Tuesday, May 21, 2024
Homeರಾಷ್ಟ್ರೀಯತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಮಾಲ್ಡೀವ್ಸ್

ತಮಿಳುನಾಡಿನ 12 ಮೀನುಗಾರರನ್ನು ಬಂಧಿಸಿದ ಮಾಲ್ಡೀವ್ಸ್

ತೂತುಕುಡಿ(ತಮಿಳುನಾಡು). ಅ.28- ಮೀನುಗಾರಿಕೆಗೆ ತೆರಳಿದ್ದ ವೇಳೆ ಮಾಲ್ಡೀವ್ಸ್ ನ ಜಲಪ್ರದೇಶಕ್ಕೆ ತೆರಳಿದ ತಮಿಳುನಾಡಿನ ಮೀನುಗಾರರನ್ನು ಮಾಲ್ಡೀವ್ಸ್ ನ ಕರಾವಳಿ ಕಾವಲು ಪಡೆ ಅಧಿಕಾರಿಗಳು ಬಂಧಿಸಿದ್ದಾರೆ. ಒಟ್ಟು 12 ಮೀನುಗಾರರನ್ನು ಬಂಸಿದ್ದು, 1.5 ಕೋಟಿ ಮೌಲ್ಯದ ಬಾರ್ಜ್ (ದೋಣಿ)ನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಒಂದು ವಾರದ ಹಿಂದೆ ಮೀನುಗಾರರನ್ನು ಬಂಧಿಸಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಲ್ಡೀವ್ಸ್ ಸರ್ಕಾರವ ಇದೇ ಮೊದಲ ಬಾರಿಗೆ ತಮಿಳುನಾಡು ಮೀನುಗಾರರನ್ನು ಬಂಧಿಸಿದೆ. ಬಂಧನಕ್ಕೊಳಗಾಗಿರುವವರನ್ನು ರಾಮೇಶ್ವರಂನ ಉದಯಕುಮಾರ್ (31), ತೂತುಕುಡಿಯ ವೆಂಬಾನರ್ ಮೈಕೆಲ್ ರಾಜ್ (21), ಆಂಟನಿ ಅನ್ಸೆಲ್ ಕ್ರಿಸ್ಟೋಫರ್ (22), ಆದಿಶಯ ಪರಲೋಕಧಿ ೀರವಿಯಂ (25 ), ಮಧುರೈನ ಮಾಧೇಶ್ ಕುಮಾರ್ (15), ಆಂಟೋನಿ ಸೆಲ್ವಶೇಖರನ್ (23), ಆದಿ ನಾರಾಯಣನ್ (20), ಮಹೇಶ್ ಕುಮಾರ್ (24) , ಅನ್ಬು ಸೂಸೈ ಮೈಕಲ್ (48), ವಿಘ್ನೇಶ್ (31) ಮತ್ತು ಮಣಿ ಶಕ್ತಿ ಎಂದು ಗುರುತಿಸಲಾಗಿದೆ.

ಬಂಧಿತರು ಅ.1ರಂದು ತೂತುಕುಡಿ ಸಮೀಪದ ತರುವೈಕುಲಂ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ತೆರಳಿದ್ದರು. ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಬಂಧನಕ್ಕೊಳಗಾಗಿರುವ ಮೀನುಗಾರ ಆದಿ ನಾರಾಯಣ್ ತಾಯಿ ವಿಜಯಲಕ್ಷ್ಮಿ, ಅ.1ರಂದು ಅವರು ಮೀನು ಹಿಡಿಯಲು ಆಳ ಸಮುದ್ರಕ್ಕೆ ತೆರಳಿದ್ದರು. ಮೀನು ಹಿಡಿಯುವ ಸಂದರ್ಭ ಮಾಲ್ಡೀವ್ಸ್ ನ ಜಲಪ್ರದೇಶಕ್ಕೆ ತೆರಳಿದ್ದ ಅವರನ್ನು ಅಲ್ಲಿನ ಕೋಸ್ಟ ಗಾರ್ಡ್ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಬಗ್ಗೆ ಮಹಿಳೆಯೊಬ್ಬರು ಕರೆ ಮಾಡಿ, ನಿಮ್ಮ ಮಗ ಸುರಕ್ಷಿತವಾಗಿದ್ದಾನೆ. ನಮ್ಮ ಪರಿಶೀಲನೆ ನಡೆದ ಕೂಡಲೇ ಅವರನ್ನು ಮರಳಿ ತಾಯ್ನಾಡಿಗೆ ಕಳುಹಿಸಲಾಗುವುದು. ಆದರೆ, ಯಾವಾಗ ಕಳುಹಿಸಲಾಗುವುದು ಎಂದು ಮಹಿಳೆ ಹೇಳಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಈ ಕೂಡಲೇ ಬಂಧಿತರಾಗಿರುವ ಮೀನುಗಾರರನ್ನು ಭಾರತಕ್ಕೆ ತರಬೇಕು ಎಂದು ವಿಜಯಲಕ್ಷ್ಮಿ ಒತ್ತಾಯಿಸಿದರು.

