Wednesday, September 10, 2025
Homeರಾಷ್ಟ್ರೀಯ | Nationalಸುರಂಗಕ್ಕೆ ನುಗ್ಗಿದ ಮಳೆ ನೀರು, ಕೊಂಕಣ್ ರೈಲು ಮಾರ್ಗ ಬಂದ್

ಸುರಂಗಕ್ಕೆ ನುಗ್ಗಿದ ಮಳೆ ನೀರು, ಕೊಂಕಣ್ ರೈಲು ಮಾರ್ಗ ಬಂದ್

ಪಣಜಿ, ಜು. 10 (ಪಿಟಿಐ)- ರೈಲ್ವೆ ಹಳಿಗೆ ನೀರು ನುಗ್ಗಿರುವ ಪರಿಣಾಮ ಕೊಂಕಣ್ ರೈಲು ಮಾರ್ಗದ ಪ್ರಯಾಣ ರದ್ದುಗೊಳಿಸಲಾಗಿದೆ. ಗೋವಾದ ಪೆರ್ನೆಮ್ನಲ್ಲಿ ಸುರಂಗದೊಳಗೆ ನೀರು ನಿಂತಿದ್ದರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಇಂದು ಬೆಳಿಗ್ಗೆ ಸಂಚಾರ ಮತ್ತೆ ಸ್ಥಗಿತಗೊಂಡಿದ್ದು, ಕೆಲವು ರೈಲುಗಳ ರದ್ದತಿ ಮತ್ತು ಮಾರ್ಗ ಬದಲಾವಣೆಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧುರೆ-ಪೆರ್ನೆಮ್ ವಿಭಾಗದ ನಡುವಿನ ಪೆರ್ನೆಮ್ ಸುರಂಗದಲ್ಲಿ ನೀರು ಹರಿಯುತ್ತಿರುವುದರಿಂದ ನಿನ್ನೆ ಮಧ್ಯಾಹ್ನ 2.35 ರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಕೊಂಕಣ ರೈಲ್ವೆ ನಿಗಮ (ಕೆಆರ್ಸಿಎಲ್) ಉಪ ಪ್ರಧಾನ ವ್ಯವಸ್ಥಾಪಕ ಬಾಬನ್ ಘಾಟ್ಗೆ ತಿಳಿಸಿದ್ದಾರೆ.

ತಡರಾತ್ರಿ 10.13ಕ್ಕೆ ನೀರಿನ ಬವಣೆ ನೀಗಿಸಿ ಸಂಚಾರ ತೆರವು ಮಾಡಲಾಯಿತು ಎಂದರು. ಆದಾಗ್ಯೂ, ಅದೇ ಸಮಸ್ಯೆ ಇಂದು ಮುಂಜಾನೆ 2.59 ಕ್ಕೆ ಹೆಚ್ಚಿನ ತೀವ್ರತೆ ಪಡೆದುಕೊಂಡಿದ್ದರಿಂದ ಮತ್ತೆ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಕೆಆರ್ಸಿಎಲ್ ಹೊರಡಿಸಿದ ಬುಲೆಟಿನ್ ಪ್ರಕಾರ, 10104 ಮಾಂಡೋವಿ ಎಕ್ಸ್ ಪ್ರೆಸ್ (ಮಾಂಡೋವಿಯಿಂದ ಮುಂಬೈಗೆ), 50108 ಮಾರ್ಗಾವೊದಿಂದ ಸಾವಂತವಾಡಿ (ಮಹಾರಾಷ್ಟ್ರ) ಪ್ಯಾಸೆಂಜರ್ ರೈಲು, 22120 ಮಾರ್ಗಾವೊದಿಂದ ಮುಂಬೈ ತೇಜಸ್ ಎಕ್ಸ್ ಪ್ರೆಸ್, 12052 ಜನಶಾತಾಬಡಿಯಿಂದ ಮುಂಬೈ ಮಾರ್ಗಾವೊ ರೈಲುಗಳನ್ನು ರದ್ದುಗೊಳಿಸಲಾಗಿದೆ.

19577 ತಿರುನೆಲ್ವೇಲಿ-ಜಾಮ್ನಗರ ಎಕ್ಸ್ ಪ್ರೆಸ್, 16336 ನಾಗರ್ಕೋಯಿಲ್-ಗಾಂಧಿಧಾಮ್ ಎಕ್ಸ್ ಪ್ರೆಸ್, 12283 ಎರ್ನಾಕುಲಂ-ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್, 22655 ಎರ್ನಾಕುಲಂ-ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ಮತ್ತು 16346 ತಿರುವನಂತಪುರಂ ಸೆಂಟ್ರಲ್ ಎಕ್ಸ್ ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

RELATED ARTICLES

Latest News