ಘಟನೆಕಣ್ಣೂರು,ಏ.11: ಕೇರಳದ ಕಣ್ಣೂರಿನ ಮಠಮಂಗಲಂ ಸಮೀಪದ ಮಡಮಂಗಲಂ ಪ್ರದೇಶದಲ್ಲಿ ಸಿಪಿಐ(ಎಂ) ಬಂಡಾಯ ಬೆಂಬಲಿಗನ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚದ್ದಾರೆ. ಮಠಮಂಗಲಂನ ಪೆರೂರ್ ಪ್ರದೇಶದಲ್ಲಿರುವ ಎಂ. ಕೆ. ನಾರಾಯಣನ್ ಅವರ ಮನೆಯಲ್ಲಿ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ.
ನಾರಾಯಣನ್ ಅವರು ಪೆರಿಂಗೋಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸರ ಪ್ರಕಾರ, ಭಾರೀ ಮಳೆ ಮತ್ತು ಗಾಳಿಯ ನಡುವೆಯೇ ನಾರಾಯಣನ್ ಎಚ್ಚರಗೊಂಡು ತಮ ಮನೆಯ ಆವರಣದಲ್ಲಿ ಕೆಲವರು ಸಂಚರಿಸುತ್ತಿರುವುದನ್ನು ಗಮನಿಸಿದ್ದಾರೆ. ಅವರು ಹೊರಗೆ ಬಂದಾಗ ಆ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಆದರೆ, ಅವರು ಕಾರಿಗೆ ದುಷ್ಕರ್ಮಿಗಳಿಂದ ಬೆಂಕಿ ಹಚ್ಚಿದ್ದಾರೆ.ಸಿಪಿಐ(ಎಂ) ಬಂಡಾಯ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರಿಂದ ಈ ದಾಳಿ ನಡೆದಿರಬಹುದು ಎಂದು ದೂರುದಾರರು ಶಂಕಿಸಿದ್ದಾರೆ. ಪಯ್ಯನ್ನೂರಿನಲ್ಲಿ ಯುಡಿಎಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದ್ದರು.ಇದಕ್ಕೂ ಮಧ್ಯೆ, ಪಯ್ಯನ್ನೂರಿನಲ್ಲಿ ಕುನ್ಹಿಕೃಷ್ಣನ್ ಅವರಿಗೆ ಸೇರಿದ ಜಮೀನಿನ ಮೇಲಿನ ಶೆಡ್ಗೂ ರಾತ್ರಿ ಅಪರಿಚಿತರು ಬೆಂಕಿ ಹಚ್ಚಿದ್ದಾರೆ.
ಗುರುವಾರ ವಿಧಾನಸಭೆ ಚುನಾವಣೆಯು ಮುಗಿದ ಬಳಿಕ, ಕಣ್ಣೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ.ಕುನ್ಹಿಕೃಷ್ಣನ್ ಅವರಿಗೆ ಬೆಂಬಲ ನೀಡಿದ ಸಿಪಿಐ(ಎಂ) ನಾಯಕನ ಮನೆಯ ಮೇಲೂ ದಾಳಿ ಮಾಡಿ, ಅವರ ಕಾರಿಗೆ ಬೆಂಕಿ ಹಚ್ಚಲಾಗಿದೆ.ಚುನಾವಣೆಯ ನಂತರ ಪಯ್ಯನ್ನೂರು, ಮಯ್ಯಿಲ್ ಮತ್ತು ಮಟ್ಟುನ್ನೂರು ಪೊಲೀಸ್ ಠಾಣೆಗಳಲ್ಲಿ ಹಲವು ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ.
