ಬೆಳಗಾವಿ,ಏ.11- ಸಿಬಿಐ ನಿರ್ದೇಶಕರ ಹೆಸರಿನ ಇಲ್ಲಿನ ಉದ್ಯಮಿಯನ್ನು ಬೆದರಿಸಿ 15 ಕೋಟಿಗೂ ಹೆಚ್ಚು ಹಣ ದೋಚಿದ್ದ ಹೈದರಾಬಾದ್ನ ಇಬ್ಬರು ಸೈಬರ್ ವಂಚಕರನ್ನು ನಗರ ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ನ ವೆಂಕದೋತ್ ಶರತ್ ನಾಯಿಕ್ ಮತ್ತು ದೇಗಾವತ ಶ್ರೀಪಾದ ನಾಯಿಕ ಬಂಧಿತ ಸೈಬರ್ ವಂಚಕರು.
ಕಳೆದ ಮಾ.18ರಂದು ದಾಖಲಾಗಿದ್ದ ಪ್ರಕರಣವನ್ನು ಚಾಕಚತ್ಯದಿಂದ ಕಂಡು ಹಿಡಿಯಲಾಗಿದ್ದು ಹೈದರಾಬಾದ್ನಲ್ಲಿ ಇವರನ್ನು ಪತ್ತೆ ಮಾಡಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ. ಟಿಳಕವಾಡಿಯ ನಿವಾಸಿ ಅಜೀತ ಗೋಪಾಲಕೃಷ್ಣ ಸರಾ್ ಎಂಬುವವರ ಮೊಬೈಲ್ಗೆ ಕರೆ ಮಾಡಿದ ವಂಚಕ ತಾವು ಸಿಬಿಐ ನಿರ್ದೇಶಕ ಕೆ. ಸುಬ್ರಮಣ್ಯಂ ಎಂದು ಪರಿಚಯಿಸಿಕೊಂಡು ನಿಮ ಹೆಸರಿನಲ್ಲಿ ಎರಡು ಸೀಮ್ ಕಾರ್ಡಗಳು ಆಕ್ಟಿವ್ ಇದ್ದು, ನೀವು ನರೇಶ ಗೋಯಲ್,ಜೇಬ್ ಏರವೇಸ್ ಕಂಪನಿಯ ಸಿಇಓ ರೊಂದಿಗೆ ಸಂಪರ್ಕ ಹೊಂದಿರುತ್ತೀರಿ ಎಂದು ಹೆದರಿಸಿದ್ದಾರೆ.
ಸದ್ಯನಾವು ನರೇಶ ಗೋಯಲ್ನನ್ನು ಬಂದಿಸಿದ್ದು, ತನಿಖೆಯಲ್ಲಿ ನೀವು ನರೇಶ ಗೋಯಲ್ನೊಂದಿಗೆ ನಿಮ ಕೆನರಾ ಬ್ಯಾಂಕ ಖಾತೆಯಿಂದ 25 ಲಕ್ಷ ರೂಪಾಯಿಗಳನ್ನು ಮನಿ ಲ್ಯಾಂಡರಿಂಗ್ ಮಾಡಿ 5 ಲಕ್ಷ ರೂಪಾಯಿಗಳನ್ನು ಕಮಿಷನ್ ಪಡೆದುಕೊಂಡಿರುತ್ತೀರಿ ಎಂದು ಬೆದರಿಸಿದ್ದಾರೆ.
ಆದ್ದರಿಂದ ಈ ಪ್ರಕರಣದಲ್ಲಿ ನೀವು ಆರೋಪಿ ಇದ್ದೀರಿ. ನೀವು ತನಿಖೆಗೆ ನಮೊಂದಿಗೆ ಸಹಕರಿಸಬೇಕು ಇಲ್ಲದಿದ್ದರೆ ನಿಮನ್ನು ಕೂಡಲೇ ಅರೆಸ್ಟ್ ಮಾಡುತ್ತೇನೆ ಎಂದು ಹೇಳಿ ಅವರ ಹೂಡಿಕೆ, ಬ್ಯಾಂಕ್ ಖಾತೆ ವಿವರಗಳನ್ನು ವಂಚಕರು ಪಡೆದುಕೊಂಡಿದ್ದಾರೆ.ತದ ನಂತರದಲ್ಲಿ ಫೆ.7 ರಿಂದ ಮಾ.9 ರವರಗೆ ಒಟ್ಟು 15.45 ಕೋಟಿ ರೂ. ಆರ್ಟಿಜಿಎಸ್ ಮುಖಾಂತರ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ನಂತರ ಮೋಸ ಹೋದ ಬಗ್ಗೆ ತಿಳಿದು ಅವರು ಈ ಬಗ್ಗೆ ನಗರ ಸೈಬರ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿ ಹಾಗು ತಾಂತ್ರಿಕ ಸಹಾಯದಿಂದ ಆರೋಪಿಗಳನ್ನು ಪತ್ತೆ ಮಾಡಿ ದೋಚಿದ್ದ ಹಣ ವಶಕ್ಕೆ ಪಡೆಯಲು ಕ್ರಮಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಬಿ.ಎಸ್. ಮಂಟೂರ ಮಾರ್ಗದರ್ಶನದಲ್ಲಿ ಇನ್್ಸಪೆಕ್ಟರ್ ಶ್ರೀಶೈಲ ಗಾಬಿ,ಪಿಎಸ್ಐ ಸುಮನ ಪವಾರ, ಸಿಬ್ಬಂದಿಯವರ ಕೆ ವಿ ಚರಲಿಂಗಮಠ, ಎನ್ ಜೆ ಮಾದಾರ, ವಿ ಎನ್ ಬಡವನ್ನವರ ಯಾಸೀನ್ ನದಾಪ್, ಎಂ ಎ ಹಿಂಡಿ ರವರು ಭಾಗಿಯಾಗಿದ್ದರು. ನಗರ ಪೊಲೀಸ್ ಆಯುಕ್ತರು ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
