Thursday, November 6, 2025
Home Blog Page 1909

ಇ ಪ್ರಕ್ಯೂರ್ಮೆಂಟ್ ಹ್ಯಾಕಿಂಗ್ ಪ್ರಕರಣ : ಐವರ ಮನೆ ಮೇಲೆ ದಾಳಿ

ಬೆಂಗಳೂರು,ಅ.7- ಸರ್ಕಾರದ ಇ- ಪ್ರಕ್ಯೂರ್ಮೆಂಟ್ ವೆಬ್‍ಸೈಟ್ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿಯಾಗಿ ಮತ್ತಿಬ್ಬರನ್ನು ಬಂಸಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು ಸಾಕ್ಷ್ಯಗಳ ಸಂಗ್ರಹಕ್ಕಾಗಿ ನಗರದ ಐದು ಮಂದಿ ಪ್ರಮುಖ ವ್ಯಕ್ತಿಗಳ ಮನೆಗಳು ಸೇರಿದಂತೆ 7 ಕಡೆ ದಾಳಿ ಮಾಡಿ ಶೋಧ ಕಾರ್ಯಾ ಚರಣೆ ನಡೆಸಿದ್ದಾರೆ.

2019 ರಲ್ಲಿ ಬೆಳಕಿಗೆ ಬಂದಿದ್ದ ಇ-ಪ್ರಕ್ಯೂರ್ಮೆಂಟ್ ಹ್ಯಾಕಿಂಗ್ ಪ್ರಕರಣ ದಿನೇದಿನೇ ಕುತೂಹಲ ಕೆರಳಿಸುತ್ತಿದೆ. ಪ್ರಮುಖ ಆರೋಪಿ ಶ್ರೀಕಿ ನೀಡಿದ ಮಾಹಿತಿ ಆಧರಿಸಿ ಆರಂಭದಲ್ಲೇ 18 ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಕೆಲಸ ಮಾಡಿದ ಪ್ರಮುಖ ಆರೋಪಿಗಳು ಹಾಗೂ ಮಧ್ಯವರ್ತಿಗಳು ಪ್ರಕರಣದಿಂದ ನುಣುಚಿಕೊಂಡಿದ್ದರು. ಕೆಲವರು ತಲೆಮರೆಸಿಕೊಂಡಿದ್ದರು.

ಕಾಂಗ್ರೆಸ್ ಸರ್ಕಾರ ರಚಿಸಿರುವ ವಿಶೇಷ ತನಿಖಾದಳ ಹ್ಯಾಕಿಂಗ್‍ನಿಂದ ಅಕ್ರಮವಾಗಿ ಗಳಿಸಿದ ಹಣವನ್ನು ವರ್ಗಾವಣೆ ಹಾಗೂ ಪಡೆದುಕೊಂಡವರ ಬೆನ್ನು ಬಿದ್ದಿದೆ. ತನಿಖೆಯ ಪ್ರಗತಿಯಲ್ಲಿ ನಾಗ್ಪುರದ ನಿತಿನ್ ಮಿಶ್ರಾ ಮತ್ತು ದರ್ಶಿತ್ ಪಟೇಲ್ ಎಂಬಿಬ್ಬರನ್ನು ಬಂಧಿಸಲಾಗಿದೆ.

ಸಾರ್ವಜನಿಕರಿಗೆ ಮೈಸೂರು ಅರಮನೆ ಪ್ರವೇಶ ನಿರ್ಬಂಧ

ಈ ಆರೋಪಿಗಳು 10.5 ಕೋಟಿ ರೂ. ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಪಂಜಾಬ್‍ನ ಲೂದಿಯಾನದಲ್ಲಿ ಪ್ರಮುಖ ಆರೋಪಿ ಅರವಿಂದ್ ಸಿಂಗ್‍ನನ್ನು ಬಂಧಿಸಲಾಗಿತ್ತು. ಈವರೆಗೂ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ. ಆರೋಪಿ ಶ್ರೀಕಿ ಇ-ಪ್ರಕ್ಯೂರ್ಮೆಂಟ್, ಪೋಕರ್ ಗೇಮಿಂಗ್ ಸೇರಿದಂತೆ ವಿವಿಧ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ. ಹಣ ಲಪಟಾಯಿಸಿದ್ದ ಆರೋಪಗಳಿವೆ. ಅವುಗಳನ್ನು ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ತನಿಖೆಗಳು ನಡೆಯುತ್ತಿವೆ.

ಬಿಟ್‍ಕಾಯಿನ್ ಹಾಗೂ ವೆಬ್‍ಸೈಟ್ ಹ್ಯಾಕಿಂಗ್ ಎರಡೂ ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳ ಮನೆ ಮೇಲೆ 7 ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ. ನ್ಯಾಯಾಲಯದಿಂದ ಅನುಮತಿ ಪಡೆದು ಶೋಧ ಕಾರ್ಯಾಚರಣೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಪೊಲೀಸರು 5 ಮಂದಿಯ ಮನೆ ಹಾಗೂ ಕಚೇರಿಗಳಲ್ಲಿ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಐಷಾರಾಮಿ ಪಲ್ಲಕ್ಕಿ ಸಾರಿಗೆ ಸೇವೆ ಆರಂಭ

ಬೆಂಗಳೂರು,ಅ.7- ಸಾರಿಗೆ ನಿಗಮಗಳಲ್ಲಿ ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಹೈಟೆಕ್ ಸ್ಲೀಪರ್‍ಕೋಚ್ ಬಸ್‍ಗಳ ಸೇವೆಯನ್ನು ಆರಂಭಿಸಲಾಗಿದ್ದು, ಕಡಿಮೆ ಪ್ರಯಾಣ ದರದಲ್ಲಿ ಆರಾಮದಾಯಕ ಸೌಲಭ್ಯ ಒದಗಿಸಲಾಗುತ್ತಿದೆ. ಜೊತೆಗೆ ಪಲ್ಲಕ್ಕಿ ಹೆಸರಿನಲ್ಲಿ ಹೊಸ ಬ್ರಾಂಡಿಂಗ್ ಸೇವೆಯನ್ನು ಸಾರಿಗೆ ನಿಗಮಗಳು ಆರಂಭಿಸಿವೆ.

ಮುಖ್ಯಮಂತ್ರಿಸಿದ್ದರಾಮಯ್ಯನವರು ವಿಧಾನ ಸೌಧದ ಗ್ರಾಂಡ್ ಸ್ಟೆಪ್‍ಗಳಲ್ಲಿ 40 ನಾನ್ ಎಸಿ ಸ್ಲೀಪರ್‍ಕೋಚ್ ಮತ್ತು 100 ಸಾಮಾನ್ಯ ಬಸ್‍ಗಳ ಪ್ರಯಾಣಕ್ಕೆ ಚಾಲನೆ ನೀಡಿದರು. ಇವುಗಳಲ್ಲಿ 13.5 ಮೀಟರ್ ಉದ್ದದ 8 ಬಸ್‍ಗಳಿದ್ದು, ಅವುಗಳಲ್ಲಿ 4 ನಾನ್ ಎಸಿ, ಉಳಿದ 4 ಎಸಿ ಬಸ್‍ಗಳಾಗಿವೆ. ಅತ್ಯಾಧುನಿಕವಾದ ಈ ಬಸ್‍ಗಳು ಐಶಾರಾಮಿ ಸೌಲಭ್ಯ ಹೊಂದಿವೆ. ಪ್ರಮುಖವಾಗಿ ದೂರದ ಬೆಳಗಾವಿ, ಮಂಗಳೂರುನÀಂತಹ ಪ್ರದೇಶಗಳಿಂದ ರಾಜಧಾನಿ ಗೆ ಪ್ರಯಾಣಿಸುತ್ತಿವೆ. ಮುಂದಿನ ಹಂತದಲ್ಲಿ ವಿವಿಧ ಭಾಗಗಳಿಗೂ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದೆ.

