Saturday, May 4, 2024
Homeಜಿಲ್ಲಾ ಸುದ್ದಿಗಳುಸೊಳ್ಳೆ ಬತ್ತಿಯಿಂದ ಬಟ್ಟೆಗೆ ಬೆಂಕಿ ತಗುಲಿ ವೃದ್ಧ ಸಾವು

ಸೊಳ್ಳೆ ಬತ್ತಿಯಿಂದ ಬಟ್ಟೆಗೆ ಬೆಂಕಿ ತಗುಲಿ ವೃದ್ಧ ಸಾವು

ದಾವಣಗೆರೆ,ಫೆ.18 : ಕೋಣೆಯಲ್ಲಿ ರಾತ್ರಿ ಸೊಳ್ಳೆ ಕಾಟದಿಂದ ಹಚ್ಚಿದ್ದ ಬತ್ತಿ ಬಟ್ಟೆಗೆ ತಾಗಿ ಬೆಂಕಿ ಹೊತ್ತಿಕೊಂಡು ಸುಟ್ಟ ಗಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧರೊಬ್ಬರು ಸಾವನ್ನಪ್ಪಿರುವ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದಲ್ಲಿ ನಡೆದಿದೆ. ಎ.ಮಲ್ಲಪ್ಪ (85) ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಇತ್ತೀಚೆಗೆ ಎಂದಿನಂತೆ ರಾತ್ರಿ ಮಲಗುವಾಗ ಸೊಳ್ಳೆ ಓಡಿಸಲೆಂದು ಸೊಳ್ಳೆ ಬತ್ತಿ ಮೇಜಿನ ಮೇಲಿಟ್ಟು ಕೆಳಗೆ ಚಾಪೆಯ ಮೇಲೆ ಮಲ್ಲಪ್ಪ ಮಲಗ್ಗಿದ್ದರು ಮಧ್ಯರಾತ್ರಿಬೆಂಕಿ ಕಿಡಿ ಬಟ್ಟೆಗೆ ಬಿದ್ದುಹತ್ತಿಕೊಂಡು ಹೊತ್ತಿ ಉರಿದಿದೆ.

ಕೆಳಗೆ ಮಲಗಿದ್ದವರ ಮೇಲೆ ಆ ಬಟ್ಟೆ ಬಿದ್ದು ಬೆಂಕಿ ಮತ್ತಷ್ಟು ಹೆಚ್ಚಗಿದೆ ಮೇಲೇಳಲು ಸಾಧ್ಯವಾಗದೆ ಕೂಗಿಕೊಂಡಿದ್ದಾರೆ ,ಕುಟುಂಬಸ್ಥರೆಲ್ಲಾ ಸೇರಿ ಬೆಂಕಿ ನಂದಿಸುವಷ್ಟರಲ್ಲಿ ತೀವ್ರ ಸುಟ್ಟ ಗಾಯಗಳಿಂದ ಮಲ್ಲಪ್ಪ ಅಸ್ವಸ್ಥರಾಗಿದ್ದಾರೆ.

ಕೂಡಲೆ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಸೇರಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ದಾವಣಗೆರೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News