Thursday, May 2, 2024
Homeಬೆಂಗಳೂರುಪೀಣ್ಯ ಮೇಲ್ಸೇತುವೆಗೆ ಹಿಡಿದಿದ್ದ ಶಾಪ ಡಿಸಂಬರ್‌ಗೆ ಮುಕ್ತಿ

ಪೀಣ್ಯ ಮೇಲ್ಸೇತುವೆಗೆ ಹಿಡಿದಿದ್ದ ಶಾಪ ಡಿಸಂಬರ್‌ಗೆ ಮುಕ್ತಿ

ಬೆಂಗಳೂರು,ಅ.16- ಕಳೆದ ಒಂದೂವರೆ ವರ್ಷದಿಂದ ಭಾರಿ ವಾಹನಗಳಿಗೆ ಸ್ಥಗಿತಗೊಳಿಸಲಾಗಿದ್ದ ಪೀಣ್ಯ ಮೇಲ್ಸುತೆಯನ್ನು ಬರುವ ಡಿಸಂಬರ್‌ನಿಂದ ಎಲ್ಲಾ ಮಾದರಿಯ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ. ರಾಜ್ಯದ 18 ಕ್ಕೂ ಹೆಚ್ಚು ಜಿಲ್ಲೆ ಹಾಗೂ ಗೋವಾ,ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕಲ್ಪಿಸುವ ಪ್ಲೈಓವರ್ ಅನ್ನು ಡಿಸಂಬರ್ ಅಂತ್ಯದ ವೇಳೆಗೆ ಮುಕ್ತಗೊಳಿಸಲಾಗುವುದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞ ಡಾ. ಚಂದ್ರ ಕಿಶನ್ ಮಾಹಿತಿ ನೀಡಿದ್ದಾರೆ.

ಪೀಣ್ಯ ಮೇಲ್ಸೇತುವೆಯ ಕೆಲ ಪಿಲ್ಲರ್‍ಗಳಲ್ಲಿ ಕಾಣಿಸಿಕೊಂಡ ದೋಷದಿಂದ ಕಳೆದ ಒಂದೂವರೆ ವರ್ಷದಿಂದ ಲಾರಿ ಬಸ್ ಗಳ ಸಂಚಾರಕ್ಕೆ ಈ ಮೇಲ್ಸೆತುವೆ ಮೇಲಿನ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಕೇವಲ ಲಘು ವಾಹನಗಳು ಮಾತ್ರ ಸಂಚರಿಸುವ ಅವಕಾಶ ನೀಡಲಾಗಿತ್ತು.

‘ಕಲೆಕ್ಷನ್ ಮಾಸ್ಟರ್’ ಸಿಎಂ ಸಿದ್ದರಾಮಯ್ಯ : ಬಿಜೆಪಿ ವಾಗ್ದಾಳಿ

ಪ್ಲೈಓವರ್ ಪೀಲ್ಲರ್ ಗಳ ಜೈಂಟ್ ನಲ್ಲಿ ಕೇಬಲ್ ತುಕ್ಕು ಹಿಡಿದಿದೆ ಅಂತ ಐಐಎಸ್‍ಸಿ ವರದಿ ನೀಡಿದ್ದ ಹಿನ್ನೇಲೆಯಲ್ಲಿ ಪ್ಲೈ ಓವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ಹೀಗಾಗಿ ಈ ಭಾಗದ ರಸ್ತೆಯಲ್ಲಿ ಪ್ರತಿನಿತ್ಯ ವಾಹನ ದಟ್ಟಣೆ ಹೆಚ್ಚಾಗುತ್ತಿತ್ತು.

ಸುಮಾರು 5 ಕಿ.ಮೀ. ಉದ್ದ ನಿರ್ಮಿಸಿರುವ ಈ ಮೇಲ್ಸೇತುವೆಯಲ್ಲಿ 120 ಪಿಲ್ಲರ್‍ಗಳಿವೆ. ಸದ್ಯ ಐಐಎಸ್‍ಸಿ ವರದಿ ಆಧರಿಸಿ ಪ್ಲೈಓವರ್ ನ್ನ ಎಲ್ಲಾ ಕೇಬಲ್ ಗಳನ್ನೂ ಬದಲಿಸಲಾಗಿದೆ. ಇನ್ನೂ ಕೇಬಲ್ ಬದಲಿಸಿದ ನಂತರ ಭಾರಿ ವಾಹನಗಳ ಓಡಾಟಕೆ ಈ ಮೇಲ್ಸೆತುವೆ ಯೋಗ್ಯವಾಗಿದೆ ಅಂತ ಐಐಎಸ್‍ಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಇದೆ ಡಿಸೆಂಬರ್ ಅಂತ್ಯದೋಳಗೆ ಪ್ಲೈಓವರ್ ಮೇಲೆ ಬೃಹತ್ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಈ ರಸ್ತೆಯಲ್ಲಿ ಭಾರಿ ವಾಹನಗಳ ಟೆಸ್ಟ್ ಡ್ರೈವ್ ಕೂಡ ನಡೆಸಲಾಗಿದೆ.

RELATED ARTICLES

Latest News