ಸ್ಲೀಪರ್‍ಕೋಚ್‍ನ ಪ್ರತಿಯೊಂದು ಬಸ್‍ನಲ್ಲೂ 36 ಸೀಟುಗಳನ್ನು ವ್ಯವಸ್ಥೆ ಮಾಡಲಾಗಿದೆ. 6 ಅಡಿ ಉದ್ದದ ಸೀಟುಗಳಲ್ಲಿ ಆರಾಮದಾಯಕವಾಗಿ ಮಲಗಬಹುದು. ಜೊತೆಗೆ ಕುಳಿತುಕೊಳ್ಳಲೂ ಅವಕಾಶವಿದೆ. ಪ್ರತ್ಯೇಕವಾದ ಲೈಟಿಂಗ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಶೂ ಅಥವಾ ಚಪ್ಪಲಿ ಇಡಲು ಸ್ಥಳಾವಕಾಶ, ಲಗೇಜ್ ಬ್ಯಾಗ್‍ಗಳಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಡಿಜಿಟಲ್ ವಾಚ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳು ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಲಭ್ಯವಾಗುತ್ತಿವೆ.

ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ, 500 ಕೋಟಿ ರೂ.ಗೆ ಬೇಡಿಕೆ

ಪ್ರಾಯೋಗಿಕವಾಗಿ ಆರಂಭವಾಗಿರುವ 13.5 ಅಡಿ ಉದ್ದದ ಈ ಬಸ್‍ಗಳಲ್ಲಿ ಉತ್ತಮವಾದ ಸಸ್ಪೆನ್ಷನ್, ಶಬ್ಧ ನಿಯಂತ್ರಣ, ಚಾಲಕರಿಗೆ ಅಗತ್ಯ ಸೌಲಭ್ಯಗಳಿವೆ. ಪ್ರಯಾಣಿಕರ ಅನುಭವಗಳನ್ನು ಆಧರಿಸಿ ಮುಂದೆ ಇವುಗಳನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಇದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೂ ಸಾರಿಗೆ ನಿಗಮಗಳಲ್ಲಿ 15 ಮತ್ತು 12 ಮೀಟರ್ ಉದ್ದದ ಬಸ್‍ಗಳು ಸಂಚರಿಸುತ್ತಿದ್ದವು. ಕಿರಿದಾದ ಮತ್ತು ಗುಡ್ಡಗಾಡು, ಅರಣ್ಯ ಪ್ರದೇಶಗಳ ರಸ್ತೆಗಳ ತಿರುವುಗಳಲ್ಲಿ ಉದ್ದದ ಬಸ್‍ಗಳ ಸಂಚಾರ ಕಷ್ಟವಾಗುತ್ತಿತ್ತು. ಈಗ 13.5 ಮೀಟರ್ ಉದ್ದದ 8 ಹೊಸ ಬಸ್‍ಗಳನ್ನು ಸೇವೆಗೆ ಸಮರ್ಪಿಸಲಾಗಿವೆ. ಇವು ಕಿರಿದಾದ ಮಾರ್ಗಗಳಲ್ಲೂ ಸುಗಮ ಸಂಚಾರ ಮಾಡಲಿವೆ.

ಇನ್ನು ದೂರದ ಪ್ರಯಾಣಕ್ಕಾಗಿರುವ ಎಕ್ಸ್‍ಪ್ರೆಸ್ ಬಸ್‍ಗಳಲ್ಲೂ ಸೀಟುಗಳ ವಿನ್ಯಾಸವನ್ನು ಪರಿಷ್ಕರಿಸಲಾಗಿದೆ. 54 ರ ಬದಲಾಗಿ 51 ಕ್ಕೆ ಸೀಟು ಸಂಖ್ಯೆಯನ್ನು ಇಳಿಸಲಾಗಿದ್ದು, ಆರಾಮದಾಯಕವಾಗಿ ಕಾಲು ಚಾಚಿಕೊಳ್ಳಲು ಸ್ಥಳಾವಕಾಶ ಮಾಡಲಾಗಿದೆ. ಬಸ್‍ನ ಎತ್ತರವನ್ನು 2 ಅಡಿ ಹೆಚ್ಚಿಸಿರುವುದರಿಂದ ಗಾಳಿ, ಬೆಳಕು ಸಂಚಾರ ಇನ್ನಷ್ಟು ಸುಧಾರಣೆಗೊಂಡು ಪ್ರಯಾಣಿಕರಿಗೆ ಮಲ್ಟಿ ಆಕ್ಸೆಲ್ ಅನುಭವ ಹಿತ ನೀಡಲಿದೆ ಎಂದು ಸಾರಿಗೆ ನಿಗಮಗಳ ಅಧಿಕಾರಿಗಳು ತಿಳಿಸಿದ್ದಾರೆ. ಡಿಜಿಟಲ್ ನೇಮ್ ಬೋರ್ಡ್, ನಿರಂತರವಾಗಿ ರೆಕಾರ್ಡ್ ಆಗುವ ರಿವರ್ಸ್ ಕ್ಯಾಮರಾ, ಬೆಂಕಿ ನಂದಿಸುವ ಸಲಕರಣೆಗಳು ಮತ್ತು ಎಚ್ಚರಿಕೆಯ ಗಂಟೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.


ಪಲ್ಲಕ್ಕಿ ಬ್ರಾಂಡಿಂಗ್ : ಕೆಎಸ್‍ಆರ್‍ಟಿಸಿಯಲ್ಲಿ ಐರಾವತ, ಬಿಎಂಟಿಸಿಯಲ್ಲಿ ವಜ್ರ ಎಂಬ ಬ್ರಾಂಡಿಂಗ್ ಸಾರಿಗೆ ಸೇವೆಗಳು ಇದಾಗಲೇ ಚಾಲ್ತಿಯಲ್ಲಿವೆ. ಅವುಗಳ ಸಾಲಿಗೆ ಹೊಸದಾಗಿ ಸಾರಿಗೆ ನಿಗಮಗಳು ಪಲ್ಲಕ್ಕಿ ಎಂಬ ಹೊಸ ಬ್ರಾಂಡ್‍ಗೆ ಚಾಲನೆ ನೀಡಿದೆ. ಸಂತೋಷ ಪ್ರಯಾಣದಲ್ಲಿದೆ ಎಂಬ ಅಡಿಬರಹದಡಿ ಪಲ್ಲಕ್ಕಿ ಸೇವೆಗಳು ಲೋಕಾರ್ಪಣೆಗೊಂಡಿವೆ. ಶಕ್ತಿ ಯೋಜನೆಯ ಉಚಿತ ಪ್ರಯಾಣ ಸ್ಲೀಪರ್ ಕೋಚ್ ಹೊರತುಪಡಿಸಿದರೆ ಉಳಿದಂತೆ ಎಲ್ಲಾ ಎಕ್ಸ್‍ಪ್ರೆಸ್ ಸಾರಿಗೆ ಸೇವೆಯಲ್ಲೂ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ, 500 ಕೋಟಿ ರೂ.ಗೆ ಬೇಡಿಕೆ

ದೂರದ ಪ್ರಯಾಣಗಳಿಗೆ ಕೆಎಸ್‍ಆರ್‍ಟಿಸಿಯಲ್ಲಿ ನಾನ್ ಎಸಿ ಸ್ಲೀಪರ್‍ಕೋಚ್‍ಗಳ ಬಸ್‍ಗಳು ಕಡಿಮೆ ಇದ್ದವು. ಅದರ ಬೇಡಿಕೆಯನ್ನು ಪರಿಗಣಿಸಿ ಹೊಸ ಬಸ್‍ಗಳನ್ನು ನಿಯೋಜಿಸಲಾಗಿದೆ. ನೂತನ ಬಸ್‍ಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಸ್‍ನ ಒಳ ವಿನ್ಯಾಸಗಳನ್ನು ಪರಿಶೀಲಿಸಿದರು. ರೈಲು ಸೇವೆಯಲ್ಲಿರುವಂತೆಯೇ ಆರಾಮದಾಯಕ ವ್ಯವಸ್ಥೆಗಳಿವೆ. ನಾನು ಕೂತು, ಮಲಗಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

