ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರು ಸಾವು, 21 ಮಂದಿಗೆ ಗಾಯ

ಭುವನೇಶ್ವರ್, ಅ. 10 – ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಿಡಿಲು ಬಡಿದು ಆಟಗಾರ ಸೇರಿ ಇಬ್ಬರು ಸಾವನ್ನಪ್ಪಿ ಸುಮಾರು 21ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಸುಂದರ್ಗಢ್ ಜಿಲ್ಲೆಯ ನುಗಾಂವ್ ಬ್ಲಾಕನ್ ಬನೆಲಾಟಾದಲ್ಲಿ ನಡೆದಿದೆ. ಮೃತರಲ್ಲಿ ಒಬ್ಬರು ಫುಟ್ಬಾಲ್ ಆಟಗಾರರಾಗಿದ್ದರೆ, ಗಾಯಗೊಂಡವರಲ್ಲಿ ಹೆಚ್ಚಿನವರು ಪ್ರೇಕ್ಷಕರು ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ ರಾಜಧಾನಿಯಿಂದ ಸುಮಾರು 350 ಕಿಮೀ ದೂರದಲ್ಲಿರುವ ನುಗಾಂವ್ನಲ್ಲಿ ಸ್ಥಳೀಯ ಕ್ಲಬ್ಗಳ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತುಆಕಾಶದಲ್ಲಿ ಮೋಡ ಕವಿದಿದ್ದರೂ ಮಳೆ ಬರುತ್ತಿರಲಿಲ್ಲ ದಿಢೀರನೆ […]
ಬಿಹಾರದಲ್ಲಿ ಸಿಡಿಲು, ಗುಡುಗು ಮಳೆಗೆ 11 ಮಂದಿ ಸಾವು
ಪಾಟ್ನಾ, ಸೆ.20- ಬಿಹಾರದ ವಿವಿಧ ಭಾಗಗಳಲ್ಲಿ ಸಿಡಿಲು ಮತ್ತು ಗುಡುಗು ಸಹಿತ ಮಳೆಯಿಂದಾಗಿ 11 ಮಂದಿ ಸಾವನ್ನಪ್ಪಿದ್ದು,ಕಳದ 2 ದಿನದಲ್ಲಿ ಪುರ್ನಿಯಾ ಮತ್ತು ಅರಾರಿಯಾದಲ್ಲಿ ತಲಾ ನಾಲ್ವರು ಮತ್ತು ಸುಪೌಲನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಜನಜೀವನ ಅಸ್ತವ್ಯಸವಾಗಿದ್ದು ಮಹಾ ಮಳೆಗೆ ಗಾಮೀಣ ಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ ಸಂತ್ರಸ್ತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿ, ಮೃತರ ಸಂಬಂಧಿಕರಿಗೆ ತಕ್ಷಣವೇ 4 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ. ಪ್ರತಿಕೂಲ ವಾತಾವರಣದಲ್ಲಿ ಜನರು ಜಾಗರೂಕರಾಗಿರಬೇಕು ಮತ್ತು […]
ಮಧ್ಯಪ್ರದೇಶದಲ್ಲಿ ಧಾರಾಕಾರ ಮಳೆ, ಸಿಡಿಲಿಗೆ 9 ಮಂದಿ ದುರ್ಮರಣ
ಭೂಪಾಲ್, ಆ.7- ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಅನಾಹುತಗಳು ಸಂಭವಿಸುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿಶಾ, ಸಟ್ನಾ ಮತ್ತು ಗುಣಾ ಜಿಲ್ಲೆಗಳಲ್ಲಿ ಆಗಸದಲ್ಲಿ ಉಂಟಾದ ಸಿಡಿಲಿನಿಂದಾಗಿ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಮರದ ಆಸರೆಗೆ ಹೋಗಿ ಜೀವ ಕಳೆದುಕೊಂಡರು: ಮಧ್ಯಪ್ರದೇಶದ ವಿಶಾ ಜಿಲ್ಲೆಯ ಅಗ್ಸೋಡ್ ಗ್ರಾಮದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಆಸರೆ ಪಡೆದಿದ್ದಾಗ ಉಂಟಾದ ಸಿಡಿಲಿಗೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕುನ್ವರ್ […]