Friday, May 17, 2024
Homeರಾಷ್ಟ್ರೀಯನಿತಾರಿ ಹತ್ಯೆ ಪ್ರಕರಣದಲ್ಲಿ ಸುರೇಂದ್ರ ಕೋಲಿ ಖುಲಾಸೆ

ನಿತಾರಿ ಹತ್ಯೆ ಪ್ರಕರಣದಲ್ಲಿ ಸುರೇಂದ್ರ ಕೋಲಿ ಖುಲಾಸೆ

ಅಲಹಾಬಾದ್,ಅ.16- ನಿತಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಕೋಲಿಯನ್ನು 12 ಪ್ರಕರಣಗಳಲ್ಲಿ ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿದೆ. ವಿಶೇಷವೆಂದರೆ ಇದೇ ಪ್ರಕರಣದಲ್ಲಿ ಆರೋಪಿ ಸುರೇಂದ್ರ ಕೋಲಿಗೆ ವಿಚಾರಣಾ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿತ್ತು. ಈ ಪ್ರಕರಣದ ಮತ್ತೋರ್ವ ಆರೋಪಿ ಮೋನಿಂದರ್ ಸಿಂಗ್ ಪಾಂಡೇರ್ ಅವರನ್ನು ಸಹ ಎರಡು ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದೆ.

ಈ ಎರಡು ಪ್ರಕರಣದಲ್ಲೂ ಇದೇ ಆರೋಪಿಗೆ ವಿಚಾರಣಾ ನ್ಯಾಯಾಲವು ಮರಣದಂಡನೆ ಶಿಕ್ಷೆ ನೀಡಿತ್ತು. ಉತ್ತರಪ್ರದೇಶದ ನೋಯ್ಡಾದಲ್ಲಿ 2005ರಿಂದ 2006ರವರೆಗೆ ಹಲವಾರು ಮಕ್ಕಳ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸುರೇಂದ್ರ ಕೋಲಿ ಮತ್ತು ಮೊನಿಂದರ್ ಸಿಂಗ್ ಪಂಡೇರ್ ಅವರುಗಳ ಕೈವಾಡ ಇರುವುದು ತನಿಖೆಯಿಂದ ಸಾಬೀತಾಗಿತ್ತು.

ಎಲ್ಲಾ ಮಾದರಿಯ ಏರ್‌ಫೀಲ್ಡ್ ಬಳಸುವ ಸಾಮರ್ಥ್ಯ ಅಭಿವೃದ್ಧಿಪಡಿಸುತ್ತಿದ್ದೇವೆ : ಧನ್‍ಕರ್

ಈ ಪ್ರಕರಣವು ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ನೋಯ್ಡಾದ ಹೊರವಲಯದ ಮನೆಯೊಂದರ ಚರಂಡಿಯಲ್ಲಿ ಹಲವಾರು ಮಕ್ಕಳ ಮೃತದೇಹಗಳು ಸಿಕ್ಕಿಬಿದ್ದಿದ್ದವು. ಮಕ್ಕಳಿಗೆ ಸಿಹಿತಿನಿಸುಗಳು, ಚಾಕಲೇಟ್ ಕೊಡುವ ನೆಪದಲ್ಲಿ ಅದರಲ್ಲಿ ಮತ್ತುಬರಿಸಿ ಈ ಇಬ್ಬರು ಕೊಲೆ ಮತ್ತು ಅತ್ಯಾಚಾರ ನಡೆಸುತ್ತಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಉತ್ತರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿತ್ತು. ಸುೀಧಿರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಮಕ್ಕಳ ಅತ್ಯಾಚಾರ ಮತ್ತು ಕೊಲೆ ಮಾಡಿರುವುದು ಕಂಡುಬಂದಿರುವುದರಿಂದ ಇಬ್ಬರಿಗೂ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

RELATED ARTICLES

Latest News