Saturday, May 4, 2024
Homeರಾಜ್ಯನಾಮಪತ್ರ ವಾಪಸ್ಸಿಗೆ ಏ.8 ಕಡೆಯ ದಿನ

ನಾಮಪತ್ರ ವಾಪಸ್ಸಿಗೆ ಏ.8 ಕಡೆಯ ದಿನ

ಬೆಂಗಳೂರು,ಏ.5- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಇಂದು ನಾಮಪತ್ರಗಳ ಪರಿಶೀಲನೆ ನಡೆದಿದೆ. ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಸಂಜೆ ವೇಳೆಗೆ ತಿರಸ್ಕೃತಗೊಂಡ ಹಾಗೂ ಕ್ರಮಬದ್ಧವಾದ ನಾಮಪತ್ರಗಳ ಪ್ರಕಟಣೆ ಹೊರಬೀಳಲಿದೆ.

ನಾಮಪತ್ರ ವಾಪಸ್ಸು ಪಡೆಯಲು ಏ.8 ರವರೆಗೂ ಕಾಲಾವಕಾಶವಿದೆ. ಏ.26 ರಂದು ಮತದಾನ ನಡೆಯಲಿದ್ದು, ಜೂ.4 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಮಾ.28 ರಿಂದ ನಿನ್ನೆಯವರೆಗೆ 14 ಕ್ಷೇತ್ರಗಳಲ್ಲಿ 333 ಪುರುಷ, 25 ಮಹಿಳೆಯರೂ ಸೇರಿದಂತೆ ಒಟ್ಟು 358 ಅಭ್ಯರ್ಥಿಗಳು, 453 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು 35 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರೆ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅತೀ ಕಡಿಮೆ 10 ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು.

ಉಡುಪಿ-ಚಿಕ್ಕಮಗಳೂರು-12, ಹಾಸನ-21, ಚಿತ್ರದುರ್ಗ-25, ತುಮಕೂರು-25, ಮಂಡ್ಯ, ಮೈಸೂರು ತಲಾ -26, ಚಾಮರಾಜನಗರ- 24, ಬೆಂಗಳೂರು ಗ್ರಾಮಾಂತರ -30, ಬೆಂಗಳೂರು ಉತ್ತರ-19, ಬೆಂಗಳೂರು ಕೇಂದ್ರ – 29, ಬೆಂಗಳೂರು ದಕ್ಷಿಣ- 31, ಕೋಲಾರ-24, ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಬಿಜೆಪಿಯಿಂದ 12 ಅಭ್ಯರ್ಥಿಗಳಿಂದ 17 ನಾಮಪತ್ರ, ಜೆಡಿಎಸ್ನಿಂದ 3 ಅಭ್ಯರ್ಥಿಗಳಿಂದ 8 ನಾಮಪತ್ರ, ಕಾಂಗ್ರೆಸ್ನಿಂದ 14 ಅಭ್ಯರ್ಥಿಗಳಿಂದ 21 ನಾಮಪತ್ರ, ಬಿಎಸ್ಪಿಯಿಂದ 18, ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ 161, ಪಕ್ಷೇತರರಿಂದ 211 ನಾಮಪತ್ರಗಳು ಸಲ್ಲಿಕೆಯಾಗಿವೆ.

RELATED ARTICLES

Latest News