Homeರಾಷ್ಟ್ರೀಯತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯ ಗೀತೆ 'ತಮಿಳ್‌ ತಾಯಿ ವಾಲ್ತು' ಕಡ್ಡಾಯಗೊಳಿಸಿ ಸರ್ವಾನುಮತದ ನಿರ್ಣಯ ಅಂಗೀಕಾರ

ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯ ಗೀತೆ ‘ತಮಿಳ್‌ ತಾಯಿ ವಾಲ್ತು’ ಕಡ್ಡಾಯಗೊಳಿಸಿ ಸರ್ವಾನುಮತದ ನಿರ್ಣಯ ಅಂಗೀಕಾರ

TN CM's resolution on 'Tamil Thaai Vazhthu' unanimously passed in Assembly

ಚೆನ್ನೈ,ಆ.10–ರಾಜ್ಯದಲ್ಲಿ ನಡೆಯುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಕಚೇರಿಗಳ ಆರಂಭದಲ್ಲಿ ರಾಜ್ಯ ಗೀತೆಯಾದ ತಮಿಳ್‌ ತಾಯಿ ವಾಲ್ತು (ತಮಿಳು ತಾಯಿಯ ಸ್ತುತಿಗೀತೆ) ಹಾಡುವುದನ್ನು ಕಡ್ಡಾಯಗೊಳಿಸುವ ಐತಿಹಾಸಿಕ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ.

ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅವರು ಮಂಡಿಸಿದ ಈ ನಿರ್ಣಯಕ್ಕೆ ಆಡಳಿತ ಪಕ್ಷದೊಂದಿಗೆ ವಿರೋಧ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ಸದನದ ಎಲ್ಲಾ ಶಾಸಕಾಂಗ ಪಕ್ಷಗಳು ಬೆಂಬಲ ಸೂಚಿಸಿವೆ.

ಇನ್ನುಮುಂದೆ ತಮಿಳುನಾಡಿನ ಎಲ್ಲಾ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳು ಆರಂಭವಾಗುವ ಮೊದಲು ರಾಜ್ಯ ಗೀತೆಯನ್ನು ತಪ್ಪದೆ ಹಾಡಬೇಕು.
ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್‌, ತಮ ೞತಮಿಳಗ ವೆಟ್ರಿ ಕಳಗಂೞ ಸರ್ಕಾರವು ತಮಿಳುನಾಡಿನ ಭಾಷಾ ಹಾಗೂ ಸಾಂಸ್ಕೃತಿಕ ಹಕ್ಕುಗಳ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಮಿಳು ಕೇವಲ ಒಂದು ಭಾಷೆಯಲ್ಲ, ಅದು ನಮ ಜೀವನ ಮತ್ತು ಭಾವನೆ. ತಾಯ್ನುಡಿಯು ಒಬ್ಬರ ತಾಯಿಯಷ್ಟೇ ಪವಿತ್ರವಾದುದು, ಎಂದು ಅವರು ಭಾವುಕರಾಗಿ ನುಡಿದರು. ಅಲ್ಲದೆ, ೞತಮಿಳ್‌ ತಾಯಿ ವಾಲ್ತುೞ ಹಾಡುವುದು ಭಾರತದ ಏಕತೆ ಅಥವಾ ರಾಜಕೀಯ ವ್ಯವಸ್ಥೆಗೆ ವಿರುದ್ಧವಲ್ಲ, ಬದಲಾಗಿ ಇದು ದೇಶದ ೞವೈವಿಧ್ಯತೆಯಲ್ಲಿ ಏಕತೆ ಎಂಬ ತತ್ವವನ್ನು ಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಹೊರಡಿಸಿರುವ ಸಲಹೆಯೊಂದರಲ್ಲಿ, ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯ ಮೊದಲು ರಾಷ್ಟ್ರೀಯ ಗೀತೆ ೞವಂದೇ ಮಾತರಂೞ ಅನ್ನು ನುಡಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ಈ ನಿರ್ಣಯ ಮಹತ್ವ ಪಡೆದುಕೊಂಡಿದೆ.

1970ರ ಆದೇಶ:
ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ೞತಮಿಳ್‌ ತಾಯಿ ವಾಲ್ತು ಹಾಡಬೇಕೆಂದು ತಮಿಳುನಾಡು ಸರ್ಕಾರವು ಮೊದಲು ನವೆಂಬರ್‌ 23, 1970 ರಂದೇ ಆದೇಶ ಹೊರಡಿಸಿತ್ತು.
1891ರಲ್ಲಿ ಮನೋನಣಿಯಂ ಸುಂದರನಾರ್‌ ಅವರು ರಚಿಸಿದ ಪ್ರಸಿದ್ಧ ಮನೋನಣಿಯಂ ನಾಟಕದಿಂದ ಈ ಸ್ತುತಿಗೀತೆಯನ್ನು ಆಯ್ದುಕೊಳ್ಳಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಡಿಸೆಂಬರ್‌ 12, 2021 ರಂದು ಇದನ್ನು ಅಧಿಕೃತ ರಾಜ್ಯ ಗೀತೆಯಾಗಿ ಅಧಿಕೃತವಾಗಿ ಮಾನ್ಯ ಮಾಡಲಾಗಿತ್ತು.

ನಿರ್ಣಯವು ಸಂಪೂರ್ಣ ಸರ್ವಾನುಮತದಿಂದ ಅಂಗೀಕೃತವಾಗಿದೆ ಎಂದು ಘೋಷಿಸಿದ ಸಭಾಧ್ಯಕ್ಷ ಜೆ.ಸಿ.ಡಿ. ಪ್ರಭಾಕರ್‌, ಇದರ ಅನುಷ್ಠಾನಕ್ಕೆ ಬಾಹ್ಯವಾಗಿ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ತಿಳಿಸಿದರು. ಇದು ಕೇವಲ ಒಂದು ಸರ್ಕಾರದ ಆದೇಶವಲ್ಲ, ಬದಲಾಗಿ ವಿಧಾನಸಭೆಯ ನಿರ್ಣಯವಾಗಿದೆ. ಇಲ್ಲಿ ಮುಖ್ಯಮಂತ್ರಿಯವರ ಧ್ವನಿಯು ಸಮಸ್ತ ತಮಿಳು ಜನಸಂಖ್ಯೆಯ ಭಾವನೆಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

RELATED ARTICLES
spot_img

Latest News