Saturday, May 4, 2024
Homeರಾಜ್ಯಭಾರೀ ಚರ್ಚೆಗೆ ಗ್ರಾಸವಾದ `ಹಲೋ ಅಪ್ಪ'

ಭಾರೀ ಚರ್ಚೆಗೆ ಗ್ರಾಸವಾದ `ಹಲೋ ಅಪ್ಪ’

ಬೆಂಗಳೂರು, ನ.20- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಪಡೆದ ಬಿರುದುಗಳ ಪಟ್ಟಿಯನ್ನು ನೀಡಿದೆ. ಕಾಂಗ್ರೆಸ್ ಸರ್ಕಾರವನ್ನು ಎಟಿಎಂ ಸರ್ಕಾರ್ ಎಂದು ಬಿಜೆಪಿ ದೂರಿದೆ.

ಈ ಕುರಿತು ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಶ್ಯಾಡೋ ಸಿಎಂ ಯತೀಂದ್ರರವರಿಗೆ ಎಟಿಎಂ ಸರ್ಕಾರದ ಆಡಳಿತದಲ್ಲಿ ದೊರೆತಿರುವ ಬಿರುದುಗಳು ಎಂದು ಟ್ವೀಟ್ ಮಾಡಿದೆ.
ಕಡು ಭ್ರಷ್ಟ , ಹಲೋ ಅಪ್ಪ ವೈ.ಎಸ್.ಟಿ ಕಲೆಕ್ಷನ್ ಪ್ರಿನ್ಸ್ ಸಿಎಂ ಸಿದ್ದರಾಮಯ್ಯರವರ ಕಲೆಕ್ಷನ್-ಕಮಿಷನ್-ಕರಪ್ಷನ್ ಆಡಳಿತ ಮುಗಿಯುವ ಮುನ್ನ ಮತ್ತಷ್ಟು ಬಿರುದುಗಳು ಬಂದರೂ ಸಹ ಅಚ್ಚರಿಯಿಲ್ಲ!! ಎಂದು ಬಿಜೆಪಿ ಹೇಳಿದೆ.

ಜನಾರ್ಧನರೆಡ್ಡಿ ಬಿಜೆಪಿಗೆ ಕರೆತರಲು ಯತ್ನ

ಹಲೋ ಅಪ್ಪ ಕರ್ನಾಟಕದಲ್ಲಿ ಕಳೆದ ವಾರದಿಂದ ಹೆಚ್ಚಾಗಿ ಕೇಳಿ ಬರುತ್ತಿರುವ ಮಾತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ತಂದೆಯ ಜೊತೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬಳಿಕ ಹಲೋ ಅಪ್ಪ ಎಂಬ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

RELATED ARTICLES

Latest News