Thursday, May 2, 2024
Homeರಾಷ್ಟ್ರೀಯಟಿಎಂಸಿ ನಾಯಕರ ನಿವಾಸಗಳ ಮೇಲೆ ಇಡಿ ದಾಳಿ

ಟಿಎಂಸಿ ನಾಯಕರ ನಿವಾಸಗಳ ಮೇಲೆ ಇಡಿ ದಾಳಿ

ಕೋಲ್ಕತ್ತಾ,ಜ.12- ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಸುಜಿತ್ ಬೋಸ್, ಟಿಎಂಸಿ ಶಾಸಕ ತಪಸ್ ರಾಯ್ ಮತ್ತು ಉತ್ತರ ದಮ್ಡಮ್ ಪುರಸಭೆಯ ಮಾಜಿ ಅಧ್ಯಕ್ಷ ಸುಬೋಧ ಚಕ್ರವರ್ತಿ ಅವರ ನಿವಾಸಗಳ ಮೇಲೆ ಇಂದು ಬೆಳಿಗ್ಗೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.

ಕೇಂದ್ರ ಪಡೆಗಳ ಜೊತೆಯಲ್ಲಿ ಜಾರಿ ನಿರ್ದೇಶನಾಲಯದ ಅಕಾರಿಗಳು ಇಂದು ಮುಂಜಾನೆ ಉತ್ತರ 24 ಪರಗಣ ಜಿಲ್ಲೆಯ ಲೇಕ್ ಟೌನ್ ಪ್ರದೇಶದಲ್ಲಿ ಬೋಸ್ ಅವರ ಎರಡು ನಿವಾಸಗಳ ಮೇಲೆ ದಾಳಿ ನಡೆಸಿದರು ಎಂದು ತಿಳಿದುಬಂದಿದೆ. ಕೇಂದ್ರ ಏಜೆನ್ಸಿ ಅಧಿಕಾರಿಗಳು ತಪಸ್ ರಾಯ್ ಅವರ ಬಿಬಿ ಗಂಗೂಲಿ ಸ್ಟ್ರೀಟ್ ನಿವಾಸ ಮತ್ತು ಬಿರಾಟಿಯಲ್ಲಿರುವ ಚಕ್ರವರ್ತಿ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದರು.

ನಾಗರಿಕ ಸಂಸ್ಥೆಗಳಲ್ಲಿನ ನೇಮಕಾತಿಗೆ ಸಂಬಂಧಿಸಿದಂತೆ ನಾವು ಮೂವರು ಟಿಎಂಸಿ ನಾಯಕರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಾವು ನಾಯಕರೊಂದಿಗೂ ಮಾತನಾಡುತ್ತಿದ್ದೇವೆ ಎಂದು ಇಡಿ ಅಧಿಕಾರಿ ಪಿಟಿಐಗೆ ತಿಳಿಸಿದರು. ಸ್ಥಳೀಯ ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಆಯಾ ಸ್ಥಳಗಳಿಗೆ ತಲುಪಿ ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ.

ರೊಚ್ಚಿಗೆದ್ದ ಅಮೆರಿಕ-ಬ್ರಿಟನ್, ಹೌತಿ ಬಂಡುಕೋರರ ಮೇಲೆ ಏರ್ ಸ್ಟ್ರೈಕ್

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರಂಭದಲ್ಲಿ ಬೋಸ್ ನಿವಾಸವನ್ನು ಪ್ರವೇಶಿಸಲು ಪ್ರತಿರೋಧವನ್ನು ಎದುರಿಸಿದರು ಮತ್ತು ಸುಮಾರು 40 ನಿಮಿಷಗಳ ನಂತರ ಅವರನ್ನು ಒಳಗೆ ಅನುಮತಿಸಲಾಯಿತು ಎಂದು ಮೂಲಗಳು ತಿಳಿಸಿವೆ. ನಾವು ಹುಡುಕಾಟ ವಾರಂಟ್ ಅನ್ನು ಹೊಂದಿದ್ದೇವೆ ಮತ್ತು ಆರಂಭದಲ್ಲಿ ನಮ್ಮನ್ನು ಪ್ರವೇಶಿಸಲು ಅನುಮತಿಸಲಿಲ್ಲ ಕೊನೆಗೆ ಅವರ ಮನವೊಲಿಸಿ ಮನೆ ಪ್ರವೇಶಿಸಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಪಡೆಗಳು ಹೆಲ್ಮೆಟ್‍ಗಳು, ಸ್ವಯಂಚಾಲಿತ ಗನ್‍ಗಳಂತಹ ಹೆಚ್ಚುವರಿ ರಕ್ಷಣಾ ಸಾಧನಗಳನ್ನು ಹೊಂದಿದ್ದು, ಕಳೆದ ವಾರ ಸಂದೇಶಖಾಲಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಅವರ ಮೇಲೆ ನಡೆದ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್‍ನ ಕಣಕಣದಲ್ಲೂ ಹಿಂದೂ ದ್ವೇಷ ಇದೆ : ಆರ್.ಅಶೋಕ್

ಜನವರಿ 5 ರಂದು, ಪಡಿತರ ವಿತರಣೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿರುವ ಅವರ ನಿವಾಸದ ಮೇಲೆ ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರ ನಿವಾಸದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ ಮೂವರು ಜಾರಿ ಇಲಾಖೆ (ಇಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು.

RELATED ARTICLES

Latest News