6 ಗಂಟೆ ದೂರದ ಪ್ರಯಾಣ ಇರುವವರಿಗೆ ಇವು ಅನುಕೂಲವಾಗಿವೆ. ಪ್ರತಿ ಕಿ.ಮೀ.ಗೆ 2 ರೂ. ಪ್ರಯಾಣದರವನ್ನು ನಿಗದಿ ಮಾಡಲಾಗಿದೆ ಎಂದು ಕೆಎಸ್‍ಆರ್‍ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೀಟುಗಳನ್ನು ಪರಿಶೀಲಿಸಿದ್ದು, ಚೆನ್ನಾಗಿವೆ, ಪತಿ-ಪತ್ನಿ ಇಬ್ಬರೂ ಪ್ರಯಾಣಿಸಬಹುದು ಎಂದು ಹೇಳಿದರು.

ಇಸ್ರೇಲ್‍ನಲ್ಲಿ ಯುದ್ಧ ಘೋಷಣೆ

ಜೆರುಸಲೇಂ,ಅ.7-ಪ್ಯಾಲೆಸ್ತೇನ್ನ ಗಾಜಾ ಪಟ್ಟಿ ಕಡೆಯಿಂದ ಭೀಕರ ರಾಕೆಟ್ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನು ಘೋಷಣೆ ಮಾಡಿದೆ. ಗಾಜಾ ಪಟ್ಟಿಯಿಂದ ಹಲವು ಬಾರಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಆರೋಪಿಸಿದೆ. ಹಮಾಸ್ ಉಗ್ರಗಾಮಿಗಳು 5ಸಾವಿರಕ್ಕೂ ಹೆಚ್ಚು ರಾಕೆಟ್‍ಗಳನ್ನು ಇಸ್ರೇಲ್‍ನೊಳಗೆ ನುಗ್ಗಿಸಿದ್ದಾರೆ. ಇವು ಇಸ್ರೆಲ್‍ನಾದ್ಯಂತ ಭೀಕರ ಸಾವು ನೋವುಗಳಿಗೆ ಕಾರಣವಾಗಿರುವುದು ವಿಡಿಯೋಗಳಲ್ಲಿ ಬಹಿರಂಗಗೊಂಡಿವೆ.

ಇಸ್ರೇಲ್‍ನಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟಿರುವ ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯ ಬಗ್ಗೆ ದೇಶದ ರಕ್ಷಣಾ ಪಡೆಗಳು ಜನರಿಗೆ ಎಚ್ಚರಿಕೆ ನೀಡಿವೆ. ದಾಳಿಯಲ್ಲಿ ಪ್ಯಾರಾಗ್ಲೈಡಗರ್‍ಳನ್ನು ಬಳಸಲಾಗಿದ್ದು, ನಾಗರಿಕರ ಪ್ರಾಣ ಹಾನಿಗೆ ಕಾರಣವಾಗಿವೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ದಾಖಲೆ 100 ಪದಕ ಸಾಧನೆ

ಈ ಭೀಕರ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನು ಘೋಷಿಸಿದೆ. ಇದು ಜಾಗತಿಕವಾಗಿ ಭಾರೀ ಸಂಚಲವನ್ನು ಸೃಷ್ಟಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆ, ಗಾಜಾ ಪಟ್ಟಿಯಿಂದ ಹಲವಾರು ಭಯೋತ್ಪಾದಕರು ಇಸ್ರೇಲಿ ಭೂಪ್ರದೇಶಕ್ಕೆ ನುಸುಳಿದ್ದಾರೆ. ಗಾಜಾ ಪಟ್ಟಿಯ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ತಮ್ಮ ಮನೆಗಳಲ್ಲಿ ಉಳಿಯಲು ನಾವು ಮನವಿ ಮಾಡುತ್ತೇವೆ ಎಂದು ತಿಳಿಸಿದೆ. ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‍ನಾದ್ಯಂತ ಸೈರನ್‍ಗಳು ಮೊಳಗುತ್ತಿವೆ. ದೇಶದಾದ್ಯಂತ ಬಾಂಬ್‍ಗಳು ಸ್ಪೋಟಗೊಳ್ಳುತ್ತಿವೆ.

ಹಮಾಸ್ನ ಸಶಸ್ತ್ರ ವಿಭಾಗವು ಆಪರೇಷನ್ ಅಲ್-ಅಕ್ಸಾ ಫ್ಲಡ್ ಅನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ. 20 ನಿಮಿಷಗಳ ಮೊದಲ ದಾಳಿಯಲ್ಲಿ 5ಸಾವಿರ ರಾಕೆಟ್‍ಗಳನ್ನು ಹಾರಿಸಿದೆ ಎಂದು ಹೇಳಿಕೊಂಡಿದೆ. ನಾವು ಎಲ್ಲಾ ಇಸ್ರೇಲ್ ಅಪರಾಧಗಳನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ ಎಂದು ಹಮಾಸ್ ಹೇಳಿಕೊಂಡಿದೆ. ಗಾಜಾ ಪಟ್ಟಿಗೆ ಹೊಂದಿಕೊಂಡಿರುವ ಇಸ್ರೇಲ್ ಗಡಿಯುದ್ದಕ್ಕೂ ವಾರಗಳಿಂದ ಸಂಘರ್ಷಗಳು ಉಂಟಾಗಿದ್ದವು. ಇಸ್ರೇಲಿ ಆಕ್ರಮಿತ ಪಶ್ಚಿಮ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಲಿದ್ದವು. ಇದು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಹಮಾಸ್ ಉಗ್ರರು ಪ್ರತಿಕಾರದ ದಾಳಿ ನಡೆಸಿದ್ದಾರೆ.

ಇಸ್ರೇಲ್‍ನ ರಕ್ಷಣಾ ಸಚಿವ ಜೋವ್ ಗ್ಯಾಲಂಟ್ ಅವರು ಯುದ್ಧ ಸಾರುವ ಪ್ರಕ್ರಿಯೆಗೆ ಅನುಮೋದಿಸಿದ್ದಾರೆ. ಮಿಲಿಟರಿಯ ಅಗತ್ಯಗಳಿಗೆ ಅನುಗುಣವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಯೋಧರಿಗೆ ಸೂಚಿಸಿದ್ದಾರೆ. ಇಸ್ರೇಲಿ ಬ್ರಾಡ್ಕಾಸ್ಟಿಂಗ್ ಅಥಾರಿಟಿ ವರದಿಗಳ ಪ್ರಕಾರ, ಹಮಾಜ್ ಹೋರಾಟಗಾರರು ಇಸ್ರೇಲ್ ಸ್ಡೆರೋಟ್‍ನಲ್ಲಿ ಪೊಲೀಸ್ ಠಾಣೆಯ ಮೇಲೆ ಹಿಡಿತ ಸಾಧಿಸಿದ್ದಾರೆ.

