Sunday, May 12, 2024
Homeಜಿಲ್ಲಾ ಸುದ್ದಿಗಳುಸಾವಿನಲ್ಲೂ ಒಂದಾದ ತಂದೆ-ಮಗ

ಸಾವಿನಲ್ಲೂ ಒಂದಾದ ತಂದೆ-ಮಗ

ಕೊಪ್ಪಳ, ಏ.28- ತಂದೆ ಒಂದೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ.ವಯೋಸಹಜವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ರಾಮರೆಡ್ಡಿ (70) ನಿನ್ನೆ ಬೆಳಗ್ಗೆ ಮೃತರಾದರೆ, ಇವರ ಮೇಲೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದ ಇವರ ಮಗ ಆದಿನಾರಾಯಣ ರೆಡ್ಡಿ (42) ತಂದೆ ಸಾವಿನ ದುಃಖ ತಾಳಲಾರದೆ ಕುಳಿತಲ್ಲಿಯೇ ಕುಸಿದು ಬಿದ್ದು ರಾತ್ರಿ 8.30ರ ಸುಮಾರಿಗೆ ಸಾವನ್ನಪ್ಪಿದ್ದಾರೆ.

ಸಾವಿನಲ್ಲೂ ತಂದೆ-ಮಗ ಒಂದಾಗಿದ್ದು, ಇಡೀ ಗ್ರಾಮವೇ ದುಃಖದ ಮುಡುವಿನಲ್ಲಿತ್ತು. ಆದಿ ನಾರಾಯಣ ರೆಡ್ಡಿ ಹೆಂಡತಿ ಹಾಗೂ ಇಬ್ಬರ ಮಕ್ಕಳನ್ನು ಅಗಲಿದ್ದು, ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ.

RELATED ARTICLES

Latest News