Friday, May 3, 2024
Homeಬೆಂಗಳೂರುನಾಯಿ ಬೊಗಳಿದ್ದಕ್ಕೆ ವಿದ್ಯಾರ್ಥಿನಿಯನ್ನು ಎಳೆದಾಡಿದ ಪುಂಡ ಅರೆಸ್ಟ್

ನಾಯಿ ಬೊಗಳಿದ್ದಕ್ಕೆ ವಿದ್ಯಾರ್ಥಿನಿಯನ್ನು ಎಳೆದಾಡಿದ ಪುಂಡ ಅರೆಸ್ಟ್

ಬೆಂಗಳೂರು, ಮಾ. 12-ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವರ ಮಗಳನ್ನು ಎಳೆದಾಡಿದ್ದ ಬಿಹಾರಿ ಮೂಲದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಂಕರ್ ಬಂಧಿತ ಆರೋಪಿ. ಈತ ಪಟ್ಟೇಗಾರ ಪಾಳ್ಯದ ಮುನೇಶ್ವರ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದನು.

ಟೈಲ್ಸ್ ಹಾಕುವ ಕೆಲಸಮಾಡಿಕೊಂಡಿದ್ದ ಆರೋಪಿ ಶಂಕರ್, ಮಾ.7 ರಂದು ರಾತ್ರಿ 10.30ರ ಸುಮಾರಿನಲ್ಲಿ ತನ್ನ ಸ್ನೇಹಿತರನ್ನು ಕರೆದುಕೊಂಡು ತನ್ನ ಮನೆ ಬಳಿ ಬಂದಿದ್ದಾನೆ.ಆ ಸಂದರ್ಭದಲ್ಲಿ ಪಕ್ಕದ ಮನೆಯ ನಾಯಿ ಬೊಗಳುತ್ತಿದ್ದಾಗ, ಶಂಕರ್ ಹಾಗೂ ಸ್ನೇಹಿತರು ನಾಯಿಗೆ ಹೊಡೆದಿದ್ದಾರೆ.

ನಾಯಿ ಸಾಕಿದ್ದ ಮನೆ ಮಾಲೀಕರು ಹೊರಗೆ ಬಂದು ಯಾಕಪ್ಪಾ ಹೀಗೆ ಕೂಗಾಡುತ್ತಿದ್ದಿರಾ ಎಂದು ಕೇಳುತ್ತಿದ್ದಂತೆ, ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಅಪ್ಪನ ರಕ್ಷಣೆಗೆ ಬಂದ ಎರಡನೇ ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿರುವ ಮಗಳನ್ನು ಶಂಕರ್ ಗುಂಪು ಎಳೆದಾಡಿದೆ.

ಈ ಘಟನೆ ಬಗ್ಗೆ ವಿದ್ಯಾರ್ಥಿನಿ ಮಹಿಳಾ ಆಯೋಗದ ಅಧ್ಯಕ್ಷರಿಗೆ ವಿಡಿಯೋ ಕಳುಹಿಸಿ, ನ್ಯಾಯ ಕೊಡಿಸುವಂತೆ ಸಂದೇಶ ಕಳುಹಿಸಿದ್ದರು. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರು ಆರೋಪಿ ಶಂಕರ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News