Monday, May 6, 2024
Homeರಾಜ್ಯತೆರಿಗೆ ಸಂಗ್ರಹಕ್ಕೆ ಕಠಿಣ ಕ್ರಮ : ಡಿಕೆಶಿ

ತೆರಿಗೆ ಸಂಗ್ರಹಕ್ಕೆ ಕಠಿಣ ಕ್ರಮ : ಡಿಕೆಶಿ

ಬೆಂಗಳೂರು,ಜ.5- ಜನತಾದರ್ಶನದಲ್ಲಿ ಸ್ವೀಕಾರವಾಗುವ ಅರ್ಜಿಗಳನ್ನು ಕಾನೂನು ಚೌಕಟ್ಟಿನಲ್ಲಿ ಇತ್ಯರ್ಥಪಡಿಸಲು ಅಧಿಕಾರಿಗಳ ತಂಡ ರಚನೆ ಮಾಡುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಯಲಹಂಕದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳ 300 ಕ್ಕೂ ಹೆಚ್ಚು ಅಧಿಕಾರಿಗಳು ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಎಲ್ಲರ ಅರ್ಜಿಗಳನ್ನು ನೋಂದಣಿ ಮಾಡಿಸಿಕೊಂಡು ಉತ್ತರದಾಯಿತ್ವದ ಮೂಲಕ ಇತ್ಯರ್ಥಪಡಿಸಲಾಗುವುದು, ಪರಿಹಾರ ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಸ್ಪಷ್ಟ ಕಾರಣಗಳನ್ನು ಅರ್ಜಿದಾರರಿಗೆ ನೀಡಲಾಗುವುದು. ಜನರ ಬಳಿಗೆ ಸರ್ಕಾರ ಬರಬೇಕೆಂಬುದು ನಮ್ಮ ಆಶಯ. ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದರು.

ಅಧಿಕಾರಿಗಳು ಗೌರವ ಕೊಡುವುದಿಲ್ಲ ಎಂದಾಗ ಮಾತ್ರ ಜನರು ಜನಪ್ರತಿನಿಧಿಗಳ ಬಳಿ ಬರುತ್ತಾರೆ. ಯಾರೇ ಲಂಚ ಕೇಳಿದ್ದರೆ ಅಥವಾ ಮಧ್ಯವರ್ತಿಗಳು ಹಸ್ತಕ್ಷೇಪವಿದ್ದರೆ ಮುಲಾಜಿಲ್ಲದೆ ನನ್ನ ಬಳಿ ಹೇಳಿ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. ಆದರೆ ಸುಳ್ಳು ಮಾಹಿತಿ ನೀಡಿದರೆ ನಿಮ್ಮ ವಿರುದ್ಧವೇ ಪ್ರಕ ರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.

ರಾಜಕಾರಣದಲ್ಲಿ ಜನರೇ ದೇವರು. ಅವರು ವಿಶ್ವಾಸವಿಟ್ಟು ನೀಡಿರುವ ಅಧಿಕಾರವನ್ನು ಸದುಪ ಯೋಗಪಡಿಸಿಕೊಂಡು ನಿಮ್ಮ ಸೇವೆ ಮಾಡಲು ಪ್ರಯತ್ನಿಸುತ್ತೇವೆ. ಪ್ರತಿದಿನ ತಮ್ಮ ಮನೆ ಬಳಿ ಬರುವ ಜನರ ಸಮಸ್ಯೆ ಕೇಳಲು ರಾತ್ರಿ 2 ಗಂಟೆಯಾದರೂ ಸಮಯ ಸಾಲುವುದಿಲ್ಲ. ಹೀಗಾಗಿ ಜನರ ಬಳಿಯೇ ಹೋಗಿ ಸಮಸ್ಯೆ ಬಗೆಹರಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಉತ್ತರ ಪ್ರದೇಶ : ವಾಂಟೆಡ್ ಕ್ರಿಮಿನಲ್ ವಿನೋದ್ ಕುಮಾರ್ ಉಪಾಧ್ಯಾಯ ಎನ್‌ಕೌಂಟರ್‌

ಬೆಂಗಳೂರಿಗೆ ಅಂತಾರಾಷ್ಟ್ರೀಯ ಗುಣದರ್ಜೆಯ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಶಾಸಕರ ಬೇಡಿಕೆಗನುಗುಣವಾಗಿ ಅನುದಾನ ನೀಡಲಾಗುವುದು. ಈ ಬಾರಿ ಪಂಚಖಾತ್ರಿ ಯೋಜನೆಗಳನ್ನು 35 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಜಾರಿಗೆ ತಂದಿದ್ದೇವೆ. ಮುಂದಿನ ಬಾರಿ 55 ಸಾವಿರ ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ. ಅದರ ಹೊರತಾಗಿಯೂ ಬೆಂಗಳೂರಿಗೆ ಅಗತ್ಯ ಅನುದಾನ ನೀಡುತ್ತೇವೆ. ತೆರಿಗೆ ಸಂಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಮೊದಲು ಒಂದು ಕಟ್ಟಡದ ಲೆಕ್ಕ ತೋರಿಸಿ, 4 ಮನೆಗಳನ್ನು ನಿರ್ಮಿಸಿ ದ್ದಾರೆ.

