Thursday, May 2, 2024
Homeರಾಜಕೀಯಬಿಜೆಪಿಯವರು ಸುಮ್ಮನಿರಲಾಗದೆ ಮೈ ಪರಚಿಕೊಳ್ಳುತ್ತಿದ್ದಾರೆ : ಸಚಿವ ಚಲುವರಾಯ ಸ್ವಾಮಿ

ಬಿಜೆಪಿಯವರು ಸುಮ್ಮನಿರಲಾಗದೆ ಮೈ ಪರಚಿಕೊಳ್ಳುತ್ತಿದ್ದಾರೆ : ಸಚಿವ ಚಲುವರಾಯ ಸ್ವಾಮಿ

ಮಂಡ್ಯ, ನ.1- ಬಿಜೆಪಿಯವರಿಗೆ ಸುಮ್ಮನಿರಲಾಗದೆ ಮೈ ಪರಚಿಕೊಳ್ಳುತ್ತಿದ್ದಾರೆ. ಹೈಕಮಾಂಡ್‍ನವರು ರಾಜ್ಯದ ನಾಯಕರನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ. ಅದಕ್ಕಾಗಿ ಹಿನಾಯ ಪರಿಸ್ಥಿತಿಯಲ್ಲಿರುವ ಬಿಜೆಪಿಯವರು ಆಪರೇಷನ್ ಕಮಲ ಸೇರಿದಂತೆ ಇನ್ನಿಲ್ಲದ ಕಸರತ್ತು ನಡೆಸಿ ಹೈಕಮಾಂಡ್ ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಭಿನ್ನಮತಗಳಿಲ್ಲ. ಅಭಿವೃದ್ಧಿಗೆ ಹಣ ಕೇಳುತ್ತಾರೆ, ಸಚಿವ ಸ್ಥಾನ, ನಿಗಮ ಮಂಡಳಿಗಳಲ್ಲಿ ಅವಕಾಶ ಕೇಳುತ್ತಾರೆ. ನಮ್ಮ ಪಕ್ಷದಲ್ಲಿ ನಮ್ಮ ನಾಯಕರನ್ನು ಶಾಸಕರು ಕೇಳುತ್ತಾರೆ ಅದು ಸಹಜ. ಕಾಂಗ್ರೆಸ್ ಶಾಸಕರು ಬಿಜೆಪಿಯವರಲ್ಲಿ ಹೋಗಿ ಕೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿರುವ ನಮ್ಮ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಆರ್.ಅಶೋಕ್, ಸಿ.ಟಿ.ರವಿ ಅವರನ್ನು ನೋಡಿದರೆ ಪಾಪ ಎನ್ನಿಸುತ್ತದೆ. ಥೋ… ಪರಚಿಕೊಳ್ಳುತ್ತಾರೆ. ಸಿ.ಟಿ.ರವಿ ಅಲ್ಲೆಲ್ಲೋ ದೆಹಲಿಯಲ್ಲಿ ಹೋಗಿ ಮಾತನಾಡುತ್ತಾರೆ. ನನಗೆ ಬಹಳ ಆತ್ಮೀಯ. ಅಶೋಕ್, ಅಶ್ವಥನಾರಾಯಣ ಅವರು ಕೂಡ ಸ್ನೇಹಿತರು.

ರವಿ ನಾನು ಸೋಲುವುದೇ ಇಲ್ಲ ಎಂದುಕೊಂಡಿದ್ದರು. ಸೋತರು, ಸೋಲಿನ ಅನುಭವ ಅವರಿಗೆ ಇಲ್ಲ, ನಮಗಾದರೂ ಆ ಅನುಭವ ಇದೆ. ರಾಜ್ಯಾಧ್ಯಕ್ಷನನ್ನಾಗಿ ಮಾಡುತ್ತೇವೆ ಎಂದು ಅತ್ತ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದಲೂ ತೆಗೆದು ಹಾಕಿದ್ದಾರೆ. ಇಲ್ಲಿ ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿಯೂ ಮಾಡುತ್ತಿಲ್ಲ. ಈಗ ಅವರು ಏನು ಮಾಡಬೇಕು, ಮಾತನಾಡಲೇಬೇಕು, ಇಲ್ಲವಾದರೆ ಕಳೆದುಹೋಗುತ್ತಾರೆ. ಏನನ್ನಾದರೂ ಮಾತನಾಡಲೇಬೇಕು, ಪಾಪ ಅದಕ್ಕಾಗಿ ಮಾತನಾಡುತ್ತಾರೆ ಎಂದರು.

4 ವರ್ಷದ ಬಾಲಕಿ ಮೇಲೆ 14 ವರ್ಷದ ಬಾಲಕ ಅತ್ಯಾಚಾರ

ನನಗೆ ಯಾವ ಪಕ್ಷದಲ್ಲೂ ವೈರಿಗಳು ಇಲ್ಲ, ಕುಮಾರಸ್ವಾಮಿಯವರು ವೈರಿಯಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡುತ್ತಾರೆ. ನಾನು 50 ಸಾವಿರ ಅಂತರದಿಂದ ಸೋಲು ಕಂಡಿದ್ದೆ, ನಾನು ಯಾವತ್ತಾದರೂ ಕುಮಾರಸ್ವಾಮಿ ರೀತಿ ಆಡುತ್ತಿದ್ನಾ ? ಸೋಲಿನ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಜಿಲ್ಲೆಯ ಜನ ನಮಗೆ ತಂದೆ ತಾಯಿ ಸಮಾನ. ನಮ್ಮನ್ನು ಸೋಲಿಸಲಿ, ಗೆಲ್ಲಿಸಲಿ ಜಿಲ್ಲೆಯ ಅಭಿವೃದ್ಧಿಗೆ, ಜನರ ಸಮಸ್ಯೆ ಬಗೆ ಹರಿಸಲು ಕೆಲಸ ಮಾಡುತ್ತೇವೆ.

