Homeರಾಜ್ಯಮನೆ ಮನೆಗೆ ತೆರಳಿ ಶಾಶ್ವತ ನಿವಾಸ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ ವಿತರಿಸುವ ಅಭಿಯಾನಕ್ಕೆ ಸಿಎಂ...

ಮನೆ ಮನೆಗೆ ತೆರಳಿ ಶಾಶ್ವತ ನಿವಾಸ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ ವಿತರಿಸುವ ಅಭಿಯಾನಕ್ಕೆ ಸಿಎಂ ಚಾಲನೆ

CM launches door-to-door distribution of permanent residence certificates and caste certificates

ಬೆಂಗಳೂರು, ಜು.20- ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ಪೂರಕವಾಗಿ ಶಾಶ್ವತ ನಿವಾಸ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರಗಳನ್ನು ಮನೆ ಮನೆಗೆ ತೆರಳಿ ವಿತರಿಸುವ ಅಭಿಯಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಚಾಲನೆ ನೀಡಿದರು.

ವಿಧಾನಸೌಧದ ಸಮೇಳನ ಸಭಾಂಗಣದಲ್ಲಿಂದು ಆನ್‌ಲೈನ್‌ ಸೇವೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಚುನಾವಣಾ ಆಯೋಗ ಸಮತಿಸಿರುವ ಖಾಯಂ ನಿವಾಸಿ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರಗಳನ್ನು ಉಚಿತವಾಗಿ ಮನೆ ಮನೆಗೆ ತೆರಳಿ ನೀಡಲಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಯಾವ ರಾಜ್ಯದಲ್ಲೂ ಮನೆ ಮನೆಗೆ ತೆರಳಿ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲ. ಆದರೆ ನಮ ಸರ್ಕಾರ ಪ್ರತಿಯೊಬ್ಬರು ಬದುಕನ್ನು ಸುಧಾರಿಸುವ ಕೆಲಸ ಮಾಡುತ್ತಿದೆ ಎಂದರು.ದೇವರಾಜು ಅರಸು ಕಾಲದಲ್ಲಿ ಭೂಮಿ ಹಕ್ಕು ನೀಡಲಾಗಿತ್ತು. ಎಸ್‌‍.ಎಂ.ಕೃಷ್ಣ ಅವಧಿಯಲ್ಲಿ ಭೂಮಿ ಯೋಜನೆಯಡಿ ಪಹಣಿ ನೀಡಲಾಗಿದೆ. ತಾವು ಮೊದಲಿನಿಂದಲೂ ನಿಮ ಮತ ನಿಮ ಹಕ್ಕು ಎಂದು ಹೇಳುತ್ತಾ ಬಂದಿದ್ದೇನೆ ಎಂದರು.

ಖಾಯಂ ವಾಸ ಪ್ರಮಾಣಪತ್ರ ಅಥವಾ ಜಾತಿ ಪ್ರಮಾಣಪತ್ರಗಳನ್ನು ನೀಡಲು ಏಕಾಏಕಿ ನಿರ್ಧಾರ ಮಾಡಿಲ್ಲ, ಲಭ್ಯವಿರುವ ನಿಯಮಗಳನ್ನು ಪರಿಶೀಲಿಸಲಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಗಳ ಜೊತೆ ಚರ್ಚಿಸಿ ಅವರು ನೀಡಿದ ನಿದೇರ್ಶನದ ಅನುಸಾರವೇ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ವಿರೋಧ ಪಕ್ಷಗಳ ಸ್ನೇಹಿತರು ಅನಗತ್ಯವಾದ ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಉರುಳಿಲ್ಲ. ನಾವು ಯಾವುದೇ ರೀತಿಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ದರೆ ಸರ್ಕಾರದ ಸೌಲಭ್ಯಗಳು ಇಲ್ಲವಾಗುತ್ತವೆ. ಹೀಗಾಗಿ ಪ್ರತಿಯೊಬ್ಬರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂದಾಗಬೇಕು. ಅದಕ್ಕೆ ಬೇಕಾದ ದಾಖಲಾತಿಗಳನ್ನು ಸರ್ಕಾರ ಒದಗಿಸುತ್ತದೆ ಎಂದು ತಿಳಿಸಿದರು.

ಪ್ರಮಾಣ ಪತ್ರಗಳನ್ನು ಭೌತಿಕವಾಗಿಯಾದರೂ ಪಡೆದುಕೊಳ್ಳಬಹುದು ಅಥವಾ ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಎಂದು ವಿವರಿಸಿದರು.ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಎಸ್‌‍ಐಆರ್‌ ನಡೆಸುತ್ತಿದೆ. ಅದಕ್ಕೆ ಸಹಾಯವಾಗುವಂತೆ ದಾಖಲೆ ನೀಡಲು ನಮ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಜನರ ಸೇವೆಗಾಗಿ ಕಾರ್ಯಕ್ರಮ ನೀಡುತ್ತಿದೆ ಎಂದು ಹೇಳಿದರು.