2 ತಿಂಗಳಲ್ಲಿ 300 ಕೋಟಿ ಮೌಲ್ಯದ ಮಾದಕವಸ್ತು ವಶ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೀನುಗಾರಿಕಾ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ಪುಗಳ್ ಸೆಲ್ವಮಣಿ, ಕಳೆದ ಅ.1ರಂದು 12 ಮಂದಿ ಮೀನುಗಾರರು ಇಲ್ಲಿನ ತರುವೈಕುಲಂ ಮೀನುಗಾರಿಕಾ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಅ.20ರಂದು ಮಾಲ್ಡೀವ್ಸ್ ನ ಕರಾವಳಿ ಕಾವಲು ಪಡೆ ಮೀನುಗಾರರನ್ನು ಬಂಸಿದೆ. ಕೇಂದ್ರ ಸರ್ಕಾರಕ್ಕೆ ಈ ವಿಷಯ ಅ.27ಕ್ಕೆ ಗೊತ್ತಾಗಿದೆ. ಅಲ್ಲಿ ಮೀನುಗಾರರಿಗೆ ಹಿಂಸೆ ನೀಡಲಾಗುತ್ತಿದೆ. ಆದರೆ ಹಿಂಸೆ ನೀಡಿಲ್ಲ ಎಂದು ಅಲ್ಲಿನ ಅಕಾರಿಗಳು ಹೇಳುತ್ತಿದ್ದಾರೆ ಎಂದರು.

ಬಂಧನದ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಮಿಳುನಾಡು ಮೀನುಗಾರಿಕಾ ಸಚಿವೆ ಅನಿತಾ ಆರ್. ರಾಧಾಕೃಷ್ಣನ್, ಮೀನುಗಾರಿಕಾ ಇಲಾಖೆ ಅಕಾರಿಗಳು, ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಮಾಹಿತಿ ನೀಡಿದ್ದೇವೆ. ಅವರು ಮೀನುಗಾರರನ್ನು ಕರೆತರುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳ ಹಿಂದೆ ತಮಿಳುನಾಡು ಮೀನುಗಾರನ್ನು ಬಂಧಿಸಿದ್ದ ಮಾಲ್ಡೀವ್ಸ್ ಸರ್ಕಾರ ಅವರ ಪರವಾನಗಿಯನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಿತ್ತು. ಆದರೆ ಇದೀಗ ಭಾರತ ಸರ್ಕಾರ ಮತ್ತು ಮಾಲ್ಡೀವ್ಸ್ ಸರ್ಕಾರ ನಡುವಿನ ಅಂತಾರಾಷ್ಟ್ರೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆ ಮೊದಲ ಬಾರಿಗೆ ಮೀನುಗಾರನ್ನು ಬಂಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಮೀನುಗಾರರ ಒಕ್ಕೂಟದ ಅಂಥೋನಿ ಜಯಬಾಲನ್ ಸೇರಿದಂತೆ ಒಕ್ಕೂಟದ ಸದಸ್ಯರು ಮಾಲ್ಡೀವ್ಸ ಗೆ ತೆರಳಿದ್ದಾರೆ.

RELATED ARTICLES

Latest News