Saturday, May 18, 2024
Homeಜಿಲ್ಲಾ ಸುದ್ದಿಗಳುಭಾರಿ ಮಳೆಯಾರ್ಭಟಕ್ಕೆ ಮಹಿಳೆ ಹಾಗೂ 20 ಕುರಿಗಳು ಸಾವು

ಭಾರಿ ಮಳೆಯಾರ್ಭಟಕ್ಕೆ ಮಹಿಳೆ ಹಾಗೂ 20 ಕುರಿಗಳು ಸಾವು

ಹೊಸಕೋಟೆ,ಮೇ.4- ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ವರುಣ ತಂಪೆರೆದಿದ್ದು, ಆದರೆ ಮಳೆಯಾರ್ಭಟಕ್ಕೆ ಕುರಿಗಾಹಿ ಮಹಿಳೆ ಹಾಗೂ 20 ಕುರಿಗಳು ಸಿಡಿಲಿಗೆ ಬಲಿಯಾಗಿರುವ ಘಟನೆ ತಾಲೂಕಿನ ಗಣಗಲು ಗ್ರಾಮದಲ್ಲಿ ನಡೆದಿದೆ.ರತ್ನಮ್ಮ(55) ಮೃತಪಟ್ಟ ಮಹಿಳೆ.

ತಾಲೂಕಿನ ಕಸಬಾಹೋಬಳಿಯಗಣಗಲು ಗ್ರಾಮದಲ್ಲಿ ನೆನ್ನೆ ಮಧ್ಯಾಹ್ನ ಸುರಿದ ವರ್ಣನಾರ್ಭಟಕ್ಕೆ ಸಾಕಷ್ಟು ಅನಾವೃಷ್ಟಿ ಅವಾಂತರಗಳು ಸೃಷ್ಟಿ ಮಾಡಿದ್ದು ಹೊಸಕೋಟೆ ನಗರದ ಸುತ್ತಮುತ್ತಲಿನ ಕಡೆಗಳಲ್ಲಿ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದು ತೊಂದರೆ ಉಂಟು ಬಿರುಗಾಳಿಸಿಡಿಲು ಮಳೆ ಸಹಿತ ಮಳೆ ಸುರಿದಿದೆ.

ರತ್ನಮ್ಮ ಕುರಿಗಳನ್ನು ಮೇಯಿಸಲು ಹೊಲದತ್ತ ತೆರಳಿದ್ದು, ಈ ವೇಳೆ ಗುಡುಗು ಸಿಡಿಲು ಸಹಿತ ಮಳೆ ಪ್ರಾರಂಭವಾಗಿದೆ. ರಕ್ಷಣೆಗಾಗಿ ಮಹಿಳೆ ಮರದ ಕೆಳಗೆ ನಿಂತಿದ್ದರು. ಆಗ ಜೋರಾಗಿ ಸಿಡಿಲು ಬಡಿದ ಪರಿಣಾಮ ಮಹಿಳೆ ಸೇರಿದಂತೆ ಸ್ಥಳದಲ್ಲೇ ಮೇಕೆ ಮತ್ತು ಕುರಿಗಳು ಸಾವಿಗೀಡಾಗಿವೆ. ಈ ಸಂಬಂಧ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

RELATED ARTICLES

Latest News