ಬಿಎಸ್‍ವೈ ರಾಜ್ಯ ಪ್ರವಾಸಕ್ಕೆ ವರಿಷ್ಠರಿಂದ ಇನ್ನೂ ಸಿಕ್ಕಿಲ್ಲ ಅನುಮತಿ

ಸಂಘರ್ಷದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಪ್ಯಾಲೇಸ್ಟಿನಿಯನ್ ಸೈನಿಕರು ಇಸ್ರೇಲ್‍ನ ಸ್ಡೆರೋಟ್ನಾ ಸುತ್ತಲೂ ತಿರುಗಾಡುತ್ತಿದ್ದಾರೆ. ಬೀದಿಗಳಲ್ಲಿ ನಾಗರಿಕರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ ಎಂದು ಹೇಳಿದೆ. ಗಾಜಾ ಪಟ್ಟಿಯ ಗಡಿ ಮೇಲೆ ಇಸ್ರೇಲ್ ಸೇನೆಯು ತನ್ನ ನಿಯಂತ್ರಣವನ್ನು ಕಳೆದುಕೊಂಡಿದೆ ಎಂದು ಹಲವಾರು ವರದಿಗಳು ಹೇಳುತ್ತಿವೆ. ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಗಾಜಾ ಪಟ್ಟಿಯಿಂದ 80 ಕಿಮೀ ವ್ಯಾಪ್ತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಬಿಜೆಪಿ ಪೋಸ್ಟರ್ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು,ಅ.7-ರಾಹುಲ್‍ಗಾಂಧಿಯವರನ್ನು ರಾವಣನಿಗೆ ಹೋಲಿಕೆ ಮಾಡಿದ ಬಿಜೆಪಿಯ ವಿವಾದಿತ ಪೋಸ್ಟರ್ ಅನ್ನು ಖಂಡಿಸಿ ಕಾಂಗ್ರೆಸ್ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೆಂಗಳೂರಿನ ಎಲ್ಲಾ ಕಾಂಗ್ರೆಸ್ ಘಟಕಗಳೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್, ಹಿರಿಯ ನಾಯಕರಾದ ಎಚ್.ಎಂ.ರೇವಣ್ಣ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಬಿಜೆಪಿಯವರಿಗೆ ರಾಹುಲ್‍ಗಾಂಧಿಯವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಆಕ್ಷೇಪಾರ್ಹ ಪೋಸ್ಟರ್‍ಗಳನ್ನು ಪ್ರಕಟಿಸಿ ಅವಹೇಳನ ಮಾಡುವ ಪ್ರಯತ್ನ ಮಾಡಿದೆ. ಇದು ರಾಹುಲ್‍ ಗಾಂಧಿಯವರ ಜನಪ್ರಿಯತೆ ತಗ್ಗಿಸಲು ಸಾಧ್ಯವಿಲ್ಲ.

ಈ ಹಿಂದೆ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನ ನೀಡಿದ ಬಿಜೆಪಿಯವರು ಕಪ್ಪುಹಣವನ್ನು ವಿದೇಶದಿಂದ ತಂದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಿರುವುದಾಗಿ ಹೇಳಿದರು.

ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳ ಸೆಂಚುರಿ ಭಾರಿಸಿದ ಭಾರತ, ಪ್ರಧಾನಿ ಅಭಿನಂದನೆ

ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಯುವಕರಲ್ಲಿ ಆಸೆ ಹುಟ್ಟಿಸಿದರು. ಅದ್ಯಾವುದೂ ಈಡೇರಿಲ್ಲ. ಕಳೆದ 9 ವರ್ಷಗಳಲ್ಲಿ ದೇಶದ ಅಭಿವೃದ್ಧಿಯನ್ನು ಹಿಮ್ಮುಖವಾಗಿ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಮರೆಮಾಚಲು ವಿವಾದಿತ ಕಾನೂನುಗಳನ್ನು ಜಾರಿಗೆ ತರುತ್ತಾರೆ. ಭಾವನಾತ್ಮಕ ರಾಜಕಾರಣದ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಾರೆ. ಈಗ ವಿವಾದಿತ ಪೋಸ್ಟರ್‍ಗಳ ಮೂಲಕ ಅವಹೇಳನ ಮಾಡುವ ಪ್ರವೃತ್ತಿಗೆ ಕೈ ಹಾಕಿದ್ದಾರೆ. ಇದಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಬಿಎಸ್‍ವೈ ರಾಜ್ಯ ಪ್ರವಾಸಕ್ಕೆ ವರಿಷ್ಠರಿಂದ ಇನ್ನೂ ಸಿಕ್ಕಿಲ್ಲ ಅನುಮತಿ

ಬೆಂಗಳೂರು, ಅ.7- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಇಲ್ಲಿಯವರೆಗೂ ಅನುಮತಿ ಸಿಕ್ಕಿಲ್ಲ. ತಮ್ಮ ರಾಜ್ಯ ಪ್ರವಾಸ ಕುರಿತು ಸೆಪ್ಟೆಂಬರ್ ಆರಂಭದಲ್ಲಿಯೇ ಪಕ್ಷಕ್ಕೆ ಔಪಚಾರಿಕವಾಗಿ ಪ್ರಸ್ತಾಪಿಸಿದ್ದರೂ ಸಹ ಇಲ್ಲಿಯವರೆಗೂ ಪಕ್ಷದ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರು ಎಲ್ಲಾ 30 ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಮತ್ತು ತಾಲೂಕು ನಾಯಕರನ್ನು ಭೇಟಿ ಮಾಡಲು ಪ್ರಸ್ತಾಪಿಸಿದ್ದರು. ಆ ಮೂಲಕ ಸುಮಾರು ಏಳು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಅವರನ್ನು ಪ್ರೋತ್ಸಾಹಿಸಲು ಉದ್ದೇಶಿಸಿದರು.

ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿ ಆಂತರಿಕ ಅಘೋಷಿತ ಶೀತಲ ಸಮರ ಇದೆ. ಅದೇ ಕಾರಣದಿಂದ ಪಕ್ಷದ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದು ಮೂಲಗಳು ಹೇಳುತ್ತವೆ. ಆದಾಗ್ಯೂ, ಬಿಎಸ್‍ವೈ ಹೊರಗೆ ಹೋಗಿ ಪ್ರಚಾರ ಮಾಡಿದರೆ ಮಾತ್ರ ಬಿಜೆಪಿ ಉಳಿದು ಹೆಚ್ಚಿನ ಸ್ಥಾನಗಳನ್ನು ಮರುಪಡೆಯುತ್ತದೆ. ವಿಶೇಷವಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪಕ್ಷ ಅನುಮತಿ ನೀಡದಿದ್ದರೆ ಏನು ಮಾಡಲು ಸಾಧ್ಯ ಎಂದು ಅವರ ಆಪ್ತರೊಬ್ಬರು ಬೇಸರ ಹೊರ ಹಕಿದ್ದಾರೆ.

2000 ರೂ. ಮುಖಬೆಲೆಯ ನೋಟು ಬದಲಾವಣೆಗೆ ಇಂದೇ ಕೊನೆ ದಿನ

ಸತತ ಮೂರನೇ ವರ್ಷ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಕ್ಷವು ಅವರನ್ನು ಕಾಯುವಂತೆ ಕೇಳಿದೆ. ಪ್ರವಾಸದ ಬಗ್ಗೆ ಯಡಿಯೂರಪ್ಪ ಅವರು ಶೀಘ್ರದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಸರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದ್ದು, ಅದಾದ ನಂತರ ಯಡಿಯೂರಪ್ಪ ತಮ್ಮ ಪ್ರವಾಸವನ್ನು ಪ್ರಾರಂಭಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ಕೆಲವು ಭ್ರಷ್ಟ ವ್ಯಕ್ತಿಗಳೊಂದಿಗೆ ವಿಜಯೇಂದ್ರ ಅವರ ಸಂಪರ್ಕದ ವಿಷಯವನ್ನು ಎತ್ತುತ್ತಿರುವ ಯಡಿಯೂರಪ್ಪ ಅವರನ್ನು ವಿರೋಧಿಸುವ ಗುಂಪು ಅದಕ್ಕೆ ಅಡ್ಡಗಾಲು ಹಾಕುತ್ತಿದೆ ಎನ್ನಲಾಗುತ್ತಿದೆ.

