Saturday, April 27, 2024
Homeಜಿಲ್ಲಾ ಸುದ್ದಿಗಳುಮದುವೆಗೆ ಒಪ್ಪದ ಪೋಷಕರು: ವಿಷ ಸೇವಿಸಿ ಪ್ರಿಯಕರ ಸಾವು, ಪ್ರಿಯತಮೆ ಬಚಾವ್

ಮದುವೆಗೆ ಒಪ್ಪದ ಪೋಷಕರು: ವಿಷ ಸೇವಿಸಿ ಪ್ರಿಯಕರ ಸಾವು, ಪ್ರಿಯತಮೆ ಬಚಾವ್

ಹಾಸನ.ಮಾ19 : ಮದುವೆಗೆ ಪೋಷಕರು ವಿರೋದಿಸಿದಕ್ಕೆ ವಿಷಸೇವಿಸಿ ರೈಲ್ವೆ ಹಳಿ ಮೆಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳಲ್ಲಿ ಪ್ರೀಯತಮ ಸಾವನ್ನಪ್ಪಿ ಪ್ರೇಯಸಿ ಬಚಾವ್ ಆಗಿರುವ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕಿನ ನಗರನಹಳ್ಳಿ ಗ್ರಾಮದ ರಾಜು(24) ಮೃತಪಟ್ಟ ಯುವಕ.

ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕ ಗ್ರಾಮದ ಡಿಗ್ರಿಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತೆಯನ್ನು ರಾಜು ಪ್ರೀತಿಸುತ್ತಿದ್ದು ಅಪ್ರಾಪ್ತೆ ಎಂಬ ಕಾರಣಕ್ಕೆ ಇವರಿಬ್ಬರ ಮದುವೆಗೆ ಪೋಷಕರು ನಿರಾಕರಿಸಿ ಬುದ್ದಿವಾದ ಹೇಳಿದ್ದರು ಇದರಿಂದ ಮನೊಂದ ಪ್ರೇಮಿಗಳು ಒಬ್ಬರನ್ನು ಒಬ್ಬರು ಬಿಟ್ಟಿರಲಾಗದೆ ಒಟ್ಟಿಗೆ ವಿಷ ಸೇವಿಸಿ ಹೊಳೆನರಸೀಪುರದ ಹೇಮಾವತಿ ನದಿ ಸೇತುವೆ ಬಳಿ ರೈಲ್ವೆ ಹಳಿ ಮೇಲೆ ಮಲಗಿದ್ದರು.

ಹೆಚ್ಚು ವಿಷ ಕುಡಿದಿದ್ದರಿಂದ ಹೊಟ್ಟೆ ಉರಿ ಬಂದು ಹಳಿ ಮೇಲೆ ನರಳಾಡುತ್ತಿದ್ದರು ಇವರಿಬ್ಬರನ್ನು ಕಂಡ ಸ್ಥಳೀಯರು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರೇಮಿಗಳನ್ನು ತಮ್ಮ ಜೀಪ್ ನಲ್ಲೆ ಪಟ್ಟಣ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಜು ಮೃತಪಟ್ಟಿದ್ದಾನೆ. ಚಿಕಿತ್ಸೆಗೆ ಅಪ್ರಾಪ್ತೆ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಸಂಬಂಧ ಹೊಳೆನರಸೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

RELATED ARTICLES

Latest News