ಬಹದ್ದೂರ್ಗಢ(ಹರಿಯಾಣ), ಜು.5- ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೆ ಸೇರಿದ ಇಬ್ಬರು ಪೊಲೀಸರ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದಾರೆ. ಹತ್ಯೆಯಾದವರನ್ನು ಪರ್ವೇಶ್ ಮತ್ತು ಹಿಮಾಂಶು ಎಂದು ಗುರುತಿಸಲಾದ ಆರೋಪಿಗಳು ಹರಿಯಾಣದ ಹನ್ಸಿಯಲ್ಲಿರುವ ಜಿಮ್ನ ನಿರ್ವಾಹಕ ಕಪಿಲ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಕೋಶ ಮತ್ತು ಹರಿಯಾಣ ವಿಶೇಷ ಕಾರ್ಯಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಎಕೌಂಟರ್ ನಡೆದಿದೆ. ಪೊಲೀಸರ ಪ್ರಕಾರ, ಕಳೆದ ತಿಂಗಳು ಹಂಸಿಯಲ್ಲಿ ಜಿಮ್ ಆಪರೇಟರ್ ಆಗಿದ್ದ ಕಪಿಲ್ ಎಂಬ ವ್ಯಕ್ತಿಯನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕೊಲೆ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ಹಂಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯಲ್ಲಿ ಲಾರೆನ್್ಸ ಬಿಷ್ಣೋಯ್ ಗ್ಯಾಂಗ್ನ ಪರ್ವೇಶ್ ಮತ್ತು ಹಿಮಾಂಶು ಎಂದು ಗುರುತಿಸಲಾದ ಇಬ್ಬರು ಪ್ರಮುಖ ಶೂಟರ್ಗಳು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂತು ಎಂದು ಎಸ್ಟಿಎಫ್ ಎಸ್ಪಿ ವಿಕ್ರಾಂತ್ ಭೂಷಣ್ ತಿಳಿಸಿದ್ದಾರೆ.
ಇಬ್ಬರು ಆರೋಪಿಗಳು ಶಸ್ತ್ರಸಜ್ಜಿತರಾಗಿದ್ದು, ಅಪರಾಧ ಮಾಡಲು ಯೋಜಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿದ ನಂತರ ಜಂಟಿ ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಮತ್ತು ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಎನ್ಕೌಂಟರ್ನಲ್ಲಿ ಇಬ್ಬರೂ ಆರೋಪಿಗಳಿಗೆ ಗುಂಡು ಹಾರಿಸಲಾಯಿತು ಮತ್ತು ಒಬ್ಬ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದು, ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೌಂಟರ್ ಇಂಟೆಲಿಜೆನ್್ಸ ದೆಹಲಿ ವಿಶೇಷ ಕೋಶದ ಉಸ್ತುವಾರಿ ಮಂಜೀತ್ ಅವರಿಗೆ ಸುಳಿವು ಸಿಕ್ಕಿತು. ಈ ಮಾಹಿತಿಯನ್ನು ಮತ್ತಷ್ಟು ಪರಿಶೀಲಿಸಿದಾಗ ಈ ಇಬ್ಬರು ವಾಂಟೆಡ್ ಶೂಟರ್ಗಳು ಶಸಾ್ತ್ರಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದರು ಮತ್ತು ಕೃತ್ಯ ಎಸಗಲು ಯೋಜಿಸುತ್ತಿದ್ದರು ಎಂಬುದು ಗೊತ್ತಾಯಿತು. ಕೂಡಲೇ ಕಾರ್ಯಪ್ರವೃತ್ತರಾದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ತಂಡಗಳು ಇಬ್ಬರನ್ನು ಹಿಡಿಯಲು ಮುಂದಾದಾಗ ಪರಿಸ್ಥಿತಿ ಗುಂಡಿನ ಚಕಮಕಿಯತ್ತ ಸಾಗಿತು. ಗುಂಡು ಹಾರಿಸಿದವರನ್ನು ತಡೆಯಲು ತಂಡಗಳು ಯತ್ನಿಸುತ್ತಿದ್ದಾಗ, ಮತ್ತೆ ಗುಂಡು ಹಾರಿಸಿದರು. ಆತರಕ್ಷಣೆಗಾಗಿ ಪೊಲೀಸ್ ತಂಡಗಳು ಪ್ರತಿಯಾಗಿ ಗುಂಡು ಹಾರಿಸಿದವು ಎಂದು ಭೂಷಣ್ ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಕಾನ್ಸ್ಟೆಬಲ್ ಗಾಯಗೊಂಡರೆ, ಇತರ ಹಲವಾರು ಅಧಿಕಾರಿಗಳ ಗುಂಡು ನಿರೋಧಕ ಜಾಕೆಟ್ಗಳಿಗೆ ಗುಂಡು ತಗುಲಿತು. ವಿವಾದದ ಸಮಯದಲ್ಲಿ, ಒಬ್ಬ ಪೊಲೀಸ್ ಕಾನ್ಸ್ಟೆಬಲ್ ಕಾಲಿಗೆ ಗುಂಡೇಟು ತಗುಲಿತು, ಮತ್ತು ಇತರ ನಾಲ್ವರು ಅಧಿಕಾರಿಗಳ ಗುಂಡು ನಿರೋಧಕ ಜಾಕೆಟ್ಗಳಿಗೆ ಗುಂಡು ತಗುಲಿತು; ಇಬ್ಬರೂ ಶೂಟರ್ಗಳು ಸಹ ಗಾಯಗೊಂಡರು ಎಂದು ಭೂಷಣ್ ಹೇಳಿದರು.
ಗಾಯಗೊಂಡ ಇಬ್ಬರು ಶೂಟರ್ಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಉಳಿಸಲಾಗಲಿಲ್ಲ. ಇಬ್ಬರೂ ಶೂಟರ್ಗಳು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಾಯಗೊಂಡ ಕಾನ್ಸ್ಟೆಬಲ್ನನ್ನು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
