Friday, May 17, 2024
Homeಮನರಂಜನೆನಟಿಯರಾದ ಶ್ರೀಲೀಲಾ-ಪೂಜಾಹೆಗ್ಡೆ ನಡುವೆ ಬಿಗ್ ಫೈಟ್

ನಟಿಯರಾದ ಶ್ರೀಲೀಲಾ-ಪೂಜಾಹೆಗ್ಡೆ ನಡುವೆ ಬಿಗ್ ಫೈಟ್

ಬೆಂಗಳೂರು, ಜ.12- ನಮ್ಮ ಸ್ಯಾಂಡಲ್‍ವುಡ್ ನಟಿಯರು ಪರಭಾಷೆಯಲ್ಲೂ ತಮ್ಮ ಮಿಂಚು ಹರಿಸಿದ್ದಾರೆ. ಟಾಲಿವುಡ್‍ನಲ್ಲೂ ಕನ್ನಡತಿಯರಾದ ರಶ್ಮಿಕಾ ಮಂದಣ್ಣ , ಪೂಜಾ ಹೆಗ್ಡೆ , ಶ್ರೀಲೀಲಾ ಅವರು ಈಗ ನಂಬರ್ 1 ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಸಂಕ್ರಾಂತಿಯ ಸುಗ್ಗಿಯ ಸಂಭ್ರಮದ ವೇಳೆಯಲ್ಲೇ ಕನ್ನಡತಿಯರಾದ ಶ್ರೀಲೀಲಾಳ ಭರಾಟೆ ಜೋರಾಗಿದ್ದರೆ, ಚಂದನವನದಲ್ಲಿ ತಮ್ಮ ಕಂಪನ್ನು ಚೆಲ್ಲದಿದ್ದರೂ ಮಂಗಳೂರಿನ ಬೆಡಗಿಯರಾಗಿರುವ ಪೂಜಾ ಹೆಗ್ಡೆ ಕೂಡ ಕೊಂಟಕಟ್ಟಿ ಪೈಪೋಟಿ ನಡೆಸಲು ಅಖಾಡಕ್ಕಿಳಿದಿದ್ದಾರೆ.

ಆದರೆ ಈ ನಟಿಯರು ನೇರಾನೇರವಾಗಿ ಕಾದಾಟ ನಿಂತಿಲ್ಲ, ಬದಲಿಗೆ ಪಾತ್ರದ ಆಯ್ಕೆಯ ಮೂಲಕ ಸಮರ ಸಾರಿದ್ದಾರೆ. ಮಹೇಶ್‍ಬಾಬು ನಟನೆಯ ಗುಂಟೂರು ಕಾರಂ ಚಿತ್ರದಲ್ಲಿ ಕನ್ನಡತಿ ಪೂಜಾಹೆಗ್ಡೆ ಮೊದಲ ನಾಯಕಿಯಾಗಿ, ಶ್ರೀಲೀಲಾ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪೂಜಾಹೆಗ್ಡೆಯನ್ನು ಈ ಪ್ರಾಜೆಕ್ಟ್‍ನಿಂದ ಕೈಬಿಟ್ಟ ತ್ರಿವಿಕ್ರಮ್ ಶ್ರೀಲೀಲಾರನ್ನೇ ಮೊದಲ ನಾಯಕಿಯಾಗಿ ಆಯ್ಕೆ ಮಾಡಿದ್ದು ಈ ಸಿನಿಮಾವು ಈ ವಾರ ಅಭಿಮಾನಿಗಳ ಮನಗೆಲ್ಲಲು ಹೊರಟಿದೆ.

ಜನರಿಗೆ ಹತ್ತಿರವಾಗುವ ಯೋಜನೆ ನೀಡುವ ಯೋಗ್ಯತೆ ಬಿಜೆಪಿಗಿಲ್ಲ : ಸಚಿವ ಮಧು ಬಂಗಾರಪ್ಪ

ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಮುಲೊ ಚಿತ್ರದಲ್ಲಿ ಕನ್ನಡತಿ ಪೂಜಾಹೆಗ್ಡೆಯವರ ಗ್ಲಾಮರ್ ಮತ್ತು ಟ್ಯಾಲೆಂಟ್ ಅನ್ನು ತ್ರಿವಿಕ್ರಮ್ ಜಬರದಸ್ತ್ ಆಗಿ ತೋರಿಸಿದ್ದರು. ಅದರಿಂದ ಪೂಜಾಹೆಗ್ಡೆ ಚಿತ್ರಜೀವನಕ್ಕೆ ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು. ಪ್ರಿನ್ಸ್ ಮಹೇಶ್‍ಬಾಬು ನಟನೆಯ ತಮ್ಮ ಮುಂದಿನ ಚಿತ್ರದಲ್ಲೂ ಪೂಜಾಹೆಗ್ಡೆ ಅವರನ್ನೇ ಹಾಕಿಕೊಳ್ಳಬೇಕೆಂದು ನಿರ್ದೇಶಕರು ಬಯಸಿದ್ದರು.

ಆದರೆ ಕೊನೆಯ ಕ್ಷಣದಲ್ಲಿ ಭರಾಟೆ ನಟಿ ಶ್ರೀಲೀಲಾರನ್ನು ಆಯ್ಕೆ ಮಾಡಿಕೊಂಡು ಗುಂಟೂರು ಖಾರಂನಲ್ಲಿ ಪ್ರೇಕ್ಷಕರ ಕಣ್ಣನ್ನು ಕೆಂಪಾಗಿಸುವಂತೆ ತೋರಿಸಿದ್ದಾರೆ. ಈ ಚಿತ್ರದ ಮೂಲಕ ಶ್ರೀಲೀಲಾಳ ಖದರ್ ಟಾಲಿವುಡ್‍ನಲ್ಲಿ ಮತ್ತಷ್ಟು ಹೆಚ್ಚಾಗಲಿ ಎಂದು ಆಶಿಸೋಣ.

RELATED ARTICLES

Latest News