ಇಂತಹ ತಪ್ಪು ಮಾಹಿತಿಗಳನ್ನು ಸರಿಪಡಿಸಿ, ಕ್ರಮಬದ್ಧಗೊಳಿಸಲಾಗುವುದು ಎಂದರು. ಪಂಚಖಾತ್ರಿಗಳ ಪೈಕಿ ಎಲ್ಲರಿಗೂ ಗೃಹಜ್ಯೋತಿ ದೊರೆಯುತ್ತಿದೆ. 5 ಕೆ.ಜಿ. ಅಕ್ಕಿ, 5 ಕೆ.ಜಿ.ಗೆ ಹಣ ನೀಡುತ್ತಿದ್ದೇವೆ. ಉಳಿದ 5 ಕೆ.ಜಿ. ಅಕ್ಕಿಯನ್ನು ಪೂರೈಸಲು ಟೆಂಡರ್ ಕರೆಯಲಾಗುವುದು. 5 ಲಕ್ಷ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಹಣ ತಲುಪಿಲ್ಲ. ಇದಕ್ಕೆ ಕಾರಣ ದೂರವಾಣಿ ಸಂಖ್ಯೆ ನೀಡುವಾಗ ತಾಂತ್ರಿಕ ಸಮಸ್ಯೆಯಾಗಿದೆ. ಮಹಿಳೆಯರ ಹೆಸರಿನಲ್ಲಿ ಫೋನ್ ನಂಬರುಗಳಿಲ್ಲ. ಪತಿಯ ಫೋನ್ ನಂಬರ್‍ಗಳನ್ನೇ ನೀಡಿದ್ದಾರೆ.

ಇನ್ನೂ ಕೆಲವು ಪ್ರಕರಣಗಳಲ್ಲಿ ಮಹಿಳೆಯರ ಫೋನ್ ನಂಬರ್ ಇಲ್ಲದೇ ಇದ್ದಾಗ ನೋಂದಣಿ ಮಾಡಿಸುವವರು ಕಮಿಷನ್ ಆಸೆಗಾಗಿ ತಮ್ಮ ಫೋನ್ ನಂಬರನ್ನೇ ನಮೂದಿಸಿದ್ದಾರೆ. ಇದರಿಂದಾಗಿ ಹಣ ಸಿಕ್ಕಿಲ್ಲ. ಬೆಂಗಳೂರು ನಗರದ ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ರಸ್ತೆ ಸೇರಿದಂತೆ ಗಂಭೀರ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಶಿವರಾಂ ಕಾರಂತರ ಬಡಾವಣೆ ಸೇರಿದಂತೆ ವಿವಿಧ ಲೇಔಟ್‍ಗಳ ಸಮಸ್ಯೆಗಳ ಬಗ್ಗೆ ಅರ್ಜಿಗಳು ಸಲ್ಲಿಕೆಯಾದವು. ಮಹಿಳೆಯೊಬ್ಬರು ತಮ್ಮ ಮಗನ ಮೆದುಳಿನ ಸಮಸ್ಯೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದಾಗ ಸ್ಥಳದಲ್ಲೇ 50 ಸಾವಿರ ರೂ. ನೀಡುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ರೈತ ಸಂಘದ ಮುಖಂಡರು ಆಗಮಿಸಿ ಹಸಿರು ಶಾಲು ಹೊದಿಸಿ ಯಲಹಂಕ ಕ್ಷೇತ್ರದ ಹಲವು ಸಮಸ್ಯೆಗಳನ್ನು ವಿವರಿಸಿದರು. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹಲವಾರು ವರ್ಷಗಳಿಂದ ಇಲ್ಲೇ ಠಿಕಾಣಿ ಹೂಡಿದ್ದಾರೆ. ವರ್ಗಾವಣೆಯಾದರೂ ಇಲ್ಲೇ ಉಳಿದುಕೊಂಡಿದ್ದಾರೆ. 30 ಲಕ್ಷ ಲಂಚ ಕೇಳುತ್ತಾರೆ ಎಂದು ದೂರಿದರು. ಲಂಚ ಕೇಳಿದವರ ಹೆಸರನ್ನು ಬರೆದುಕೊಡುವಂತೆ ಸೂಚಿಸಿದರು.

ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಅದಾನಿ

ನಿವೇಶನ, ಹಕ್ಕುಪತ್ರಗಳಿಗಾಗಿ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾದವು. ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಕಂದಾಯ ಸಚಿವ ಕೃಷ್ಣಭೈರೇಗೌಡ, ಯಲಹಂಕ ಶಾಸಕರಾದ ಎಸ್. ಆರ್.ಶ್ರೀನಿವಾಸ್, ದಾಸರಹಳ್ಳಿಯ ಮುನಿರಾಜು, ವಿಧಾನಸಭೆ ಸದಸ್ಯ ಎಂ.ಆರ್.ಸೀತಾರಾಮು, ಯೋಜನಾ ಆಯೋಗದ ಉಪಾಧ್ಯಕ್ಷ ರಾಜೀವ್‍ಗೌಡ, ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಾಕಾರಿ ರಾಕೇಶ್‍ಸಿಂಗ್, ಬಿಡಿಎ ಆಯುಕ್ತ ಜಯರಾಂ ಸೇರಿದಂತೆ ಹಲವು ಅಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News