ಚೀನಾಗೆ ಮಾಹಿತಿ ನೀಡಿದ ಅಮೆರಿಕದ ಸಾರ್ಜೆಂಟ್ ಬಂಧನ

ಯಡಿಯೂರಪ್ಪ ಅವರ ಸಹಾಯಕರಲ್ಲಿ ಒಬ್ಬರಾಗಿದ್ದ ಉಮೇಶ್ ಮೇಲೆ ಇಡಿ ದಾಳಿ ನಡೆಸಿದಾಗ ಇದು ಬಹಿರಂಗವಾಗಿದೆ. ಯಡಿಯೂರಪ್ಪನವರ ವಿರೋ ಗುಂಪು ಕೂಡ ಅವರ ಮತ್ತೊಬ್ಬ ಪುತ್ರ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಲು ಪ್ರಯತ್ನಿಸುತ್ತಿದೆ. ಆದರೆ, ವಿಜಯೇಂದ್ರಗೆ ಉನ್ನತ ಹುದ್ದೆ ಸಿಕ್ಕರೆ ಸಂತಸ ತರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಒಮ್ಮೆ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ 2019ರಲ್ಲಿ ಮಾಡಿದಂತೆ ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ಕೈಗೊಳ್ಳುವುದು ಯಡಿಯೂರಪ್ಪ ಅವರ ಕರ್ತವ್ಯ ಎಂದು ಪಕ್ಷದ ಮೂಲಗಳು ಸೂಚಿಸಿವೆ.

ಸಾರ್ವಜನಿಕರಿಗೆ ಮೈಸೂರು ಅರಮನೆ ಪ್ರವೇಶ ನಿರ್ಬಂಧ

ಮೈಸೂರು, ಅ. 7- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಾಜಮನೆತನದವರಿಂದ ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ನಡೆಯಲಿರುವ ಹಿನ್ನೆಲೆ ನವರಾತ್ರಿಯ ದಿನಗಳಲ್ಲಿ ಸಾರ್ವಜನಿಕರು, ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

ಅ. 9ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಸಿಂಹಾಸನ ಜೋಡಣೆ ಕಾರ್ಯಕ್ರಮದ ಪ್ರಯುಕ್ತ ಪ್ರವೇಶವಿರುವುದಿಲ್ಲ. ಅ.15ರಂದು ಖಾಸಗಿ ದರ್ಬಾರ್ ಹಿನ್ನೆಲೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರಮನೆಗೆ ಪ್ರವೇಶವಿರುವುದಿಲ್ಲ.

2000 ರೂ. ಮುಖಬೆಲೆಯ ನೋಟು ಬದಲಾವಣೆಗೆ ಇಂದೇ ಕೊನೆ ದಿನ

ಅ.23ರಂದು ಆಯುಧ ಪೂಜೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಅ.24ರಂದು ಜಂಬೂಸವಾರಿ ಪ್ರಯುಕ್ತ ಇಡೀ ದಿನ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧವಿದ್ದು, ಪಾಸ್ ಇದ್ದವರು ಅರಮನೆ ಅಂಗಳದಲ್ಲಿ ಜಂಬೂಸವಾರಿ ವೀಕ್ಷಿಸಲು ಅವಕಾಶ.

ನ.8 ರಂದು ಸಿಂಹಾಸನ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರಮನೆ ಪ್ರವೇಶವಿರುವುದಿಲ್ಲ ಎಂದು ಅರಮನೆ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ, 500 ಕೋಟಿ ರೂ.ಗೆ ಬೇಡಿಕೆ

ನವದೆಹಲಿ, ಅ.7- ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವ ಬೆದರಿಕೆಯ ಇ-ಮೇಲ್ ತಲ್ಲಣ ಸೃಷ್ಟಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬೆದರಿಕೆ ಇಮೇಲ್ ಸ್ವೀಕರಿಸಿದೆ ಎಂದು ಹೇಳಿದೆ. ಎನ್‍ಐಎಗೆ ಬಂದಿರುವ ಬೆದರಿಕೆ ಇಮೇಲ್ ನಲ್ಲಿ ನಿಮ್ಮ ಸರ್ಕಾರದಿಂದ ನಮಗೆ 500 ಕೋಟಿ ರೂಪಾಯಿ ನೀಡಬೇಕು. ಲಾರೆನ್ಸ್ ಬಿಷ್ಣೋಯ್ ಬಿಡುಗಡೆ ಮಾಡಬೇಕು ಎಂದು ಬರೆಯಲಾಗಿದೆ.

ಇ-ಮೇಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಮತ್ತು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಜೊತೆಗೆ ಸರ್ಕಾರದಿಂದ 500 ಕೋಟಿ ರೂ.ಗಳ ಬೇಡಿಕೆ ಇಡಲಾಗಿದೆ. ಹಣ ಪಾವತಿ ಜತೆಗೆ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‍ರನ್ನು ಬಿಡುಗಡೆ ಮಾಡಬೇಕು ಎಂದೂ ಬರೆಯಲಾಗಿದೆ.

ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ. ಬೆದರಿಕೆ ಇಮೇಲ್ ಬಗ್ಗೆ ಎನ್‍ಐಎ ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಗುಜರಾತ್ ಪೊಲೀಸರನ್ನು ಹೊರತುಪಡಿಸಿ, ಪ್ರಧಾನಿ ಮೋದಿಯವರ ಭದ್ರತೆಗೆ ಸಂಬಂಸಿದ ಹಲವು ಏಜೆನ್ಸಿಗಳಿಗೆ ಈ ಬೆದರಿಕೆ ಇಮೇಲ್ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2000 ರೂ. ಮುಖಬೆಲೆಯ ನೋಟು ಬದಲಾವಣೆಗೆ ಇಂದೇ ಕೊನೆ ದಿನ

2023ರ ವಿಶ್ವಕಪ್‍ನ ಹಲವು ಪಂದ್ಯಗಳು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವುದರಿಂದ ಮುಂಬೈ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಬೆದರಿಕೆಯ ಇ-ಮೇಲ್ ಎಲ್ಲಿಂದ ಬಂದಿದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ಎಲ್ಲೆಡೆ ಪೊಲೀಸರು ಅಲರ್ಟ್ ಆಗಿದ್ದಾರೆ. ಅ.5ರಂದು ಬೆಳಿಗ್ಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‍ಗೆ ಬೆದರಿಕೆ ಇ-ಮೇಲ್ ಬಗ್ಗೆ ಎನ್‍ಐಎ ಎಚ್ಚರಿಕೆ ಸ್ವೀಕರಿಸಿದೆ.

ನಮಗೆ ನಿಮ್ಮ ಸರ್ಕಾರದಿಂದ 500 ಕೋಟಿ ರೂ. ಬೇಕು. ಬಂಧನದಲ್ಲಿರುವ ಲಾರೆನ್ಸ್ ಬಿಷ್ಣೋಯ್ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾಳೆ ನರೇಂದ್ರ ಮೋದಿ ಜೊತೆಗೆ ನರೇಂದ್ರ ಮೋದಿ ಸ್ಟೇಡಿಯಂಅನ್ನು ಸ್ಪೋಟಿಸುತ್ತೇವೆ. ಭಾರತದಲ್ಲಿ ಎಲ್ಲವೂ ಮಾರಾಟವಾಗಿದೆ, ಆದ್ದರಿಂದ ನಾವೂ ಏನು ಬೇಕಾದರೂ ಖರೀದಿಸುತ್ತೇವೆ. ನೀವು ಎಷ್ಟೇ ರಕ್ಷಿಸಿದರೂ ಏನೂ ಮಾಡಲಾಗುವುದಿಲ್ಲ. ಅವರನ್ನು ನಮ್ಮಿಂದ ಉಳಿಸಲು ಸಾಧ್ಯವಾಗುವುದಿಲ್ಲ. ನೀವು ಮಾತನಾಡಲು ಬಯಸಿದರೆ ಈ ಮೇಲ್‍ನಲ್ಲಿ ಮಾತ್ರ ಮಾತನಾಡಿ ಎಂದು ಬರೆಯಲಾಗಿದೆ.

