Friday, May 3, 2024
Homeಜಿಲ್ಲಾ ಸುದ್ದಿಗಳು2ನೇ ಪತ್ನಿಯನ್ನು ಕೊಂದು ಮೊದಲ ಪತ್ನಿ ಮನೆ ಸೇರಿಕೊಂಡಿದ್ದ ಪತಿರಾಯ ಅಂದರ್

2ನೇ ಪತ್ನಿಯನ್ನು ಕೊಂದು ಮೊದಲ ಪತ್ನಿ ಮನೆ ಸೇರಿಕೊಂಡಿದ್ದ ಪತಿರಾಯ ಅಂದರ್

ಚಿಂತಾಮಣಿ,ಏ.10-ತನ್ನ ಎರಡನೇ ಪತ್ನಿಯನ್ನು ಕೊಲೆ ಮಾಡಿ ಮನೆ ಬೀಗ ಹಾಕಿ ಮೊದಲ ಪತ್ನಿ ಮನೆಗೆ ಹೋಗಿದ್ದ ಪಾತಕಿಯನ್ನು ಚಿಂತಾಮಣಿ ಪೊಲೀಸರು ಬಂಧಿಸಿದ್ದಾರೆ.ಲಕ್ಷ್ಮಿ(30) ಕೊಲೆಯಾದ ರ್ದುದೈವಿಯಾಗಿದ್ದು ,ಹೂ ವ್ಯಾಪಾರಿ ಪತಿ ಹರೀಶ್ ಬಂಧಿತ ಆರೋಪಿಯಾಗಿದ್ದಾನೆ.

ಆಂಧ್ರ ಪ್ರದೇಶ ಮೂಲದ ಲಕ್ಷ್ಮಿಯನ್ನು ಕಳೆದ 1ವರ್ಷದ ಹಿಂದೆ ಹರೀಶ್ ಮದುವೆಯಾಗಿದ್ದ ನಂತರ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಮನೆ ಮಾಡಿ ವಾಸವಾಗಿದ್ದ.ಆದರೆ ಹರೀಶನಿಗೆ ಹತ್ತು ವರ್ಷಗಳ ಹಿಂದೆ ಮಮತಾ ಎಂಬುವವರ ಜೊತೆ ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳು ಇದ್ದಾರೆ ಪ್ರಸ್ತುತ ಅವರು ಹೊಸಕೋಟೆಯಲ್ಲಿ ನೆಲೆಸಿದ್ದಾರೆ.

ಇನೊಂದೆಡೆ ಲಕ್ಷ್ಮಿ ಪತಿಯಿಂದ ವಿಚ್ಚೇದನ ಪಡೆದು ಹರೀಶ್‍ನನ್ನು ಎರಡನೆ ಮದುವೆಯಾಗಿದ್ದಳು. ಆದ್ರೆ ಇದು ಹರೀಶ್‍ಗೆ ಈ ವಿಚಾರ ತಿಳಿಸಿರಲಿಲ್ಲ ಇತ್ತೀಚೆಗೆ ಇದು ಗೊತ್ತಾಗಿ ಇಬ್ಬರ ಮದ್ಯೆ ಮನಸ್ತಾಪ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಸೋಮವಾರ ಬೆಳಿಗ್ಗೆ ಇದೇ ವಿಚಾರವಾಗಿ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಲಕ್ಷ್ಮಿಯನ್ನು ಹರೀಶ್ ಕತ್ತು ಹಿಸುಕಿ ಬಳಿಕ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬೀಗ ಜಡಿದು ಮೊದಲನೆ ಹೆಂಡತಿ ಇದ್ದ ಹೊಸಕೋಟೆಗೆ ಹೋಗಿದ್ದ.

ಅಮಾಯಕನಂತೆ ವರ್ತಿಸಿದ ಆತ ಕಳೆದ ರಾತ್ರಿ ಹೊಸಕೋಟೆ ಪೊಲೀಸ್ ಠಾಣೆಗೆ ಬಂದು ಕೊಲೆ ವಿಷಯ ತಿಳಿಸಿ ಶರಣಾಗಿದ್ದಾನೆ. ಚಿಂತಾಮಣಿ ಪೊಲೀಸರಿಗೆ ಮಾಹಿತಿ ನೀಡಿ ನಂತರ ಆತನನ್ನು ಬಂಧಿಸಲಾಗಿದೆ. ಮನೆ ಬೀಗ ಹಾಕಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ ಪ್ರಸ್ತುತ ಸೊಣ್ಣಶೆಟ್ಟಿಹಳ್ಳಿ ಮನೆಗೆ ಆರೋಪಿಯನ್ನು ಕರೆ ತಂದು ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News