ಶಾಶ್ವತ ನಿವಾಸಿ ಪ್ರಮಾಣ ಪತ್ತ ನೀಡಲು 11 ಮಾನದಂಡಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಜಾತಿ ಪ್ರಮಾಣ ಪತ್ರವನ್ನೂ ನೀಡುತ್ತಿದ್ದೇವೆ. ಉದ್ಯೋಗ, ವಿವಾಹ ಪರಿಶೀಲಿಸುತ್ತೇವೆ. ರಾಜ್ಯದಲ್ಲಿ 10 ವರ್ಷ ವಾಸ ಮಾಡಿರಬೇಕು. ಕರ್ನಾಟಕದಲ್ಲೇ ಜನಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.

ಮನೆಮನೆಗೆ ಭೇಟಿ ದಾಖಲೆಗಳನ್ನ ಸಲ್ಲಿಸುತ್ತೇವೆ. ಸಾರ್ವಜನಿಕರು ಕಚೇರಿ ಅಲೆದಾಟಕ್ಕೆ ಬ್ರೇಕ್‌ ಹಾಕುತ್ತಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲಿ 2.3 ಕೋಟಿ ಅನುಸೂಚಿತ ಜಾತಿ ಮತ್ತು ಪಂಗಡಗಳ ಪ್ರಮಾಣಾ ಪತ್ರಗಳಿವೆ. ಸಾಮಾನ್ಯಜಾತಿಗಳು 1.8 ಕೋಟಿ ಪ್ರಮಾಣ ಪತ್ರ ಇವೆ. ಒಟ್ಟು ರಾಜ್ಯದಲ್ಲಿ 4.85 ಕೋಟಿ ಜನರಿಗೆ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದು ಹೇಳಿದರು.

ವಾಸ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ವೆಬ್‌ ಸೈಟ್‌ ಮೂಲಕ ಉಚಿತವಾಗಿ ಡೌನ್‌ ಲೋಡ್‌ ಮಾಡಿಕೊಳ್ಳಬಹುದು. ನಾಗರೀಕ ಸೌಲಭ್ಯ ಕೇಂದ್ರಗಳಿಂದಲೂ ಸಹಾಯ ಪಡೆಯಬಹುದು. ನೇರವಾಗಿಯೂ ಪ್ರಮಾಣ ಪತ್ರ ಪಡೆಯಬಹುದು, ಗ್ರಾಮ ಒನ್‌, ಬಾಪೂಜಿ ಸೇವಾ ಕೇಂದ್ರಗಳಿಂದ ಪಡೆಯಬಹುದು ಎಂದು ಹೇಳಿದರು. ದೂರುಗಳಿದ್ದರೆ ಸಕ್ಷಮ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಬಹುದು. ಅವುಗಳನ್ನು ತಹಸೀಲ್ದಾರ್‌, ಉಪತಹಸೀಲ್ದಾರ್‌ ಗಮನಿಸುತ್ತಾರೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ಮೇಲನವಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ವಾಸ ಪ್ರಮಾಣ ಪತ್ರ ಪಡೆಯಲು ಕರ್ನಾಟಕದಲ್ಲಿಯೇ ಜನಿಸಿರಬೇಕು, ಸಾಮಾನ್ಯ ವಾಸಸ್ಥಳ ತಂದೆ, ತಾಯಿ ಇಲ್ಲಿ 10 ವರ್ಷ ಇರಬೇಕು. ಅರ್ಜಿದಾರರು ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ ಶಿಕ್ಷಣ ಪಡೆದಿರಬೇಕು. ಪೋಷಕರು, ಸಂಗಾತಿ ವಾಸಸ್ಥಳ ಇಲ್ಲಿರಬೇಕು. ಇಲ್ಲಿ ವಸತಿ, ಸ್ತಿರಾಸ್ಥಿ ಹೊಂದಿದ್ದರು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು.

ಮತದಾರರ ಪಟ್ಟಿಯಲ್ಲಿ ಅರ್ಹರ ಹೆಸರಿರಬೇಕು. ಅದಕ್ಕಾಗಿ ಕಂದಾಯ ದಾಖಲೆಗಳನ್ನು ಒದಗಿಸಲಾಗುತ್ತಿದೆ. ಇಲ್ಲಿನವರನ್ನ ವಿವಾಹ ಆದರೂ ಖಾಯಂ ವಾಸಿ ಪ್ರಮಾಣ ಪತ್ರಕ್ಕೆ ಅರ್ಹರು, ಅತಂಹವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.

RELATED ARTICLES

Latest News