ಚೀನಾಗೆ ಮಾಹಿತಿ ನೀಡಿದ ಅಮೆರಿಕದ ಸಾರ್ಜೆಂಟ್ ಬಂಧನ

ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಉದ್ಘಾಟನಾ ಪಂದ್ಯವು ಅ.5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಲಾರೆನ್ಸ್ ಬಿಷ್ಣೋಯ್ 2014 ರಿಂದ ಜೈಲಿನಲ್ಲಿದ್ದಾರೆ. ಅವರು ಜೈಲಿನ ಒಳಗಿನಿಂದ ತನ್ನ ಗ್ಯಾಂಗ್ ಜೊತೆ ಸಂಪರ್ಕದಲ್ಲಿದ್ದಾನೆ ಎನ್ನಲಾಗುತ್ತಿದೆ. ಲಾರೆನ್ಸ್ ವಿರುದ್ಧ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಮೂಸೆವಾಲಾ ಮೇಲಿನ ದಾಳಿಯ ಹೊಣೆಯನ್ನು ಲಾರೆನ್ಸ್ï ಬಿಷ್ಣೋಯ್ ವಹಿಸಿಕೊಂಡಿದ್ದರು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ದಾಖಲೆ 100 ಪದಕ ಸಾಧನೆ

ಹ್ಯಾಂಗ್‍ಝೌ,ಅ.7-ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ನೂರು ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಏಕೆಂದರೆ, ಭಾರತ ಏಷ್ಯಾಡ್ ಇತಿಹಾಸದಲ್ಲಿ ಮೊದಲ ಬಾರಿ 100ಕ್ಕೂ ಅಧಿಕ ಪದಕ ಗೆಲುವಿನ ದಾಖಲೆ ನಿರ್ಮಿಸಿದೆ. 2018ರಲ್ಲಿ 70 ಪದಕ ಗೆದ್ದಿದ್ದು ಇದುವರೆಗಿನ ಗರಿಷ್ಠ ಸಾಧನೆ ಆಗಿತ್ತು.

14 ನೇ ದಿನದಂದು ಭಾರತದ ಮಹಿಳಾ ಕಬ್ಬಡಿ ತಂಡ ಚಿನ್ನ ಗೆಲ್ಲುವ ಮೂಲಕ ಪದಕಗಳ ಶತಕವನ್ನು ಪೂರೈಸಿತು. ಆರ್ಚರಿ ಸ್ಪರ್ಧೆಯಲ್ಲಿ 2 ಚಿನ್ನ ಮತ್ತು ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಭಾರತಕ್ಕೆ ಲಭಿಸಿದೆ. ಭಾರತ ಇದುವರೆಗೆ ಒಟ್ಟು 100 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 25 ಚಿನ್ನ, 35 ಬೆಳ್ಳಿ ಹಾಗೂ 40 ಕಂಚಿನ ಪದಕಗಳು ಸೇರಿವೆ. ಆರ್ಚರಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಜ್ಯೋತಿ ವೆನ್ನಮ್ ದಿನವನ್ನು ಆರಂಭಿಸಿದರೆ, ಅದಿತಿ ಸ್ವಾಮಿ ಕಾಂಪೌಂಡ್ ಆರ್ಚರಿಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಮಹಿಳಾ ಕಬ್ಬಡ್ಡಿ ತಂಡವು ಚಿನ್ನದ ಪದಕ ಗೆಲ್ಲುವುದರೊಂದಿಗೆ ಬಹು-ಕ್ರೀಡಾ ಸ್ಪರ್ಧೆಯಲ್ಲಿ 100 ಪದಕಗಳ ಗಡಿಯನ್ನು ತಲುಪಿದೆ. ಮಹಿಳೆಯರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಜ್ಯೋತಿ ಸುರೇಖಾ ಅವರು ದಕ್ಷಿಣ ಕೊರಿಯಾದ ಸೊ ಚೇವನ್ ಅವರನ್ನು 149-145 ಸ್ಕೋರ್‍ನಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅದೇ ರೀತಿ ಮಹಿಳೆಯರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಅದಿತಿ ಗೋಪಿಚಂದ್ ಅವರು ಇಂಡೋನೇಷ್ಯಾದ ಜಿಲಿಝತ್ ಫಡ್ಲಿಯನ್ನು 146-140 ಸ್ಕೋರ್‍ನಿಂದ ಮಣಿಸಿ ಕಂಚಿನ ಪದಕ ಜಯಿಸಿದರು.

ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳ ಸೆಂಚುರಿ ಭಾರಿಸಿದ ಭಾರತ, ಪ್ರಧಾನಿ ಅಭಿನಂದನೆ

ಬೆಳಗ್ಗೆ 7.10ಕ್ಕೆ ನಡೆದ ಪುರುಷರ ಕಂಪೌಂಡ್ ಆರ್ಚರಿ ವಿಭಾಗ ಚಿನ್ನ-ಬೆಳ್ಳಿಗೆ ಅಭಿಷೇಕ್ ವರ್ಮ ಮತ್ತು ಓಜಸ್ ಡಿಯೋಟಾಲ್ ಕಾದಾಟ ನಡೆಸಿದರು. ಇದರಲ್ಲಿ ಓಜಸ್ ಡಿಯೋಟಾಲ್ ಚಿನ್ನ ಪದಕ ಗಳಿಸಿದರೆ, ಅಭಿಷೇಕ್ ವರ್ಮ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಓಜಸ್ 2023ರ ಏಷ್ಯನ್ ಗೇಮ್ಸ್‍ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆ ವಿರುದ್ಧ 14-9 ಅಂತರದಲ್ಲಿ ಮುನ್ನಡೆ ಸಾಧಿಸಿ ಚಿನ್ನದ ಪದಕ ಗಳಿಸಿತು. ಆರಂಭಿಕ ಪಂದ್ಯದಲ್ಲಿ ಉಭಯ ತಂಡಗಳು 34-34 ರಿಂದ ಟೈ ಆಗಿದ್ದವು. ಮೊದಲಾರ್ಧದಲ್ಲಿ ಭಾರತದ ರೈಡರ್ಸ್ ಆರು ಬೋನಸ್ ಅಂಕಗಳನ್ನು ಗಳಿಸಿದರು.

ದ್ವಿತೀಯಾರ್ಧದಲ್ಲಿ ಚೈನೀಸ್ ತೈಪೆ ಮುನ್ನಡೆ ಸಾಧಿಸಿ 16 ಅಂಕ ಗಳಿಸಿದರೆ, ಭಾರತೀಯರು ಕೇವಲ 12 ಅಂಕ ಗಳಿಸಲಷ್ಟೇ ಶಕ್ತರಾದರು. ಆದರೆ, ಭಾರತದ ರೈಡರ್ಸ್ ಎರಡು ಬೋನಸ್ ಅಂಕಗಳನ್ನು ಗಳಿಸಿದರು. ಅಂತಿಮವಾಗಿ ಮೊದಲಾರ್ಧದಲ್ಲಿನ ತಮ್ಮ ಅಮೋಘ ಪ್ರದರ್ಶನದಿಂದಾಗಿ, ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಕಬಡ್ಡಿ ಆಟಗಾರರು ಚೈನೀಸ್ ತೈಪೆ ವಿರುದ್ಧ 26-25 ಅಂತರದಿಂದ ಜಯಗಳಿಸಿ ಚಿನ್ನದ ಪದಕ ಪಡೆದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ಕ್ರೀಡಾ ಪ್ರಾಧಿಕಾರ, ಸಂಪೂರ್ಣ ಪ್ರಾಬಲ್ಯ! ನಮ್ಮ ಮಹಿಳಾ ಕಬಡ್ಡಿ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿದೆ, ಚೈನೀಸ್ ತೈಪೆ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಮಹಿಳಾ ತಂಡದ ಅಪ್ರತಿಮ ಕೌಶಲ್ಯ, ದೃಢತೆ ಮತ್ತು ಟೀಮ್ ವರ್ಕ್ ರಾಷ್ಟ್ರಕ್ಕೆ ಕೀರ್ತಿ ತಂದಿದೆ. ಮತ್ತು ಭಾರತವು ಇದುವರೆಗೆ 100 ಪದಕಗಳು ಜಯಸಿದೆ ಎಂದು ಹೇಳಿದೆ.

