Homeಇದೀಗ ಬಂದ ಸುದ್ದಿವಿಪಕ್ಷ ನಾಯಕ ನೇಮಕ ವಿವಾದ: ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ಕೋಲ್ಕತ್ತಾ ಹೈಕೋರ್ಟ್‌

ವಿಪಕ್ಷ ನಾಯಕ ನೇಮಕ ವಿವಾದ: ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ಕೋಲ್ಕತ್ತಾ ಹೈಕೋರ್ಟ್‌

ಕೋಲ್ಕತ್ತಾ, ಜೂನ್‌ 18: ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್‌ ರಥೀಂದ್ರ ಬೋಸ್‌‍ ಅವರು ಟಿಎಂಸಿಯ ಭಿನ್ನಮತೀಯ ಗುಂಪಿನ ಶಾಸಕ ರಿತಬ್ರತ ಬ್ಯಾನರ್ಜಿ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಿರುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲು ಕೋಲ್ಕತ್ತಾ ಹೈಕೋರ್ಟ್‌ ನಿರಾಕರಿಸಿದೆ. ಟಿಎಂಸಿ ಶಾಸಕ ಸೋಭನ್‌ದೇವ್‌‍ ಚಟರ್ಜಿ ಅವರು ತಮ್ಮ ನಾಮನಿರ್ದೇಶನವನ್ನು ತಿರಸ್ಕರಿಸಿ, ರಿತಬ್ರತ್‌ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರಾಗಿ ನೇಮಕ ಮಾಡಿದ ಸ್ಪೀಕರ್‌ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ರಾವ್‌ಅವರು, ಸ್ಪೀಕರ್‌ ನಿರ್ಧಾರಕ್ಕೆ ತಡೆ ನೀಡುವಂತೆ ಅರ್ಜಿದಾರರು ಕೋರಿದ್ದ ಮಧ್ಯಂತರ ಆದೇಶವನ್ನು ನಿರಾಕರಿಸಿದರು. ಅಲ್ಲದೆ, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ನಿಗದಿಪಡಿಸಿದರು. ಅರ್ಜಿಯಲ್ಲಿನ ಪ್ರತಿವಾದಿಗಳಿಗೆ ಮೂರು ವಾರಗಳೊಳಗೆ ಪ್ರಮಾಣಪತ್ರ (ಅಫಿಡವಿಟ್‌‍) ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ನಂತರದ ಎರಡು ವಾರಗಳಲ್ಲಿ ಅರ್ಜಿದಾರರು ಆ ಪ್ರಮಾಣಪತ್ರಗಳಿಗೆ ಉತ್ತರ ಸಲ್ಲಿಸಲು ಅವಕಾಶ ನೀಡಲಾಗಿದೆ.

ಭಿನ್ನಮತೀಯ ಟಿಎಂಸಿ ಗುಂಪು ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು 80 ಟಿಎಂಸಿ ಶಾಸಕರ ಪೈಕಿ 58 ಶಾಸಕರ ಬೆಂಬಲ ತಮ ಪರವಿದೆ ಎಂದು ಹೇಳಿಕೊಂಡಿದೆ. ನೇತೃತ್ವದ ಗುಂಪಿಗೆ ಸೇರಿದ ಸೋಭನ್‌ದೇವ್‌‍ ಚಟರ್ಜಿ ಅವರು, 18ನೇ ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಅಧಿವೇಶನ ನಾಳೆ ಆರಂಭವಾಗಲಿರುವುದರಿಂದ ತುರ್ತು ಮಧ್ಯಂತರ ಆದೇಶ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು.ಆದರೆ ಹೈಕೋರ್ಟ್‌ ತಕ್ಷಣದ ಮಧ್ಯಪ್ರವೇಶಕ್ಕೆ ನಿರಾಕರಿಸಿದ್ದು, ಪ್ರಕರಣದ ಸವಿಸ್ತಾರ ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

RELATED ARTICLES

Latest News