ಬಿಜೆಪಿ ಹೈಕಮಾಂಡ್ ಮೆಚ್ಚಿಸಲು ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಸ್ಥಳಿಯ ನಾಯಕರು ಏನೋ ಹೋರಾಟ ಮಾಡುತ್ತಿದ್ದಾರೆ. ಅವರ ಕೈನಲ್ಲಾಗಲ್ಲ. ಅವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ನನಗೂ ಅವರೆಲ್ಲಾ ಸ್ನೇಹಿತರೆ ಕುಮಾರಸ್ವಾಮಿ ಏನು ವೈರಿಯೇ, ಛೇ ಖಂಡಿತ ಅವರ ಬಗ್ಗೆ ನಮಗೆ ಪ್ರೀತಿ, ರವಿ ಗಣಿಗ ಅವರಿಗೂ ಪ್ರೀತಿ. ಆದರೆ ನಮಗೂ ಕುಮಾರಣ್ಣನ ಬಗ್ಗೆ ಅಯ್ಯೋ ಅನಿಸುತ್ತದೆ ಎಂದರು.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮನಸಾರೆ ಇಷ್ಟವಿಲ್ಲ. ದೇವೇಗೌಡ ಹತ್ತಿರ ಇರುವುದನ್ನು ಕೇಳಿ ನೋಡಿ ಸತ್ಯ ತಿಳಿಯುತ್ತದೆ. ಮೊನ್ನೆ ದೇವೇಗೌಡರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುವಾಗ ಅವರ ಭುಜವನ್ನು ತಳ್ಳುತ್ತಿದ್ದರು. ಅಂತಹ ಹಿರಿಯರಿಗೆ ಯಾರಾದರೂ ಹಾಗೆ ತಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.

ನಮ್ಮ ಹಳೆಯ ಜನತಾದಳ ಈಗ ಹೇಗಾಗಿದೆ. ಈ ಮೊದಲು ದೇವೇಗೌಡರು ಬಿಜೆಪಿ ವಿರುದ್ಧ ಕಠಿಣ ಮಾತುಗಳಲ್ಲಿ ಟೀಕಿಸಿದ್ದರು. ಅದನ್ನೂ ನಾವು ಪುನಾರಾವರ್ತನೆ ಮಾಡುವುದಿಲ್ಲ. ಬಿಜೆಪಿ ಜೊತೆ ಸೇರಲ್ಲ ಎಂದಿದ್ದರು. ಅವರ ಈ ಇಳಿ ವಯಸ್ಸಿನಲ್ಲಿ.. ಮನಸ್ಸಿಗೆ ನೋವು ಕೊಡಲಾಗುತ್ತಿದೆ. ನಾನಾಗಿದ್ದರೆ , ನಾನು ಅವರ ಮಗನಾಗಿದ್ದರೆ ನನ್ನ ರಾಜಕೀಯ ಭವಿಷ್ಯ ಇವತ್ತೆ ಕೊನೆಯಾದರೂ ಸರಿ ದೇವೇಗೌಡರಿಗೆ ನೋವು ಕೊಟ್ಟು ರಾಜಕೀಯ ಮಾಡುತ್ತಿರಲಿಲ್ಲ ಎಂದರು.

ಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿದ ಚಂದ್ರಬಾಬು ನಾಯ್ಡು

ಒಂದೆರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ದೇವಗೌಡರಿಲ್ಲದೆ ಕುಮಾರಸ್ವಾಮಿ ಏನು ? ತಂದೆ ಬದುಕಿದ್ದಾಗಲೇ ಎರಡು ಬಾರಿ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗಿರುವ ಇತಿಹಾಸ ಇಲ್ಲ. ಅಂತಹದ್ದರಲ್ಲಿ ಕುಮಾರಸ್ವಾಮಿ ಯಾರನ್ನೂ ಹೇಳದೆ ಕೇಳದೆ ಹೋಗಿ ಅಮಿತ್ ಶಾರನ್ನು ಭೇಟಿ ಮಾಡಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಶಕ್ತಿ ಹೀನರಾಗಿರುವ ಕುಮಾರಸ್ವಾಮಿ ಲೋಕಸಭೆ ಚುನಾವಣೆ ಎದುರಿಸಲಾಗದೆ ಬಿಜೆಪಿ ಜೊತೆ ಸೇರಿದ್ದಾರೆ. ಏನೇ ಪ್ರಯತ್ನ ಮಾಡಿದರು. ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ಡಿ.ಕೆ.ಶಿವಕುಮಾರ್ ಬಲಿಷ್ಠರಾಗಿದ್ದಾರೆ ಅದಕ್ಕಾಗಿ ಅವರನ್ನು ಗುರಿ ಮಾಡಿದ್ದಾರೆ. ಸಾಮಥ್ರ್ಯ ಇರುವವರನ್ನು ಮಾತ್ರವೇ ಪ್ರಶ್ನೆ ಮಾಡುತ್ತಾರೆ, ದುರ್ಬಲರನ್ನು ಯಾರು ಗುರಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

RELATED ARTICLES

Latest News