ಹೈದರಾಬಾದ್, ಮಾ.13- (ಪಿಟಿಐ) ಚಲನಚಿತ್ರೋದ್ಯಮದಲ್ಲಿ ಯಶಸ್ಸಿಗೆ ಪ್ರತಿಭೆ ಮಾತ್ರ ನಿಜವಾದ ಮಾನದಂಡ ಎಂದು ಪ್ರತಿಪಾದಿಸಿದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ತೆಲುಗು ನಟ ಅಲ್ಲು ಅರ್ಜುನ್ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದರ ಜೊತೆಗೆ ಟಾಲಿವುಡ್ನವರು ಬಾಲಿವುಡ್ ಮತ್ತು ಹಾಲಿವುಡ್ ಚಲನಚಿತ್ರಗಳಿಗೆ ಸೆಡ್ಡು ಹೊಡೆಯುವಷ್ಟರ ಮಟ್ಟಿಗೆ ಬೆಳೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಲ್ಲು ಅರ್ಜುನ್ ಒಡೆತನದ ಅಲ್ಲು ಸಿನಿಮಾಸ್ ಮಾಲ್ ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ, ತೆಲಂಗಾಣ ಸರ್ಕಾರವು ಚಲನಚಿತ್ರೋದ್ಯಮವನ್ನು ರಾಜ್ಯದ ಯಶೋಗಾಥೆಯ ಭಾಗವಾಗಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.
ಭವಿಷ್ಯದಲ್ಲಿ, ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ (ಚಲನಚಿತ್ರಗಳು) ಮಾತ್ರವಲ್ಲದೆ ಹಾಲಿವುಡ್ನಲ್ಲೂ ಶ್ರೇಷ್ಠತೆಯನ್ನು ಸಾಧಿಸಬೇಕು. ನಮ್ಮ ಧ್ವನಿ (ತೆಲುಗು ನಟರ ಪ್ರತಿಭೆ) ಅಲ್ಲಿಗೂ ತಲುಪಬೇಕು. ಇಲ್ಲಿಯವರೆಗೆ, ನಾವು ನಮ್ಮ ತೆಲುಗು ಚಲನಚಿತ್ರಗಳನ್ನು ಬಾಲಿವುಡ್ನೊಂದಿಗೆ ಹೋಲಿಸುತ್ತಿದ್ದೆವು ಕೇವಲ ಕಲೆಕ್ಷನ್ ವಿಷಯದಲ್ಲಿ ಮಾತ್ರ ಎಂದು ಸಿಎಂ ಹೇಳಿದರು.
ಚಲನಚಿತ್ರೋದ್ಯಮದಲ್ಲಿ ಭಾಷಾ ಅಡೆತಡೆಗಳು ಬಹಳ ಹಿಂದೆಯೇ ಹೋಗಿವೆ ಮತ್ತು ಪ್ರತಿಭೆ ಮಾತ್ರ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು.ತೆಲುಗು ಚಲನಚಿತ್ರೋದ್ಯಮವು ಹಾಲಿವುಡ್ನೊಂದಿಗೆ ಸ್ಪರ್ಧಿಸುವ ಸ್ಥಿತಿಯಲ್ಲಿರಬೇಕು, ಆದರೆ ಇನ್ನು ಮುಂದೆ ನೆರೆಯ ರಾಜ್ಯಗಳು ಅಥವಾ ಬಾಲಿವುಡ್ನೊಂದಿಗೆ ಅಲ್ಲ ಎಂದು ರೆಡ್ಡಿ ಹೇಳಿದರು.
ತೆಲಂಗಾಣದಲ್ಲಿ ಚಲನಚಿತ್ರೋದ್ಯಮಕ್ಕೆ ರಾಜ್ಯ ಸರ್ಕಾರ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಅವರು ಭರವಸೆ ನೀಡಿದರು.ಅಲ್ಲು ಸಿನಿಮಾಸ್ ಎಂಬ ಸಿನಿಮಾ ಥಿಯೇಟರ್ ಸಂಕೀರ್ಣವನ್ನು ನಿರ್ಮಿಸಲು ಶ್ರಮಿಸಿದ್ದಕ್ಕಾಗಿ ಅವರು ಅಲ್ಲು ಅರ್ಜುನ್ ಮತ್ತು ಅವರ ಕುಟುಂಬವನ್ನು ಶ್ಲಾಘಿಸಿದರು.
