ಬೆಂಗಳೂರು,ಏ.9- ಕಾಣೆಯಾಗಿದ್ದ ಇಬ್ಬರು ಬಾಲಕ ರನ್ನು ನಗರ ಪೊಲೀಸರು ರಕ್ಷಿಸಿ ಅವರ ಪೋಷಕರುಗಳಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿ ದ್ದಾರೆ. ರಾಮಮೂರ್ತಿನಗರ :ದೊಡ್ಡ ಬಾಣಸವಾಡಿ ನ್ಯೂ ಬಾಲ್ಡ್ವಿನ್ ಶಾಲೆ ಸಮೀಪವಿರುವ ಅಣ್ಣಮ ದೇವಿ ದೇವಸ್ಥಾನದ ಬಳಿ 11 ವರ್ಷದ ಬಾಲಕ ದಾರಿತಪ್ಪಿ ಬಂದಿರುವುದನ್ನು ಸಾರ್ವಜನಿಕರೊಬ್ಬರು ಗಮನಿಸಿದ್ದಾರೆ.
ಅವರು ತಕ್ಷಣ ನಮ-112ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ನಮ-112 ಸಿಬ್ಬಂದಿ ಹೊಯ್ಸಳ ಕರ್ತವ್ಯದಲ್ಲಿದ್ದ ಎಎಸ್ಐ ಮಂಜುನಾಥ ಹಾಗೂ ಹೆಡ್ ಕಾನ್್ಸಸ್ಟೇಬಲ್ ನಿರಂಜನ್ ಅವರಿಗೆ ಮಾಹಿತಿ ರವಾನಿಸಿದ್ದಾರೆ.
ಮಾಹಿತಿ ಬಂದ ಕೇವಲ 10 ನಿಮಿಷದೊಳಗೆ ಸ್ಥಳಕ್ಕೆ ಹೋಗಿ ಬಾಲಕನನ್ನು ಮಾತನಾಡಿಸಿದಾಗ ಮಾನಸಿಕವಾಗಿ ಅಸಹಾಯ ಸ್ಥಿತಿಯಲ್ಲಿರುವುದು ಗಮನಿಸಿ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿ ಪೋಷಕರನ್ನು ಪತ್ತೆ ಹಚ್ಚಿ ಬಾಲಕನನ್ನು ಸುರಕ್ಷಿತ ವಾಗಿ ಅವರಿಗೆ ಒಪ್ಪಿಸಿದ್ದಾರೆ.
ಕೆಆರ್ಪುರಂ : ಅಯ್ಯಪ್ಪನಗರ, 4ನೇ ಕ್ರಾಸ್ ರಸ್ತೆಯ ವಿಶಾಲ್ಮಾರ್ಟ್ವೊಂದರ ಬಳಿ ಸುಮಾರು 3 ವರ್ಷದ ಬಾಲಕ ದಿಕ್ಕು ತಪ್ಪಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಸಾರ್ವಜನಿಕರೊಬ್ಬರು ಗಮನಿಸಿ ನಮ -112 ಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತ ರಾದ ನಮ-112 ಸಿಬ್ಬಂದಿಯ ವರು ಹೊಯ್ಸಳ ಕರ್ತವ್ಯದಲ್ಲಿದ್ದ ಎಎಸ್ಐ ನಾಗರಾಜ್ ಹಾಗೂ ಕಾನ್ಸ್ ಸ್ಟೇಬಲ್ ಚಂದ್ರುಶೇಖರ್ ಅವರಿಗೆ ಮಾಹಿತಿ ರವಾನಿಸಿದ್ದಾರೆ.
ಈ ಮಾಹಿತಿ ಅನ್ವಯ ಕೇವಲ 22 ನಿಮಿಷದಲ್ಲಿ ಸ್ಥಳಕ್ಕೆ ಹೋಗಿ ಬಾಲಕನೊಂದಿಗೆ ಮಾತನಾಡಿ ಸಮೀಪದ ಪ್ರದೇಶದಲ್ಲಿ ಪೋಷಕರಿಗೆ ಹುಡುಕಾಟ ನಡೆಸಿ ಪತ್ತೆಹಚ್ಚಿ ಸುರಕ್ಷಿತವಾಗಿ ಬಾಲಕ ನನ್ನು ಅವರಿಗೆ ಒಪ್ಪಿಸಿದ್ದಾರೆ.
ಜ್ಞಾನಭಾರತಿ:ಎಸ್ಎಂವಿ ಲೇಔಟ್ನ ಮಾರುತಿ ನಗರದಲ್ಲಿ ಆತಹತ್ಯೆಗೆ ಯತ್ನಿಸಿದ್ದ 30 ವರ್ಷದ ಮಹಿಳೆ ಬಗ್ಗೆ ಸಾರ್ವಜನಿಕರೊಬ್ಬರು ನಮ -112 ಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಕಾರ್ಯಪ್ರವೃತ್ತ ರಾದ ಸಿಬ್ಬಂದಿ ಹೊಯ್ಸಳ ಕರ್ತವ್ಯದಲ್ಲಿದ್ದ ಎಎಸ್ಐ ಚಂದ್ರ ಶೇಖರ್ ಹಾಗೂ ಕಾನ್್ಸಸ್ಟೇಬಲ್ ರಾಮಪ್ಪ ಹೊಸಮನಿ ಅವರಿಗೆ ಮಾಹಿತಿ ರವಾನಿಸಿದ್ದಾರೆ.
ಅದರನ್ವಯ ಕೇವಲ 12 ನಿಮಿಷದಲ್ಲಿ ಸ್ಥಳಕ್ಕೆ ಹೋಗಿ ಆತಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಸ್ಥಳೀಯರ ಸಹಾಯದಿಂದ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದುಚಿಕಿತ್ಸೆ ಕೊಡಿಸಿ ನಂತರ ಕುಟುಂಬದವರಿಗೆ ಒಪ್ಪಿಸಿದ್ದಾರೆ.
ಈ ಘಟನೆಗಳು ಸಾರ್ವಜನಿಕರ ಜಾಗೃತಿ, ನಮ-112 ಸಿಬ್ಬಂದಿ ಸೇವೆಯ ವೇಗದ ಸ್ಪಂದನೆ ಹಾಗೂ ಪೊಲೀಸರ ಮಾನವೀಯ ಕಾರ್ಯಪದ್ದತಿಯನ್ನು ಪ್ರತಿಬಿಂಬಿಸುತ್ತದೆ.
