Friday, May 3, 2024
Homeರಾಷ್ಟ್ರೀಯಟಿಕೆಟ್ ನೀಡಿದ್ದಕ್ಕೆ ವಸುಂಧರಾ ರಾಜೆ ಹರ್ಷ

ಟಿಕೆಟ್ ನೀಡಿದ್ದಕ್ಕೆ ವಸುಂಧರಾ ರಾಜೆ ಹರ್ಷ

ಜೈಪುರ,ಅ.22- ಬಿಜೆಪಿ ಎರಡನೆ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅರಸ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದುವರೆಗೂ ವಸುಂಧರಾ ಅವರಿಗೆ ಟಿಕೆಟ್ ನಿರಾಕರಣೆ ಮಾಡಬಹುದು ಎಂದೇ ಎಲ್ಲರೂ ಭಾವಿಸಿದ್ದರೂ ಆದರೆ ವರಿಷ್ಠರು ಅವರಿಗೆ ಝಲ್ರಾಪಟನ್ ಕ್ಷೇತ್ರದಿಂದ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ತಮಗೆ ಟಿಕೆಟ್ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ವಸುಂಧರಾ ಅವರು ಎಕ್ಸ್ ನಲ್ಲಿ ಅವರು ಮೋದಿ ಹಾಗೂ ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಝಲ್ರಾಪತನ್‍ನ ವಿಧಾನಸಭಾ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಒಟ್ಟಾಗಿ ನಾವು ದಾಖಲೆಯ ವಿಜಯವನ್ನು ದಾಖಲಿಸುತ್ತೇವೆ, ಜೈ-ಜೈ ರಾಜಸ್ಥಾನ! ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಹಮಾಸ್-ಇಸ್ರೇಲ್ ಮಾದರಿ ಯುದ್ಧವನ್ನು ಭಾರತ ಕಂಡಿಲ್ಲ : ಭಾಗವತ್

ನವೆಂಬರ್ 25 ರ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿತು, ಝಲ್ರಾಪಟನ್ ಕ್ಷೇತ್ರದಿಂದ ಸದನದಲ್ಲಿ ಹೊಸ ಅವಧಿಯನ್ನು ಪಡೆಯಲು ರಾಜೇ ಟಿಕೆಟ್ ಪಡೆದುಕೊಂಡರು.

ಪಕ್ಷವು ತನ್ನ ಎರಡನೇ ಪಟ್ಟಿಯಲ್ಲಿ 83 ಅಭ್ಯರ್ಥಿಗಳನ್ನು ಘೋಷಿಸಿದ್ದು, ಬಿಜೆಪಿಯ ಮಾಜಿ ರಾಜಸ್ಥಾನ ಅಧ್ಯಕ್ಷ ಸತೀಶ್ ಪುನಿಯಾ ಸೇರಿದಂತೆ ಕೆಲವು ಪ್ರಮುಖ ಹೆಸರುಗಳನ್ನು ಅಂಬರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

RELATED ARTICLES

Latest News