ಇ-ವೀಸಾ ಸ್ವೀಕರಿಸದ ಬ್ರಿಟನ್ ಪ್ರಜೆ ದುಬೈಗೆ ವಾಪಸ್

ಇಂದೋರ್ ಫೆ .22 – ಮಧ್ಯಪ್ರದೇಶದ ಇಂದೋರ್ನ ದೇವಿ ಅಹಲ್ಯಾಬಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬ್ರಿಟಿಷ್ ಪ್ರಜೆ ಎಲೆಕ್ಟ್ರಾನಿಕ್ ವೀಸಾ ಸ್ವೀಕರಿಸದ ಕಾರಣ ದುಬೈಗೆ ವಾಪಸ್ ಕಳುಹಿಸಲಾಗಿದೆ. ಕಳೆದ ಶುಕ್ರವಾರ ಇ-ವೀಸಾದೊಂದಿಗೆ ಏರ್ ಇಂಡಿಯಾ ವಿಮಾನದ ಮೂಲಕ ದುಬೈನಿಂದ ಇಂಧೋರ್ಗೆ ಬಂದಿದ್ದರು, ಆದರೆ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಅಂತಹ ವೀಸಾಗಳಿಗೆ ಯಾವುದೇ ಕ್ಲಿಯರೆನ್ಸ್ ಕಾರ್ಯವಿಧಾನವಿಲ್ಲದ ಕಾರಣ ಏರೋಡ್ರೋಮ್ನಿಂದ ಹೊರಗೆ ಹೋಗಲು ಅನುಮತಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಆರತಕ್ಷತೆಗೆ ಮುನ್ನವೇ ನವವಿವಾಹಿತ ದಂಪತಿ ಸಾವು ಎರಡು ದಿನದ […]
ಇಂಧೋರ್ ತಲುಪಿದ ಕಾಂಗ್ರೆಸ್ ‘ಐಕ್ಯತಾ ಯಾತ್ರೆ’

ಇಂಧೋರ್, ನ.27- ಭಾರತ ಐಕ್ಯತಾ ಯಾತ್ರೆ ಮಧ್ಯಪ್ರದೇಶದ ರಾಜಧಾನಿ ಇಂಧೋರ್ಗೆ ಕಾಲಿಟ್ಟಿದೆ. ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಐದು ದಿನಗಳ ಹಿಂದೆ ಪ್ರವೇಶಿಸಿದ ಯಾತ್ರೆ ಇಂದು ರಾಜಧಾನಿಗೆ ಆಗಮಿಸಿದೆ. ಇಂದೂ ಕೂಡ ವಿವಿಧ ವರ್ಗಗಳ ಜನ ಯಾತ್ರೆಯಲ್ಲಿ ಭಾಗವಹಿಸಿದ್ದರು. ವಿಕಲಚೇತನರೊಬ್ಬರ ತ್ರಿಚಕ್ರ ವಾಹನವನ್ನು ಖುದ್ದು ರಾಹುಲ್ಗಾಂಧಿ ಸ್ವಲ್ಪ ದೂರ ತಳ್ಳುವ ಮೂಲಕ ಎಲ್ಲರ ಗಮನ ಸೆಳೆದರು. ನಿನ್ನೆ ರಾತ್ರಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹುಟ್ಟೂರಿನಲ್ಲಿ ತಂಗಿದ ಬಳಿಕ ಯಾತ್ರೆ ಪುನರಾರಂಭವಾಗಿದೆ. ಅರೆನಗರ ಪ್ರದೇಶದಿಂದ ಮುಂದುವರೆದ ಯಾತ್ರೆಗೆ ರಾಹುಬಳಿ ರೆಡ್ಕಾರ್ಫೆಟ್ ಸ್ವಾಗತ ಕೋರಲಾಯಿತು. […]
ತ್ಯಾಜ್ಯ ಸಂಸ್ಕರಣೆ ಸ್ವಾವಲಂಬನೆಯೇ ಇಂದೋರ್ ಯಶಸ್ಸಿಗೆ ಕಾರಣ
ಇಂದೋರ್, ಅ.2-ಸತತ ಆರನೇ ಬಾರಿಗೆ ಇಂದೋರ್ ದೇಶದ ನಂಬರ್ 1 ಸ್ವಚ್ಚ ನಗರವಾಗಿ ಹೊರ ಹೊಮ್ಮಲು ಆ ನಗರ ಅಳವಡಿಸಿಕೊಂಡಿರುವ ತ್ಯಾಜ್ಯ ಸಂಸ್ಕರಣಾ ನೀತಿಯೇ ಕಾರಣ ಎನ್ನುವುದು ಇದೀಗ ಬಹಿರಂಗಗೊಂಡಿದೆ. ಪ್ರತಿದಿನ 1,900 ಟನ್ ನಗರ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸುವುದರ ಜೊತೆಗೆ ಅದರಿಂದ ಉತ್ಪಾದಿಸುವ ಜೈವಿಕ ಇಂಧನವನ್ನು ಬಸ್ ಸಂಚಾರಕ್ಕೆ ಅಳವಡಿಸಿಕೊಂಡಿರುವುದರಿಂದಲೇ ಇಂದೋರ್ ದೇಶದ ಅತ್ಯಂತ ಸ್ವಚ್ಚ ನಗರಿ ಖ್ಯಾತಿಗೆ ಒಳಗಾಗಲು ಕಾರಣ ಎನ್ನುಲಾಗಿದೆ. ಇಂದೋರ್ ಅಳವಡಿಸಿಕೊಂಡಿರುವ ಈ ತ್ಯಾಜ್ಯ ನೀತಿಯನ್ನು […]