Sunday, April 28, 2024
Homeರಾಷ್ಟ್ರೀಯಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ISIS ಉಗ್ರ ಅರೆಸ್ಟ್

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ISIS ಉಗ್ರ ಅರೆಸ್ಟ್

ನವದೆಹಲಿ,ಅ.2- ರಾಷ್ಟ್ರೀಯ ತನಿಖಾದಳ(ಎನ್‍ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಐಎಸ್‍ಐಎಸ್ ಉಗ್ರ ಹಾಗೂ ಇತರೆ ಇಬ್ಬರು ಭಯೋತ್ಪಾದಕರನ್ನು ನವದೆಹಲಿಯ ವಿಶೇಷ ಘಟಕದ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಷಹನ್‍ವಾಜ್ ಅಲಿಯಾಸ್ ಶಫಿ ಉಜ್ಜಮ ಬಂಧಿತ ಐಎಸ್‍ಐಎಸ್ ಉಗ್ರನಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ ಮೂರು ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಘೋಷಣೆ ಮಾಡಿತು.

ಉತ್ತರ ಭಾರತ, ದೆಹಲಿ ಸೇರಿದಂತೆ ಮತ್ತಿತರ ಕಡೆ ಆತ್ಮಾಹುತಿ ದಾಳಿ ನಡೆಸಲು ಈತ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ. ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಎನ್‍ಐಎ ಅಧಿಕಾರಿಗಳು ಗುಪ್ತಚರ ವಿಭಾಗ ನೀಡಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಸಿದೆ.

ವೃತ್ತಿಯಲ್ಲಿ ಇಂಜಿನಿಯರಿಂಗ್ ಪದವಿಧರನಾಗಿರುವ ಷಹನ್‍ವಾಜ್ ಪುಣೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಈ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಜೈಲಿನಿಂದ ಪರಾರಿಯಾಗಿ ನವದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ. ಸಧ್ಯದಲ್ಲೇ ದೇಶದ ವಿವಿಧೆಡೆ ಬಾಂಬ್ ಸ್ಪೋಟ ಹಾಗೂ ರಕ್ತದೋಕುಳಿ ನಡೆಸಲು ಸಂಚು ರೂಪಿಸಲು ಷಹನ್‍ವಾಜ್ ಜೊತೆ ಇತರೆ ಇಬ್ಬರು ಶಂಕಿತ ಉಗ್ರರನ್ನು ದೆಹಲಿ ವಿಶೇಷ ಘಟಕದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಜಾಗತಿಕ ಅಧಿಕಾರ ಹಂಚಿಕೆ ರಚನೆಯಲ್ಲಿ ಹಿಂದೂಗಳು ಪ್ರಮುಖ ಪಾತ್ರ ನಿರ್ವಹಿಸಲು ಕರೆ

ಬಂಧಿತರಿಂದ ಸುಧಾರಿತ ಸ್ಪೋಟಕಗಳನ್ನು ತಯಾರಿಸಲು ಬಳಸುವ ಆ್ಯಸಿಡ್ ಮತ್ತು ರಾಸಾಯನಿಕಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖಾ ಸಮಯದಲ್ಲಿ ವಿದೇಶಿ ಮೂಲದ ಹ್ಯಾಂಡ್ಲರ್ ಫೆಬ್ರವರಿಯಲ್ಲಿ ಇಮ್ರಾನ್ ಮತ್ತು ಯೂನಸ್‍ನೊಂದಿಗೆ ಶಾಹನವಾಜ್ ಸಂಪರ್ಕದಲ್ಲಿದ್ದು, ಭಯೋತ್ಪಾದಕ ದಾಳಿಯನ್ನು ಕಾರ್ಯಗತಗೊಳಿಸಲು ಸೂಚನೆಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.

ಎಟಿಎಸ್ ಹಲವಾರು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ ಮತ್ತು ಆರೋಪಿಯ ಲ್ಯಾಪ್‍ಟಾಪ್‍ಗಳು ಮತ್ತು ಮೊಬೈಲ್ ಫೋನ್‍ಗಳಲ್ಲಿ 500 ಜಿಬಿ ಡೇಟಾ ಪತ್ತೆಯಾಗಿದೆ, ಇದರಲ್ಲಿ ಬಾಂಬ್‍ಗಳನ್ನು ತಯಾರಿಸುವ ಯೂಟ್ಯೂಬ್ ವೀಡಿಯೊಗಳು ಮತ್ತು ವಿವಿಧ ಸ್ಥಳಗಳ ಗೂಗಲ್ ಚಿತ್ರಗಳ ಲಿಂಕ್‍ಗಳಿವೆ ಎಂದು ಗೊತ್ತಾಗಿದೆ.

