ನಿತ್ಯ ನೀತಿ : ಹೆತ್ತವರ ದುಡಿಮೆಯಲ್ಲಿ ಕುಳಿತು ತಿನ್ನುವುದಕ್ಕಿಂತ ನಾವು ದುಡಿದು ಹೆತ್ತವರನ್ನು ಕೂರಿಸಿ ತಿನ್ನುವಷ್ಟು ಅದೃಷ್ಟವಂತರಾದರೆ ಸಾಕು…
ಪಂಚಾಂಗ : ಸೋಮವಾರ, 12-01-2026
ವಿಶ್ವಾವಸುನಾಮ ಸಂವತ್ಸರ / ಆಯನ: ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಪುಷ್ಯ / ಪಕ್ಷ: ಕೃಷ್ಣ / ತಿಥಿ: ನವಮಿ / ನಕ್ಷತ್ರ: ಸ್ವಾತಿ / ಯೋಗ: ಧೃತಿ / ಕರಣ: ವಣಿಜ್
ಸೂರ್ಯೋದಯ – ಬೆ.06.46
ಸೂರ್ಯಾಸ್ತ – ಸಾ.06.11
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ. ಸಮತೋಲಿತ ರೀತಿಯಲ್ಲಿ ಆಹಾರ ಸೇವಿಸಿ.
ವೃಷಭ: ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ. ಸಮತೋಲಿತ ರೀತಿಯಲ್ಲಿ ಆಹಾರ ಸೇವಿಸಿ.
ಮಿಥುನ: ಒಂದೇ ಸಮಯಕ್ಕೆ ನಾನಾ ಬಗೆಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ಕಟಕ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಸಿಂಹ: ಕಚೇರಿಯಲ್ಲಿ ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಮಾತನಾಡುವ ಮುನ್ನ ಯೋಚಿಸಿ.
ಕನ್ಯಾ: ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ತುಲಾ: ಭಯದ ಸ್ವಭಾವ ದಿಂದ ಕಾರ್ಯಕ್ಷೇತ್ರದಲ್ಲಿ ಹಿನ್ನಡೆ ಸಾಧಿಸುವಿರಿ.
ವೃಶ್ಚಿಕ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಧನುಸ್ಸು: ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುವ ನಿಮ್ಮ ಮೇಲೆ ಮೇಲ ಕಾರಿಗಳಿಗೆ ಹೆಚ್ಚು ಭರವಸೆ ಮೂಡಲಿದೆ.
ಮಕರ: ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ.
ಕುಂಭ: ಕೃಷಿಕರಿಗೆ ಅಲ್ಪ ಪ್ರಮಾಣದ ಲಾಭ ಸಿಗಲಿದೆ.
ಮೀನ: ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಿ. ಉತ್ತಮ ಆದಾಯ ಬರಲಿದೆ.
