Saturday, July 27, 2024
Homeರಾಜ್ಯರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು ಸತ್ಯ, ನಿಷ್ಠೆಗೆ ಜಯ : ಶರವಣ

ರೇವಣ್ಣ ಅವರಿಗೆ ಜಾಮೀನು ಸಿಕ್ಕಿದ್ದು ಸತ್ಯ, ನಿಷ್ಠೆಗೆ ಜಯ : ಶರವಣ

ಬೆಂಗಳೂರು,ಮೇ14- ಮಾಜಿ ಸಚಿವ ಎಚ್‌.ಡಿ.ರೇವಣ್ಣರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದು ಸತ್ಯ, ನಿಷ್ಠೆಗೆ ಜಯ ಸಿಕ್ಕಂತಾಗಿದೆ. ಕಾಂಗ್ರೆಸ್‌‍ ರೂಪಿಸಿದ್ದ ಸಂಚು ಇದರಿಂದ ವಿಫಲಗೊಂಡಿದೆ ಎಂದು ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಹೇಳಿದರು.

ಎಚ್‌.ಡಿ. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ವಿನಾಕಾರಣ ರೇವಣ್ಣ ಅವರ ತೇಜೋವಧೆಗೆ ಸಂಚು ರೂಪಿಸಿದ್ದು, ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಲ್ಕು ದಶಕಗಳ ರಾಜಕಾರಣದಲ್ಲಿ ರಾಜ್ಯಕ್ಕೆ ಅದರಲ್ಲೂ ಹಾಸನ ಜಿಲ್ಲೆಗೆ ರೇವಣ್ಣ ಕೊಡುಗೆ ಅಪಾರ. ಹಾಲು ಉತ್ಪಾದಕ ಕ್ಷೇತ್ರದಲ್ಲಿ ಅವರು ಜಾರಿಗೆ ತಂದಿರುವ ಸುಧಾರಣೆ ಇಡೀ ಭಾರತದಲ್ಲೇ ಮಾದರಿ. ಇಂಥ ನಾಯಕರ ತೇಜೋವಧೆ ಮಾಡುವ ಮಟ್ಟಿಗೆ ಕಾಂಗ್ರೆಸ್‌‍ ನಾಯಕರು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES

Latest News