Tuesday, May 5, 2026
Homeರಾಷ್ಟ್ರೀಯಬಂಗಾಳಕೊಲ್ಲಿಯಲ್ಲಿ ಕ್ಷಿಪಣಿ ಪರೀಕ್ಷೆಗೆ ಭಾರತದಿಂದ NOTAM ಬಿಡುಗಡೆ

ಬಂಗಾಳಕೊಲ್ಲಿಯಲ್ಲಿ ಕ್ಷಿಪಣಿ ಪರೀಕ್ಷೆಗೆ ಭಾರತದಿಂದ NOTAM ಬಿಡುಗಡೆ

India issues NOTAM for long-range missile test in Bay of Bengal

ನವದೆಹಲಿ, ಮೇ. 5 – ಭಾರತವು ತನ್ನ ರಕ್ಷಣಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ತೀರ್ಮಾನಿಸಿದ್ದು, ಬಂಗಾಳಕೊಲ್ಲಿಯ ಸುಮಾರು 3,550 ಕಿ.ಮೀ. ವ್ಯಾಪ್ತಿಯನ್ನು ಅಪಾಯಕಾರಿ ವಲಯವೆಂದು ನೋಟಾಮ್‌ ಘೋಷಿಸಿದೆ.

ಈ ದೀರ್ಘ ವ್ಯಾಪ್ತಿಯ ಕಾರಿಡಾರ್‌ ಭಾರತದ ಪ್ರಮುಖ ಪರಮಾಣು ಸಾಮರ್ಥ್ಯದ ಅಗ್ನಿ-4 ಕ್ಷಿಪಣಿ ಉಡಾವಣೆಯ ಮುನ್ಸೂಚನೆ ಎಂದೇ ಭಾವಿಸಲಾಗುತ್ತಿದೆ.ಭಾರತದ ಪರಮಾಣು ತ್ರಿಕೋನದ ಬಲ ರಕ್ಷಣಾ ಮೂಲಗಳ ಪ್ರಕಾರ, ಪ್ರಸ್ತುತ ಘೋಷಿಸಲಾಗಿರುವ 3,500 ರಿಂದ 4,000 ಕಿ.ಮೀ ವ್ಯಾಪ್ತಿಯು ಮಧ್ಯಂತರ-ಶ್ರೇಣಿಯ ಬ್ಯಾಲಿಸ್ಟಿಕ್‌ ಕ್ಷಿಪಣಿಯಾದ ಅಗ್ನಿ-4 ರ ಸಾಮರ್ಥ್ಯಕ್ಕೆ ಹೊಂದಿಕೆಯಾಗುತ್ತದೆ.

ಇದು ಎರಡು ಹಂತದ ಘನ-ಇಂಧನ ಚಾಲಿತ ಕ್ಷಿಪಣಿಯಾಗಿದ್ದು, 1,000 ಕೆಜಿ ತೂಕದ ಸಿಡಿತಲೆಯನ್ನು ಹೊತ್ತೊಯ್ಯಬಲ್ಲದು. ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನೋಟಮ್‌ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.

ಇದು ವಾಯುಯಾನ ಅಧಿಕಾರಿಗಳು ಪೈಲಟ್‌ಗಳು ಮತ್ತು ವಿಮಾನ ಸಿಬ್ಬಂದಿಗೆ ನೀಡುವ ಸಮಯ-ಸೂಕ್ಷ್ಮ ಹಾಗೂ ನಿರ್ಣಾಯಕ ಅಧಿಸೂಚನೆಯಾಗಿದೆ.ವಿಮಾನ ಹಾರಾಟದ ಹಾದಿಯಲ್ಲಿ ಎದುರಾಗಬಹುದಾದ ತಾತ್ಕಾಲಿಕ ಅಪಾಯಗಳು, ರನ್‌ವೇ ಮುಚ್ಚುವಿಕೆ ಅಥವಾ ವಿಮಾನ ನಿಲ್ದಾಣದ ಸೇವೆಗಳಲ್ಲಿನ ಬದಲಾವಣೆಗಳ ಬಗ್ಗೆ ಇದು ನೈಜ-ಸಮಯದ ಮಾಹಿತಿ ನೀಡುತ್ತದೆ.

