Monday, May 6, 2024
Homeರಾಷ್ಟ್ರೀಯಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಗಂಟಲು ಸೀಳಿ ಇಬ್ಬರ ಕೊಲೆ

ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಗಂಟಲು ಸೀಳಿ ಇಬ್ಬರ ಕೊಲೆ

ನವದೆಹಲಿ,ಏ.21- ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಶಂಕೆ ಮೇರೆಗೆ ಯುವತಿ ಮತ್ತು ಆಕೆಯ ದೂರದ ಸಂಬಂಧಿಯೊಬ್ಬನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅವಿವಾಹಿತರಾಗಿದ್ದ ಶೈನಾ(22) ಹಾಗೂ ಡ್ಯಾನಿಶ್(35) ಕೊಲೆಯಾಗಿರುವವರು.

ಶೈನಾಳ ತಂದೆ ಮೊಹಮ್ಮದ್ ಶಹೀದ್ (46) ಮತ್ತು ಈತನ ಪುತ್ರ ಕುದುಶ್(20) ಕೊಲೆ ಮಾಡಿರುವ ಆರೋಪಿಗಳು. ಮೊಹಮ್ಮದ್ ಶಹೀದ್ ಕುಟುಂಬ ಹಣ್ಣು ವ್ಯಾಪಾರಿಗಳಾಗಿದ್ದು, ಕೊಲೆಯಾದ ಡ್ಯಾನಿಶ್, ಶಹೀದ್‍ನ ಸೋದರ ಸಂಬಂಧಿಯಾಗಿದ್ದಾನೆ.

ಘಟನೆ ವಿವರ:
ಭಜನಪುರ ಪ್ರದೇಶದಲ್ಲಿ ಶೈನಾ ಮತ್ತು ಡ್ಯಾನಿಶ್ ಇಬ್ಬರು ಹೆಣವಾಗಿ ಪತ್ತೆಯಾಗಿದ್ದರು. ಶೈನಾ ಕುತ್ತಿಗೆಯಲ್ಲಿ ಆಳವಾದ ಕೊಯ್ದಿರುವ ಗಾಯಗಳಾಗಿರುವುದು ಕಂಡುಬಂದಿದೆ. ಆಕೆಯ ಕೈ ಕಾಲುಗಳನ್ನು ದುಪ್ಪಟ್ಟಾ ಮತ್ತು ಲುಂಗಿಯಿಂದ ಕಟ್ಟಿ ಕೊಲೆ ಮಾಡಲಾಗಿತ್ತು. ಡ್ಯಾನಿಶ್‍ನ ಗಂಟಲನ್ನು ಹಣ್ಣು ಕತ್ತರಿಸುವ ದೊಡ್ಡ ಚಾಕುವಿನಿಂದ ಸೀಳಲಾಗಿತ್ತು.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಬಂದಿದ್ದು, ತನ್ನ ಸಹೋದರಿ ಹಾಗೂ ಚಿಕ್ಕಪ್ಪನನ್ನು ಕೊಲೆ ಮಾಡಿರುವುದಾಗಿ ಖುದ್ದು ಕುದೂಶ್‍ನೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ. ಕೊಲೆಯಾಗಿರುವ ಡ್ಯಾನೀಶ್ ಕೂಡ ಹಣ್ಣು ವ್ಯಾಪಾರಿಯಾಗಿದ್ದು, ಈತ ಶೈನಾಳೊಂದಿಗೆ ಸಂಬಂಧವಿಟ್ಟುಕೊಂಡಿದ್ದಾನೆ ಎಂದು ಶಹೀದ್ ಮತ್ತು ಮಗ ಕುದೂಶ್ ಅನುಮಾನ ಹೊಂದಿದ್ದರು. ಶಂಕೆ ಮೇರೆಗೆ ಅವರಿಬ್ಬರನ್ನು ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಉಪಪೊಲೀಸ್ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ತಿಳಿಸಿದ್ದಾರೆ.

ಕೂಡಲೇ ಉತ್ತರ ಘೋಂಡಾದ ರಾಮ್ ಗಲಿಯಲ್ಲಿರುವ ಸ್ಥಳಕ್ಕೆ ತಕ್ಷಣವೇ ಪೊಲೀಸ್ ತಂಡವನ್ನು ತೆರಳಿ ಎರಡನೇ ಮಹಡಿಯಲ್ಲಿರುವ ಮನೆಯನ್ನು ಪರಿಶೀಲನೆ ನಡೆಸಿ ಆರೋಪಿಗಳಾದ ತಂದೆ ಮತ್ತು ಮಗನನ್ನು ಬಂಧಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News