ಶಹನವಾಜ್ ಯಾರು?:
ಶಹನವಾಜ್ ಗಣಿ ಎಂಜಿನಿಯರ್ ಆಗಿದ್ದು, ಪುಣೆಯಿಂದ ಪಲಾಯನ ಮಾಡಿದ ನಂತರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಪುಣೆಯಲ್ಲಿ ಐಸಿಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಷಹನ್‍ವಾಜ್ ಸೇರಿದಂತೆ ನಾಲ್ವರು ಶಂಕಿತ ಭಯೋತ್ಪಾದಕರ ಚಿತ್ರಗಳನ್ನು ಎನ್‍ಐಎ ಬಿಡುಗಡೆ ಮಾಡಿತ್ತು. ಈತನ ಸುಳಿವು ನೀಡಿದವರಿಗೆ 3 ಲಕ್ಷ ಬಹುಮಾನ ಘೋಷಿಸಿ ಬಂಧನ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಸಂಸ್ಥೆ ತಿಳಿಸಿತ್ತು.

ಉಳಿದ ಮೂವರನ್ನು ಪುಣೆಯ ತಲ್ಹಾ ಲಿಯಾಕತ್ ಖಾನ್ ಎಂದು ಗುರುತಿಸಲಾಗಿದ್ದು, ದೆಹಲಿ ಮೂಲದ ರಿಜ್ವಾನ್ ಅಬ್ದುಲ್ ಹಾಜಿ ಅಲಿ ಮತ್ತು ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡೈಪರ್ವಾಲಾ ಎಂದು ಗುರುತಿಸಲಾಗಿದೆ. ಶಹನವಾಜ್ ಮತ್ತು ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನಸ್ ಖಾನ್(23) ಮತ್ತು ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿ( 24) ಜುಲೈ 18 ರಂದು ಪುಣೆಯಲ್ಲಿ ದ್ವಿಚಕ್ರ ವಾಹನವನ್ನು ಕದಿಯಲು ಯತ್ನಿಸುತ್ತಿರುವುದನ್ನು ಪತ್ತೆ ಮಾಡಿದ ನಂತರ ಕೊತ್ರುಡ್ ಪೊಲೀಸರು ಬಂಧಿಸಿದ್ದರು.

ಗಾಂಧಿ ವಿರೋಧಿಗಳ ಬಣ್ಣ ಬಯಲು ಮಾಡಲು ಕಾಂಗ್ರೆಸ್ ಪ್ರತಿಜ್ಞೆ

ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ, ಅವರು ಮಧ್ಯಪ್ರದೇಶದ ರತ್ಲಾಮ್‍ನವರಾಗಿದ್ದು, ರಾಜಸ್ಥಾನದಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ಬಹಿರಂಗಗೊಂಡಿತ್ತು. ಜುಲೈ 22ರಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ತನಿಖೆಯನ್ನು ವಹಿಸಿಕೊಂಡಿತು. ತನಿಖೆಯ ಸಮಯದಲ್ಲಿ ಷಹನ್‍ವಾಜ್ ಕೊಂಧ್ವಾ ಬಳಿಯ ಬೋಪಟ್‍ಘಾಟ್‍ನಲ್ಲಿ ಸ್ವಲ್ಪ ಆಸಿಡ್ ಇಟ್ಟುಕೊಂಡಿದ್ದಾನೆಂದು ಖಾನ್ ಮತ್ತು ಸಾಕಿ ಹೇಳಿಕೆ ನೀಡಿದ್ದರು.

ಹೀಗಾಗಿ ಶಂಕಿತ ಉಗ್ರರು ಯಾವ ಸಂಚು ರೂಪಿಸಿದ್ದರು ಎಂಬುದನ್ನು ಪತ್ತೆ ಮಾಡಲು ತನಿಖಾ ತಂಡ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಮತ್ತು ಸತಾರಾ ಸ್ಥಳಗಳಿಗೆ ಭೇಟಿ ಕೊಟ್ಟಿತ್ತು. ಆಗಸ್ಟ್ 8ರಂದು ಥಾಣೆ ಜಿಲ್ಲೆಯಲ್ಲಿ ಆಕಿಫ್ ಅತೀಕ್ ನಾಚನ್ ಮತ್ತು ಜುಲಿಕರ್ ಅಲಿ ಬರೋಡಾವಾಲಾ ಎಂಬ ಇಬ್ಬರು ಆರೋಪಿಗಳನ್ನು ಎಟಿಎಸ್ ಬಂಧಿಸಿದ ನಂತರ, ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಲಾಯಿತು.

RELATED ARTICLES

Latest News