ದೀರ್ಘ-ಶ್ರೇಣಿಯ ಕ್ಷಿಪಣಿ ಪರೀಕ್ಷೆಗಳು ಅಥವಾ ಹೆಚ್ಚಿನ ಅಪಾಯದ ಮಿಲಿಟರಿ ಕಾರ್ಯಾಚರಣೆಗಳ ಸಮಯದಲ್ಲಿ, ನಿರ್ದಿಷ್ಟ ವಾಯುಪ್ರದೇಶವನ್ನು ನಾಗರಿಕ ವಿಮಾನಗಳಿಗೆ ನಿರ್ಬಂಧಿಸಲು ಅನ್ನು ಬಳಸಲಾಗುತ್ತದೆ. ಇದು ಮಿಲಿಟರಿ ಕ್ಷಿಪಣಿಗಳು ಅಥವಾ ಡ್ರೋನ್‌ಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವುದಲ್ಲದೆ, ವಾಣಿಜ್ಯ ವಿಮಾನಗಳು ಅಪಘಾತಕ್ಕೆ ಈಡಾಗದಂತೆ ರಕ್ಷಿಸುತ್ತದೆ.

ಬಂಗಾಳಕೊಲ್ಲಿಯಲ್ಲಿ ಭಾರತ ನಡೆಸಲಿರುವ ಅಗ್ನಿ-3 ಕ್ಷಿಪಣಿ ಪರೀಕ್ಷೆಗೂ ಮುನ್ನ ಸುಮಾರು 3,550 ಕಿ.ಮೀ ವ್ಯಾಪ್ತಿಯಲ್ಲಿ ವಾಯುಪ್ರದೇಶವನ್ನು ನಿರ್ಬಂಧಿಸಲು ಇಂತಹದ್ದೇ ಒಂದು ಆದೇಶ ಹೊರಡಿಸಲಾಗಿದೆ. ಪೈಲಟ್‌ಗಳು ತಮ್ಮ ಹಾರಾಟದ ಯೋಜನೆ ರೂಪಿಸುವ ಮೊದಲು ಈ ಎನ್ಕೋಡ್‌ ಮಾಡಿದ ಸೂಚನೆಗಳನ್ನು ಕಡ್ಡಾಯವಾಗಿ ಪರಿಶೀಲಿಸುತ್ತಾರೆ.

ಆಧುನೀಕರಣದ ಪರ್ವ ಭಾರತವು ಇತ್ತೀಚಿನ ತಿಂಗಳುಗಳಲ್ಲಿ ಕ್ಷಿಪಣಿ ಪರೀಕ್ಷೆಗಳನ್ನು ಚುರುಕುಗೊಳಿಸಿದೆ, 800 ಕಿ.ಮೀ. ವ್ಯಾಪ್ತಿಗೆ ವಿಸ್ತರಿಸಲಾದ ಬ್ರಹ್ಮೋಸ್‌‍ ಕ್ರೂಸ್‌‍ ಕ್ಷಿಪಣಿಯ ಪರೀಕ್ಷೆಗಳು ನಡೆಯುತ್ತಿದ್ದು, ಇದು 2027 ರ ಅಂತ್ಯಕ್ಕೆ ಸೇನೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಜಲಾಂತರ್ಗಾಮಿಯಿಂದ ಉಡಾವಣೆ ಮಾಡಬಹುದಾದ ಕೆ -4 ಮತ್ತು ಎಲ್‌ರಾಶಮ್‌ ಹೈಪರ್ಸಾನಿಕ್‌ ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೇಲೆ ಡಿಆರ್‌ಡಿಒ ಗಮನವಿರಿಸಿದೆ.

ಮತ್ತು ಸುರಕ್ಷತಾ ಕ್ರಮಗಳು ದೀರ್ಘ-ಶ್ರೇಣಿಯ ಕ್ಷಿಪಣಿಗಳು ಹಾರಾಟ ನಡೆಸುವಾಗ ನಾಗರಿಕ ವಿಮಾನಗಳಿಗೆ ಯಾವುದೇ ಅಪಾಯ ಉಂಟಾಗಬಾರದು ಎಂಬ ಉದ್ದೇಶ ಹೊಂದಿದೆ.
ಸಕ್ರಿಯವಾಗಿರುವ ಅವಧಿಯಲ್ಲಿ ವಾಣಿಜ್ಯ ಮತ್ತು ನಾಗರಿಕ ವಿಮಾನಗಳು ಈ ವಲಯಕ್ಕೆ ಪ್ರವೇಶಿಸುವಂತಿಲ್ಲ.

ಇದು ಮಿಲಿಟರಿ ವಿಮಾನಗಳು, ಕ್ಷಿಪಣಿಗಳು ಅಥವಾ ಡ್ರೋನ್‌ಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ಭಾರತದ ರಕ್ಷಣಾ ಕ್ಷೇತ್ರದಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದ್ದು, ಜಾಗತಿಕ ರಕ್ಷಣಾ ಭೂಪಟದಲ್ಲಿ ದೇಶದ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೊಯ್ಯಲಿದೆ.

RELATED ARTICLES

Latest News