Sunday, April 28, 2024
Homeರಾಷ್ಟ್ರೀಯವಾಹನ ತಪಾಸಣೆ ವೇಳೆ ಸಿಕ್ತು 5.12 ಕೋಟಿ ರೂ.ನಗದು..!

ವಾಹನ ತಪಾಸಣೆ ವೇಳೆ ಸಿಕ್ತು 5.12 ಕೋಟಿ ರೂ.ನಗದು..!

ಗುಡೂರು, ಫೆ.2 (ಪಿಟಿಐ) ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಗುಡೂರು ಎಂಬಲ್ಲಿ ವಾಹನಗಳ ತಪಾಸಣೆ ವೇಳೆ 5.12 ಕೋಟಿ ರೂಪಾಯಿ ನಗದು ಸಹಿತ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಿಲ್ಲಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವರಗಲಿ ಕ್ರಾಸಿಂಗ್‍ನಲ್ಲಿ ಪಿ ಸಾಯಿಕೃಷ್ಣ (56), ಎಂ ಶ್ರೀಧರ್ (48) ಮತ್ತು ಜಿ ರವಿ (32) ಎಂಬುವರಿಂದ 3.67 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಮದ್ಯ ಹಾಗೂ ಇತರೆ ನಿಷೇತ ವಸ್ತುಗಳ ವಾಹನಗಳ ತಪಾಸಣೆ ವೇಳೆ ನಗದು ಪತ್ತೆಯಾಗಿದೆ ಎಂದು ಗುಡೂರು ಉಪವಿಭಾಗದ ಪೊಲೀಸ್ ಅಧಿಕಾರಿ ಎಂ.ಸೂರ್ಯನಾರಾಯಣ ರೆಡ್ಡಿ ತಿಳಿಸಿದ್ದಾರೆ. ಚಿನ್ನವನ್ನು ಖರೀದಿಸಲು ಚೆನ್ನೈಗೆ ಹೋಗುತ್ತಿದ್ದೇವೆ ಎಂದು ಮೂವರು ವ್ಯಕ್ತಿಗಳು ಪೆÇಲೀಸರಿಗೆ ತಿಳಿಸಿದ್ದಾರೆ ಆದರೆ ಅವರ ಹಕ್ಕುಗಳನ್ನು ದೃಢೀಕರಿಸಲು ಅವರಿಗೆ ಪುರಾವೆಗಳನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ರೆಡ್ಡಿ ಹೇಳಿದರು.

ಎರಡನೆ ಘಟನೆಯಲ್ಲಿ ಎಂ.ಲಕ್ಷ್ಮಣ್ ರಾವ್ (24) ಮತ್ತು ಕೆ.ಮಹೇಶ್ ಕುಮಾರ್ (26) ಎಂಬುವರನ್ನು ಬೆಳಗ್ಗೆ 6 ಗಂಟೆ ಸುಮಾರಿಗೆ ಚಿಲ್ಲಕೂರು ಬೈಪಾಸ್ ರಸ್ತೆ ಜಂಕ್ಷನ್‍ನಲ್ಲಿ ವಾಹನದಿಂದ 95.5 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕಕ್ಕೆ ಕೇಂದ್ರ ಹಣಕಾಸು ಸಚಿವರ ಕೊಡುಗೆ ಏನು..? : ಸಚಿವ ಖರ್ಗೆ ಪ್ರಶ್ನೆ

ಮೂರನೇ ಘಟನೆಯಲ್ಲಿ ಮುಬಾರಕ್ ರೆಸ್ಟೊರೆಂಟ್ ಬಳಿ ಕೆ ಸೂರ್ಯನಾರಾಯಣ ಮೂರ್ತಿ (59) ಎಂಬುವವರಿಂದ 50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಎಲ್ಲಾ ಆರು ಜನರನ್ನು ಬಂಧಿಸಲಾಗಿದೆ, ಅವರು ಪರಸ್ಪರ ಸಂಬಂಧ ಹೊಂದಿಲ್ಲ ಎಂದು ರೆಡ್ಡಿ ಹೇಳಿದರು.

ಮುಂದಿನ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆ ಅಕಾರಿಗಳ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಲೋಕಸಭೆ ಚುನಾವಣೆ ಮತ್ತು ಕೆಲವೇ ತಿಂಗಳುಗಳಲ್ಲಿ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನಗದು ವಶಪಡಿಸಿಕೊಳ್ಳಲಾಗಿದೆ.

RELATED ARTICLES

Latest News