ್ತ

ಬದರಿನಾಥ ಧಾಮ ಸಾರ್ವಜನಿಕರಿಗೆ ಮುಕ್ತ

ನವದೆಹಲಿ,ಮೇ.12- ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ಧಾಮವು ಇಂದಿನಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಇಂದು ಬೆಳಿಗ್ಗೆ 6 ಗಂಟೆಗೆ ಆರ್ಮಿ ಬ್ಯಾಂಡ್‍ನ ಸುಮಧುರ ನಾದದ ನಡುವೆ ಸಂಪೂರ್ಣ ಧಾರ್ಮಿಕ ಕ್ರಿಯೆಗಳೊಂದಿಗೆ ಭಕ್ತರಿಗೆ ದೇವಾಲಯ ತನ್ನ ಬಾಗಿಲು ತೆರೆಯಿತು. ಭಕ್ತರನ್ನು ಸ್ವಾಗತಿಸುವಾಗ, ವೇದ ಘೋಷಗಳು ಮತ್ತು ಬದ್ರಿ ವಿಶಾಲ್ ಲಾಲ್ ಕೀ ಜೈ ಘೋಷಣೆಗಳು ದೇವಸ್ಥಾನದಾದ್ಯಂತ ಪ್ರತಿಧ್ವನಿಸಿದವು.

ನಿನ್ನೆ ಚಮೋಲಿ ಜಿಲ್ಲೆಯಲ್ಲಿ ಚಾರ್ ಧಾಮ್ ಯಾತ್ರೆಗಾಗಿ ಭಕ್ತರಿಗಾಗಿ ತನ್ನ ಪೋರ್ಟಲ್‍ಗಳನ್ನು ತೆರೆಯುವ ಮುನ್ನ ಅಲಂಕರಿಸಿದ ಬದರಿನಾಥ ದೇವಾಲಯದಲ್ಲಿ ಇಂದು ಬೆಳಗ್ಗೆ ನೂರಾರು ಭಕ್ತರು ಬದರಿನಾಥ ಧಾಮದ ಪ್ರವೇಶದ್ವಾರವನ್ನು ಹೂವಿನಿಂದ ಅಲಂಕರಿಸಿದರು.

ಆರು ತಿಂಗಳ ವಿರಾಮದ ನಂತರ ಬದರಿನಾಥ ಧಾಮ್ ತನ್ನ ದ್ವಾರಗಳನ್ನು ಭಕ್ತರಿಗಾಗಿ ತೆರೆಯಿತು. ನವೆಂಬರ್ 18 ರಿಂದ ಚಳಿಗಾಲದಲ್ಲಿ ದೇವಾಲಯದ ದ್ವಾರಗಳನ್ನು ಮುಚ್ಚಲಾಗಿತ್ತು.

ಉತ್ತರಾಖಂಡದ ನಾಲ್ಕು ಧಾಮಗಳ ಪೈಕಿ ಮೂರು ಧಾಮಗಳಾದ ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಧಾಮಗಳ ಬಾಗಿಲುಗಳನ್ನು ಕಳೆದ ಶುಕ್ರವಾರ ಅಕ್ಷಯ ತೃತೀಯ ಸಂದರ್ಭದಲ್ಲಿ ತೆರೆಯಲಾಗಿತ್ತು. ಬಾಗಿಲು ತೆರೆಯುವ ಸಿದ್ಧತೆಗಳನ್ನು ಬದರಿನಾಥ ಕೇದಾರನಾಥ ದೇವಾಲಯ ಸಮಿತಿ ಪೂರ್ಣಗೊಳಿಸಿದೆ.

RELATED ARTICLES

Latest News