Sunday, April 28, 2024
Homeರಾಜ್ಯಕ್ಷೇತ್ರ ಹಂಚಿಕೆ ಗೊಂದಲವಿಲ್ಲ : ಜಿ.ಟಿ.ದೇವೇಗೌಡ

ಕ್ಷೇತ್ರ ಹಂಚಿಕೆ ಗೊಂದಲವಿಲ್ಲ : ಜಿ.ಟಿ.ದೇವೇಗೌಡ

ಬೆಂಗಳೂರು,ಮಾ.18-ಲೋಕಸಭೆ ಚುನಾವಣೆಗೆ ಸಂಬಂಸಿದಂತೆ ಕ್ಷೇತ್ರಗಳ ಹಂಚಿಕೆ ಗೊಂದಲವಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ಗೆ ಯಾವ ಯಾವ ಕ್ಷೇತ್ರಗಳನ್ನು ನೀಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇದೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ ಎಂದು ನಾವು ಕೇಳಿಲ್ಲ. ಆದರೆ ಬಿಜೆಪಿಯವರೇ ತೆಗೆದುಕೊಳ್ಳಿ ಎಂದು ಹೇಳುತ್ತಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿ ಕ್ಷೇತ್ರ ಹಂಚಿಕೆ ಬಗ್ಗೆ ಮಾತುಕತೆ ನಡೆಸಿ ಬಂದಿದ್ದಾರೆ. ನಾವು ಅವರೊಂದಿಗೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಎರಡು ಬ್ಯಾಂಕ್‍ಗಳಲ್ಲಿ ಒಂದೇ ಆಸ್ತಿಪತ್ರ ಅಡಮಾನವಿಟ್ಟು ಸಾಲ ಪಡೆದ ಚಾಲಾಕಿ ದಂಪತಿ

ಜೆಡಿಎಸ್‍ಗೆ ಮೂರು ಅಥವಾ ನಾಲ್ಕು ಕ್ಷೇತ್ರಗಳನ್ನು ಬಿಟ್ಟು ಕೊಡಿ ಎಂದು ಬಿಜೆಪಿಯವರನ್ನು ಕೇಳಿದ್ದೇವೆ ಹೊರತು ಎಂಟ್ಹತ್ತು ಕ್ಷೇತ್ರಗಳನ್ನು ಕೇಳಿಲ್ಲ. ಗೆಲ್ಲಲು ಅವಕಾಶ ಇರುವ ನಮ್ಮ ಪಕ್ಷದ ಶಕ್ತಿ ಇರುವ ಕ್ಷೇತ್ರಗಳನ್ನು ಮಾತ್ರ ಕೇಳಿದ್ದೇವೆ. ಬಿಜೆಪಿ ಅಭ್ಯರ್ಥಿ ಇರುವ ಕಡೆಯೂ ನಮ್ಮ ಪಕ್ಷದ ಮತಗಳು ಸಾಕಷ್ಟಿವೆ. ಅವುಗಳನ್ನು ಬಿಜೆಪಿ ಅಭ್ಯರ್ಥಿಗಳಿಗೆ ಹಾಕಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News