Saturday, May 4, 2024
Homeರಾಜ್ಯಮೋದಿ ನಾಯಕತ್ವದ ಪರ ಜನರ ತೀರ್ಪು ನೀಡಿದ್ದಾರೆ : ಎಚ್‍ಡಿಕೆ

ಮೋದಿ ನಾಯಕತ್ವದ ಪರ ಜನರ ತೀರ್ಪು ನೀಡಿದ್ದಾರೆ : ಎಚ್‍ಡಿಕೆ

ಬೆಂಗಳೂರು,ಡಿ.3- ಪಂಚರಾಜ್ಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವದ ಪರವಾಗಿ ಜನ ತೀರ್ಮಾನ ಕೈಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ನಾಲ್ಕು ರಾಜ್ಯಗಳ ಮತ ಎಣಿಕೆ ಇಂದು ನಡೆದಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ ಎಂದ ಅವರು, ಮತದಾನೋತ್ತರ ಸಮೀಕ್ಷೆಗಳಲ್ಲಿ ಎರಡು ರಾಜ್ಯಗಳಲ್ಲಿ ಬಿಜೆಪಿ, ಮತ್ತೆರಡು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬುದಿತ್ತು.

ಆದರೆ ಮತ ಎಣಿಕೆಯ ನಂತರದ ಫಲಿತಾಂಶದಲ್ಲಿ ನರೇಂದ್ರಮೋದಿ ಅವರ ಪರವಾಗಿ ಜನರ ತೀರ್ಮಾನ ಇರುವುದು ಕಂಡುಬರುತ್ತಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲು ನಾನಾ ಕಾರಣಗಳಿವೆ. ಮುನ್ನಡೆಗೆ ಕಾಂಗ್ರೆಸ್‍ನ ಶಕ್ತಿ ಕಾರಣವಲ್ಲ. ಯಾವ ಕಾರಣಕ್ಕೆ ಕಾಂಗ್ರೆಸ್ ಅಲ್ಲಿ ಮೇಲೆ ಬಂದಿದೆ ಎಂಬುದು ಗೊತ್ತಿದೆ. ಐದಕ್ಕೆ ಐದೂ ರಾಜ್ಯಗಳನ್ನು ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್‍ನವರಿಗೆ ಜನರು ಸೂಕ್ತ ಉತ್ತರ ನೀಡಿದ್ದಾರೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮುಗಿಲು ಮುಟ್ಟಿದ ಬಿಜೆಪಿ ಹರ್ಷೋದ್ಘಾರ

ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಹಲವು ಕಾರಣಗಳಿವೆ. ಇಲ್ಲಿಂದ ರವಾನೆಯಾದ ಆರ್ಥಿಕ ತೈಲಿಗಳು, ಚೀಲಗಳು ಕಾರಣ ಇರಬಹುದು. ಕಾಂಗ್ರೆಸ್‍ನವರ ಸಮಾಜಸೇವೆ ಅಭಿವೃದ್ಧಿಗೆ ಪೂರಕವಾದ ಜನಸೇವೆ ನೋಡಿ ತೆಲಂಗಾಣದ ಜನರು ಈ ತೀರ್ಪು ನೀಡಿಲ್ಲ. ಮುಂಬರುವ ಲೋಕಸಭೆ ಚುನಾವಣೆ ನಂತರ ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು ಎಂದರು.

RELATED ARTICLES

Latest News