Thursday, May 2, 2024
Homeರಾಜ್ಯಧೈರ್ಯ ಮತ್ತು ದಕ್ಷತೆಯೇ ಪ್ರತಿಮಾ ಪ್ರಾಣಕ್ಕೆ ಮುಳುವಾಯ್ತಾ..?

ಧೈರ್ಯ ಮತ್ತು ದಕ್ಷತೆಯೇ ಪ್ರತಿಮಾ ಪ್ರಾಣಕ್ಕೆ ಮುಳುವಾಯ್ತಾ..?

ಬೆಂಗಳೂರು,ನ.5- ಪ್ರತಿಮಾ ಅವರು ಧಕ್ಷ ಹಾಗೂ ಧೈರ್ಯವಂತ ಅಕಾರಿಯಾಗಿದ್ದರು. ಅವರ ಸಾವು ನಿಜಕ್ಕೂ ಆಘಾತ ತಂದಿದೆ ಎಂದು ಬೆಂಗಳೂರು ನಗರ ಜಿಲ್ಲಾಕಾರಿ ದಯಾನಂದ್ ತಿಳಿಸಿದ್ದಾರೆ. ಇಂದು ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರದ ಬಳಿ ಮನೆಯಲ್ಲಿ ಕೊಲೆಯಾದ ಪ್ರತಿಮಾ ಅವರ ನಿವಾಸಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಗಣಿಗಾರಿಕೆ ವಿಭಾಗದಲ್ಲಿ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅಕ್ರಮಗಳನ್ನು ತಡೆಯುವುದು ಮತ್ತು ಪರಿಸರ ಸಂರಕ್ಷಣೆ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಮಾ ಅವರು ನಿರ್ಭೀತಿಯಿಂದ ಕೆಲಸ ಮಾಡಿದ್ದರು ಎಂದು ತಿಳಿಸಿದ್ದಾರೆ.

ಸಾವಯವ ಕೃಷಿಯಾಯ್ತು ಈಗ ಅಡುಗೆಗೂ ಸಾವಯವ

ರಾಮನಗರದಲ್ಲಿ ಕೆಲಸ ಮಾಡಿ ಸುಮಾರು ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಕುರಿತಂತೆ ಅಕಾರಿಗಳ ಸಭೆ ನಡೆಸಲಾಗಿತ್ತು ಅಲ್ಲಿ ಅವರು ಭಾಗವಹಿಸಿದ್ದರು. ಎಲ್ಲರಿಗೂ ಅಕ್ರಮ ಗಣಿಗಾರಿಕೆ ತಡೆಯುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅವರು ಪ್ರಕರಣವೊಂದರಲ್ಲಿ ತನಿಖೆ ನಡೆಸಿ ನನಗೆ ವರದಿ ನೀಡಿದ್ದರು ಎಂದು ತಿಳಿಸಿದ್ದಾರೆ.

ಪ್ರತಿಮಾ ಅವರಿಗೆ ಕೆಲಸದ ವೇಳೆ ಯಾರಾದರೂ ಅಡಚಣೆ ಉಂಟು ಮಾಡಿದ್ದಾರಾ? ಬೆದರಿಕೆ ಹಾಕಿದ್ದರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಕಾರಿಗಳು, ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕೆಲವರು ಅಡ್ಡಿಪಡಿಸುತ್ತಾರೆ ಆದರೆ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ಪೊಲೀಸರು ಎಲ್ಲ ಹಂತದಲ್ಲೂ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚುತ್ತಾರೆ ಶಿಕ್ಷೆಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News