ಕಾನ್ಪುರ, ಫೆ.12- ಇತ್ತಿಚೆಗೆ ವಿಐಪಿ ರಸ್ತೆಯಲ್ಲಿ ಲಂಬೋರ್ಘಿನಿ ಕಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಾಕು ದೊರೆ ಕೆ ಕೆ ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಪಘಾತ ಸಮಯದಲ್ಲಿ ಶಿವಂ ಮಿಶ್ರಾಇರಲಿಲ್ಲ ತಾವೇ ಕಾರು ಚಲಾಯಿಸುತ್ತಿದ್ದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡು ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದರು. ಆದಾಗ್ಯೂ,ಶಿವಂ ಮಿಶ್ರಾ ಕಾರು ಚಲಾಯಿಸುತ್ತಿದ್ದರು ಮತ್ತು ತಮ ಬಳಿ ಪುರಾವೆಗಳಿವೆ ಎಂದು ಪೊಲೀಸರು ತಿಳಿಸಿದ ನಂತರ ನ್ಯಾಯಾಲಯವು ಅವರ ಶರಣಾಗತಿ ಅರ್ಜಿಯನ್ನು ತಿರಸ್ಕರಿಸಿತು.
ಪ್ರಸ್ತುತ ಆರೋಪಿಯನ್ನು ಬಂಧಿಸಲಾಗಿದೆ ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.ಶಿವಂ ಮಿಶ್ರಾ ಅವರನ್ನು ದೆಹಲಿಯ ಆಸ್ಪತ್ರೆಯಿಂದ ವಶಕ್ಕೆ ಪಡೆಯಲಾಗಿದೆ ಅಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ತಕ್ಷಣವೇ ಆರೋಪಿಯನ್ನು ಕಾನ್ಪುರಕ್ಕೆ ಕರೆತಂದು,ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಅಧಿಕಾರಿ ಹೇಳಿದರು.
10 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಇಟಾಲಿಯನ್ ಐಷಾರಾಮಿ ಸ್ಪೋರ್ಟ್್ಸ ಕಾರು, ಕಳೆದ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗ್ವಾಲ್ಟೋಲಿ ಪ್ರದೇಶದಲ್ಲಿ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಾಯಗೊಂಡ ಇ-ರಿಕ್ಷಾ ಚಾಲಕ ಮೊಹಮದ್ ತೌಫೀಕ್ (18) ಈ ವಿಷಯದಲ್ಲಿ ದೂರು ದಾಖಲಿಸಿದ್ದಾರೆ. ಆದಾಗ್ಯೂ, ಆರೋಪಿಗಳ ಪರ ವಕೀಲರು ನಂತರ ತೌಫೀಕ್ ದೂರು ನೀಡಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಾಥಮಿಕ ತನಿಖೆಯಲ್ಲಿ ಡಿಕ್ಕಿಯ ಮೊದಲು ಕಾರು ವೇಗವಾಗಿ ಚಲಿಸುತ್ತಿತ್ತು ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವೀಡಿಯೊಗಳು, ಅಪಘಾತದ ನಂತರ ಮಿಶ್ರಾ ಎಂದು ನಂಬಲಾದ ವ್ಯಕ್ತಿಯನ್ನು ಖಾಸಗಿ ಭದ್ರತಾ ಸಿಬ್ಬಂದಿ ಚಾಲಕನ ಸೀಟಿನಿಂದ ಹೊರಗೆಳೆದಿರುವುದು,ಮತ್ತೊಂದು ಎಸ್ಯುವಿಯಲ್ಲಿ ಕುಳಿತಿರುವುದನ್ನು ತೋರಿಸುತ್ತವೆ.
ಪೊಲೀಸರು ಆರಂಭದಲ್ಲಿ ಚಾಲಕನನ್ನುಆರೋಪಿ ಎಂದು ಪಟ್ಟಿ ಮಾಡಿದ್ದರು, ಆದರೆ ನಂತರ ಪ್ರಾಥಮಿಕ ಪುರಾವೆಗಳು ಹೊರಬಂದ ನಂತರ ಶಿವಂ ಮಿಶ್ರಾ ಎಂದು ಹೆಸರಿಸಲು ಅದನ್ನು ತಿದ್ದುಪಡಿ ಮಾಡಿದರು.
ಬುಧವಾರ ನಡೆದ ವಿಚಾರಣೆಯಲ್ಲಿ, ಅಪಘಾತದ ಸಮಯದಲ್ಲಿ ಕಾರನ್ನು ತಾನೇ ಚಲಾಯಿಸುತ್ತಿದ್ದೆ ಎಂದು ಹೇಳಿಕೊಂಡ ಮೋಹನ್ ಲಾಲ್ ಎಂಬ ವ್ಯಕ್ತಿಯ ಶರಣಾಗತಿ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದೆ,
ಮಿಶ್ರಾ ಅವರ ತಂದೆ ಮತ್ತು ಅವರ ವಕೀಲರು ಅಪಘಾತದ ಸಮಯದಲ್ಲಿ ಅವರು ಲಂಬೋರ್ಘಿನಿ ಕಾರನ್ನು ಚಲಾಯಿಸುತ್ತಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಾಡಿಗೆ ಚಾಲಕನೊಬ್ಬ ಚಾಲನೆ ಮಾಡುತ್ತಿದ್ದರು ಮತ್ತು ಮಿಶ್ರಾ ಅಸ್ವಸ್ಥರಾಗಿದ್ದರು ಮತ್ತು ಪ್ರಯಾಣದ ಸಮಯದಲ್ಲಿ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.