2000 ರೂ. ಮುಖಬೆಲೆಯ ನೋಟು ಬದಲಾವಣೆಗೆ ಇಂದೇ ಕೊನೆ ದಿನ

ಮಧ್ಯಾಹ್ನ 12.30ರಿಂದ ಪುರುಷರ ವಿಭಾಗದಲ್ಲಿ ಇರಾನ್ ವಿರುದ್ಧ ಫೈನಲ್ ಕಬಡ್ಡಿ ಸ್ಪರ್ಧೆ ನಡೆಯಲಿದೆ. ಅಲ್ಲದೆ, ಬೆಳಗ್ಗೆ 11.30ರಿಂದ ಪುರುಷರ ವಿಭಾಗದ ಕ್ರಿಕೆಟ್‍ನಲ್ಲಿ ಭಾರತ ಅಫ್ಘಾನಿಸ್ತಾನ ವಿರುದ್ಧ ಫೈನಲ್ನಲ್ಲಿ ಸೆಣಸಾಡಲಿದೆ. ಹಾಕಿ, ಚೆಸ್ ಮತ್ತು ಬ್ಯಾಡ್ಮಿಂಟನ್‍ನಿಂದ ತಲಾ ಒಂದೊಂದು ಪದಕ ಖಚಿತವಾಗಿದೆ. ಈ ಬಾರಿ ನೂರಕ್ಕಿಂತ ಹೆಚ್ಚು ಪದಕಗಳು ಖಚಿತವಾಗಿದೆ. ಭಾನುವಾರ ಕ್ರೀಡಾಕೂಟದ ಕೊನೆಯ ದಿನವಾಗಿದೆ. ಆದರೆ ಭಾರತದ ಕ್ರೀಡಾಸ್ಪರ್ಧೆಗಳು ಶನಿವಾರವೇ ಮುಕ್ತಾಯಗೊಳ್ಳಲಿವೆ.

ಮನರೇಗಾ ಯೋಜನೆ ಡಿಜಿಟಲಿಕರಣದ ಹಿಂದೆ ದುರುದ್ದೇಶ : ಜೈರಾಮ್ ರಮೇಶ್

ನವದೆಹಲಿ, ಅ 7 (ಪಿಟಿಐ) ಪಾರದರ್ಶಕತೆಯ ಹೆಸರಿನಲ್ಲಿ ನರೇಂದ್ರ ಮೋದಿ ಸರ್ಕಾರವು ಮನರೇಗಾ ಯೋಜನೆಯನ್ನು ಬಲವಂತದ ಡಿಜಿಟಲೀಕರಣ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆರ್ಥಿಕ ವರ್ಷಕ್ಕೆ ಆರು ತಿಂಗಳೊಳಗೆ ಪ್ರಮುಖ ಗ್ರಾಮೀಣ ಉದ್ಯೋಗ ಕಾರ್ಯಕ್ರಮವಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ(ಎಂಜಿಎನ್‍ಆರ್‍ಇಜಿಎಸï) ಹಣ ಖಾಲಿಯಾಗಿದೆ ಎಂದು ಮಾಧ್ಯಮ ವರದಿ ಮಾಡಿದ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಎಕ್ಸ್‍ನಲ್ಲಿನ ಪೋಸ್ಟ್‍ನಲ್ಲಿ, ರಮೇಶ್ ಒಂದು ಕಡೆ, ಈ ಹಣಕಾಸು ವರ್ಷದ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಭಾರತದಲ್ಲಿನ ಎಲ್ಲಾ ವಾಹನಗಳ ಮಾರಾಟದಲ್ಲಿ ಶೇಕಡಾ 48 ರಷ್ಟು ಎಸ್‍ಯುವಿಗಳಾಗಿದ್ದು, ಅದೇ ಆರು ತಿಂಗಳ ಅವಧಿಯಲ್ಲಿ ಮನರೇಗಾ ಯೋಜನೆ ಅಡಿಯಲ್ಲಿ ಇಡೀ ವರ್ಷಕ್ಕೆ 60,000 ಕೋಟಿ ಬಜೆಟ್ ಖಾಲಿಯಾಗಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳ ಸೆಂಚುರಿ ಭಾರಿಸಿದ ಭಾರತ, ಪ್ರಧಾನಿ ಅಭಿನಂದನೆ

ಇದು ದೇಶದಾದ್ಯಂತ ಹೆಚ್ಚುತ್ತಿರುವ ಗ್ರಾಮೀಣ ಸಂಕಷ್ಟ ಮತ್ತು ಹೆಚ್ಚುತ್ತಿರುವ ಅಸಮಾನತೆಯನ್ನು ಸ್ಪಷ್ಟವಾಗಿ ಸೂಚಿಸುವುದಲ್ಲದೆ, ವೇತನ ಪಾವತಿಗಳನ್ನು ವಿಳಂಬಗೊಳಿಸುವ ಮೂಲಕ ಮನರೇಗಾ ಕೆಲಸದ ಬೇಡಿಕೆಯನ್ನು ಪರೋಕ್ಷವಾಗಿ ನಿಗ್ರಹಿಸುತ್ತಿರುವ ಮೋದಿ ಸರ್ಕಾರದ ಆದ್ಯತೆಗಳನ್ನು ತೋರಿಸುತ್ತದೆ ಎಂದು ರಮೇಶ್ ಹೇಳಿದರು.

ವಿಷಯಗಳನ್ನು ಇನ್ನಷ್ಟು ಹದಗೆಡಿಸಲು, ಮೋದಿ ಸರ್ಕಾರವು ಪಾರದರ್ಶಕತೆಯ ಹೆಸರಿನಲ್ಲಿ ಡಿಜಿಟಲೀಕರಣವನ್ನು ಒತ್ತಾಯಿಸಿದೆ, ಆದರೆ ನಿಜವಾಗಿಯೂ ಕಾರ್ಯಕ್ರಮದ ಅಗತ್ಯವಿರುವವರಲ್ಲಿ ಮನರೇಗಾಗಿ ಬೇಡಿಕೆಯನ್ನು ನಿರುತ್ಸಾಹಗೊಳಿಸುವ ಸಾಧನವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದರು.

2000 ರೂ. ಮುಖಬೆಲೆಯ ನೋಟು ಬದಲಾವಣೆಗೆ ಇಂದೇ ಕೊನೆ ದಿನ

ನವದೆಹಲಿ,ಅ.7- ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‍ನಲ್ಲಿ ಬದಲಾಯಿಸಿಕೊಳ್ಳಲು ಇಂದು ಕೊನೆಯ ದಿನವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಅ. 7 ರ ನಂತರ, 2,000 ಕರೆನ್ಸಿ ನೋಟುಗಳ ವಿನಿಮಯವನ್ನು 19 RBI ಸಂಚಿಕೆ ಕಚೇರಿಗಳಲ್ಲಿ ಮಾತ್ರ ಅನುಮತಿಸಲಾಗುವುದಂತೆ.

