ಮೈಸೂರು, ಮೇ 2- ಯುವತಿಯನ್ನ ಪ್ರೀತಿ ಮಾಡಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೈ ಮುಖಂಡ ಕೈ ಕೊಟ್ಟಿ ರುವ ಘಟನೆ ನಡೆದಿದೆ.
ಪ್ರೀತಿಸಿದವಳಿಗೆ ವಿಷಕೊಟ್ಟು, ಮತ್ತೊಬ್ಬಳ ಕೈ ಹಿಡಿಯಲು ಕೈಮುಖಂಡ ಮುಂದಾಗಿದ್ದ.
ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ.ಪುರಸಭೆ ಮಾಜಿ ಅಧ್ಯಕ್ಷ ಸಿಎಂ ಅತ್ಯಾಪ್ತ ಮದನ್ ರಾಜ್ ಯುವತಿಯನ್ನು ವಂಚಿಸಿದ್ದಾನೆ.ಮದನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮದನ್ ರಾಜ್ ಪ್ರೀತಿ ಹೆಸರಲ್ಲಿ ಯುವತಿಗೆ ನಂಬಿಸಿ ಮೋಸ ಮಾಡಿ, ಪ್ರೀತಿಸಿದ ಹುಡುಗಿ ಬಿಟ್ಟು ಈಗ ಮತ್ತೊಂದು ಹುಡುಗಿ ಜೊತೆ ಎಂಗೇಜೆಂಟ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇಬ್ಬರು ಜೊತೇಲಿ ವಿಷ ಕುಡಿಯುವುದಾಗಿ ನಂಬಿಸಿ ಯುವತಿಗೆ ಮದನ್ ವಿಷ ಕುಡಿಸಿದ್ದಾನೆ. ಇದರಿಂದ ಮನ ನೊಂದ ಯುವತಿ ಟಿ ನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
