Sunday, April 28, 2024
Homeಜಿಲ್ಲಾ ಸುದ್ದಿಗಳುಕೇಸರಿ ಧ್ವಜ, ರಾಮನ ಫ್ಲೆಕ್ಸ್‌ಗಳನ್ನು ಸ್ಮಶಾನಕ್ಕೆ ಎಸೆದ ಗ್ರಾ.ಪಂ. ಸಿಬ್ಬಂದಿ ವಿರುದ್ಧ ಆಕ್ರೋಶ

ಕೇಸರಿ ಧ್ವಜ, ರಾಮನ ಫ್ಲೆಕ್ಸ್‌ಗಳನ್ನು ಸ್ಮಶಾನಕ್ಕೆ ಎಸೆದ ಗ್ರಾ.ಪಂ. ಸಿಬ್ಬಂದಿ ವಿರುದ್ಧ ಆಕ್ರೋಶ

ಕೋಲಾರ, ಮಾ.17- ನೀತಿ-ಸಂಹಿತೆ ಹೆಸರಿನಲ್ಲಿ ಮನೆ ಮೇಲೆ ಕಟ್ಟಿದ್ದ ಕೇಸರಿ ಬಾವುಟ ಹಾಗೂ ವಿವಿಧೆಡೆ ಹಾಕಿದ್ದ ಶ್ರೀರಾಮನ ಫ್ಲೆಕ್ಸ್‌ಗಳನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಕಿತ್ತು ಸ್ಮಶಾನದಲ್ಲಿ ಎಸೆದಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಹಡಗಲ್ನಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಘಟನೆ ಖಂಡಿಸಿ ಕೆಲ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಪಿಡಿಒ ಹಿಜಾಜ್ ಪಾಷ ಕೋಮು ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ದಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿ ಬಾವುಟಗಳನ್ನೆಲ್ಲ ಸ್ಥಳಾಂತರಿಸಿದ್ದಾರೆ. ಈ ದುಷ್ಕøತ್ಯ ಎಸಗಿರುವ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕು ಮತ್ತು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

Latest News