ಪ್ರತಿ ವಹಿವಾಟಿಗೆ ಗರಿಷ್ಠ 20,000 ನೋಟುಗಳ ನಗದು ಠೇವಣಿ ಮಿತಿ ಇದೆ. ಆದರೆ 19 ಆರ್‍ಬಿಐ ಸಂಚಿಕೆ ಕಚೇರಿಗಳಲ್ಲಿ, ಜನರು ತಮ್ಮ ಭಾರತೀಯ ಬ್ಯಾಂಕ್ ಖಾತೆಗಳಲ್ಲಿ ಯಾವುದೇ ಮೊತ್ತಕ್ಕೆ ಕ್ರೆಡಿಟ್ ಮಾಡಲು 2,000 ನೋಟುಗಳನ್ನು ಪ್ರಸ್ತುತಪಡಿಸಬಹುದು.

ಇಂದಿನ ಗಡುವಿನ ನಂತರ 2,000 ನೋಟುಗಳಿಗೆ ಏನಾಗುತ್ತದೆ ಎಂಬುದು ಇಲ್ಲಿದೆ,
ಆರ್‍ಬಿಐ ಪ್ರಕಾರ, 2,000 ಕರೆನ್ಸಿ ನೋಟು ಅಕ್ಟೋಬರ್ 7 ರ ಗಡುವಿನ ನಂತರವೂ ಕಾನೂನುಬದ್ಧವಾಗಿ ಉಳಿಯುತ್ತದೆ, ಆದಾಗ್ಯೂ, ಅವುಗಳನ್ನು ವಹಿವಾಟುಗಳಿಗೆ ಸ್ವೀಕರಿಸಲಾಗುವುದಿಲ್ಲ. ಇಂದಿನ ನಂತರ, ನೋಟುಗಳನ್ನು ಆರ್‍ಬಿಐನೊಂದಿಗೆ ಮಾತ್ರ ಬದಲಾಯಿಸಬಹುದು.

ಚೀನಾಗೆ ಮಾಹಿತಿ ನೀಡಿದ ಅಮೆರಿಕದ ಸಾರ್ಜೆಂಟ್ ಬಂಧನ

ಆರ್‍ಬಿಐ ಮೂಲಗಳ ಪ್ರಕಾರ, 2000 ಬ್ಯಾಂಕ್ ನೋಟುಗಳನ್ನು ವ್ಯಕ್ತಿಗಳು/ಸಂಸ್ಥೆಗಳು 19 ಆರ್‍ಬಿಐ ಸಂಚಿಕೆ ಕಛೇರಿಗಳಲ್ಲಿ ಒಂದು ಬಾರಿಗೆ 20,000 ಮಿತಿಯವರೆಗೆ ವಿನಿಮಯ ಮಾಡಿಕೊಳ್ಳಬಹುದು. ವ್ಯಕ್ತಿಗಳು/ಸಂಸ್ಥೆಗಳು 2000 ಬ್ಯಾಂಕ್ ನೋಟುಗಳನ್ನು ಟೆಂಡರ್ ಮಾಡಬಹುದು.

ಅಂತಹ ವಿನಿಮಯ ಅಥವಾ ಕ್ರೆಡಿಟ್ ಸಂಬಂಧಿತ ಆರ್‍ಬಿಐ, ಸರ್ಕಾರದ ನಿಯಮಗಳು, ಮಾನ್ಯ ಗುರುತಿನ ದಾಖಲೆಗಳ ಸಲ್ಲಿಕೆ ಮತ್ತು ಆರ್‍ಬಿಐ ಸೂಕ್ತವೆಂದು ಪರಿಗಣಿಸಿದಂತೆ ಶ್ರದ್ಧೆಗಳಿಗೆ ಒಳಪಟ್ಟಿರುತ್ತದೆ ಎಂದು ಪತ್ರಿಕಾ ಟಿಪ್ಪಣಿ ಓದಿದೆ.

2,000 ನೋಟುಗಳನ್ನು ಬದಲಾಯಿಸುವುದು ಹೇಗೆ..?
ಆರ್‍ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ (ಆರ್‍ಒ) ವ್ಯಕ್ತಿಗಳು 2000 ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ಹೊಂದಿದ್ದಾರೆ. 19 ಆರ್‍ಬಿಐ ಸಂಚಿಕೆ ಕಚೇರಿಗಳಲ್ಲಿ ಅಹಮದಾಬಾದ್, ಬೆಂಗಳೂರು, ಬೇಲಾಪುರ್, ಭೋಪಾಲ, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂ ಸೇರಿವೆ. ಇದಲ್ಲದೆ, ಹತ್ತಿರದ ಯಾವುದೇ ಬ್ಯಾಂಕ್ ಶಾಖೆಯಲ್ಲಿ 2000 ನೋಟುಗಳನ್ನು ಬದಲಾಯಿಸಬಹುದು.

ದೇಶದೊಳಗಿನ ವ್ಯಕ್ತಿಗಳು/ಸಂಸ್ಥೆಗಳು 2,000 ಬ್ಯಾಂಕ್‍ನೋಟುಗಳನ್ನು ಇಂಡಿಯಾ ಫೋಸ್ಟ್ ಮೂಲಕ ಕಳುಹಿಸಬಹುದು, ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಕ್ರೆಡಿಟ್ ಮಾಡಲು 19ಆರ್‍ಬಿಐ ಇಶ್ಯೂ ಆಫೀಸ್‍ಗಳಲ್ಲಿ ಯಾವುದಾದರೂ ವಿಳಾಸವನ್ನು ಕಳುಹಿಸಬಹುದು.

ಆರ್‍ಬಿಐ ಮಾರ್ಗಸೂಚಿಗಳ ಪ್ರಕಾರ, ಈ ನೋಟುಗಳು ಕಾನೂನುಬದ್ಧ ಟೆಂಡರ್ ಆಗಿರುವುದರಿಂದ, ವಿನಂತಿಯ ಚೀಟಿ ಅಥವಾ ಐಡಿ ಪುರಾವೆಯ ಅಗತ್ಯವಿಲ್ಲದೆ ವಿನಿಮಯ ಮಾಡಿಕೊಳ್ಳಬೇಕು. ಆದಾಗ್ಯೂ, ಕೆಲವು ಸಾರ್ವಜನಿಕ ವಲಯದ ಬ್ಯಾಂಕ್‍ಗಳು ವಿಭಿನ್ನ ವಿಧಾನವನ್ನು ಜಾರಿಗೆ ತಂದಿವೆ. ಆದ್ದರಿಂದ, ಸುಗಮ ವಹಿವಾಟನ್ನು ಖಚಿತಪಡಿಸಿಕೊಳ್ಳಲು ಈ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳುವಾಗ ಐಡಿ ಪುರಾವೆಯನ್ನು ಹೊಂದಲು ಸಲಹೆ ನೀಡಲಾಗುತ್ತದೆ.

ನ್ಯೂಸ್‍ಕ್ಲಿಕ್ ಮಾಜಿ ಸಿಬ್ಬಂದಿಯ ಕೇರಳದ ನಿವಾಸದ ಮೇಲೆ ದೆಹಲಿ ಪೊಲೀಸರ ದಾಳಿ

ಪ್ರಮುಖವಾಗಿ, ಪ್ರಧಾನಿ ನರೇಂದ್ರ ಮೋದಿ ರಾತ್ರೋರಾತ್ರಿ ಹೆಚ್ಚಿನ ಮೌಲ್ಯದ 1,000 ಮತ್ತು 500 ನೋಟುಗಳನ್ನು ರದ್ದುಗೊಳಿಸಿದ ನಂತರ ್ಕಆರ್‍ಬಿಐ ನವೆಂಬರ್ 2016 ರಲ್ಲಿ 2,000 ನೋಟು ಮುದ್ರಿಸಲು ಪ್ರಾರಂಭಿಸಿತು.