Homeರಾಷ್ಟ್ರೀಯ"ನಮ್ಮ ಸಮಯ ವ್ಯರ್ಥ ಮಾಡಬೇಡಿ" : ಪೊಲೀಸ್‌‍ ದೌರ್ಜನ್ಯದ ವಿರುದ್ಧ ಸಲ್ಲಿಸಿದ್ದ ಸಿಜೆಪಿ ಅರ್ಜಿ ವಜಾಗೊಳಿಸಿದ...

“ನಮ್ಮ ಸಮಯ ವ್ಯರ್ಥ ಮಾಡಬೇಡಿ” : ಪೊಲೀಸ್‌‍ ದೌರ್ಜನ್ಯದ ವಿರುದ್ಧ ಸಲ್ಲಿಸಿದ್ದ ಸಿಜೆಪಿ ಅರ್ಜಿ ವಜಾಗೊಳಿಸಿದ ಸಿಜೆಐ

"Don't Waste Time": Top Court On Plea Against Police Action On CJP Protesters

ನವದೆಹಲಿ,ಜು.22- ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ಎಸಗಿದ್ದಾರೆನ್ನಲಾದ ದೌರ್ಜನ್ಯದ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಾಗಿ ನಿರಾಕರಿಸಿದೆ.

ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರ ಪೀಠವು, ನಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಅರ್ಜಿದಾರರಿಗೆ ಖಡಕ್‌ ಆಗಿ ಸೂಚಿಸಿತು.ಪೋಲಿಸ್‌‍ ದೌರ್ಜನ್ಯಗಳನ್ನು ಸಾಬೀತುಪಡಿಸಲು ದೃಶ್ಯಾವಳಿಗಳಿರುವ (ವೀಡಿಯೊ) ಆಧಾರಗಳನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತರಲು ಯತ್ನಿಸಿದಾಗ, ಸಿಜೆಐ ಸೂರ್ಯ ಕಾಂತ್‌ ಅವರು,ನಮಗೆ ವೀಡಿಯೊಗಳಲ್ಲಿ ಆಸಕ್ತಿ ಇಲ್ಲ. ಇಂತಹ ವೀಡಿಯೊಗಳನ್ನು ಕುಳಿತು ವೀಕ್ಷಿಸಲು ನಮ ಬಳಿ ಸಮಯವಿಲ್ಲ, ಎಂದು ಚಾಟಿ ಬೀಸಿದರು.

ನೀಟ್‌ ಪರೀಕ್ಷೆಯ ಪಾರದರ್ಶಕತೆ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ ಸುಧಾರಣೆ ತರುವಂತಹ ಪ್ರಮುಖ ಶೈಕ್ಷಣಿಕ ವಿಷಯಗಳನ್ನು ಎತ್ತಿಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು ಎಂದು ವಕೀಲರು ಸಮರ್ಥಿಸಿಕೊಳ್ಳಲು ಯತ್ನಿಸಿದಾಗ, ಸಿಜೆಐ ಅವರು ತುಂಬಾ ಧನ್ಯವಾದಗಳು ಎನ್ನುವ ಮೂಲಕ ವಿಚಾರಣೆಗೆ ತಡೆ ನೀಡಿದರು.

ದೆಹಲಿ ಹೈಕೋರ್ಟ್‌ನಿಂದಲೂ ತರಾಟೆ :
ಇದಕ್ಕೂ ಮುನ್ನ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿಯೂ ತುರ್ತು ವಿಚಾರಣೆಗೆ ಮನವಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಹೈಕೋರ್ಟ್‌, ಈ ರೀತಿಯ ವಿಚಾರಗಳಲ್ಲಿ ನ್ಯಾಯಾಲಯವನ್ನು ಎಳೆದು ತರಬೇಡಿ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತ್ತು.

ಆದಾಗ್ಯೂ, ಜಂತರ್‌ ಮಂತರ್‌ನಲ್ಲಿ ಪರಿಸರ ಹೋರಾಟಗಾರ ಸೋನಮ್‌ ವಾಂಗ್‌ಚುಕ್‌ ಅವರ ಉಪವಾಸ ಸತ್ಯಾಗ್ರಹದ ವೇಳೆ ನಡೆದ ಪೋಲಿಸ್‌‍ ಕಾರ್ಯಾಚರಣೆಯ ಕುರಿತು ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ನೀಟ್‌ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸೋನಮ್‌ ವಾಂಗ್‌ಚುಕ್‌ ಹಾಗೂ ಸಿಜೆಪಿ ಸದಸ್ಯರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.ಸಿಪಿಐ ನಾಯಕಿ ಐಷೆ ಘೋಷ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯಲ್ಲಿ, ದೆಹಲಿ ಪೊಲೀಸರು ವೀಡಿಯೊಗ್ರಫಿ ಮೂಲಕ ಪ್ರತಿಭಟನಾಕಾರರ ಮೇಲೆ ಅಕ್ರಮ ಕಣ್ಗಾವಲು ಇರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೇಂದ್ರದ ಪರ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ವೀಡಿಯೊ ಚಿತ್ರೀಕರಣವು ಕೇವಲ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಮುನ್ನೆಚ್ಚರಿಕೆಯ ಭಾಗವೇ ಹೊರತು ನಾಗರಿಕರ ಕಣ್ಗಾವಲಿಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಪರಿಸರ ಹೋರಾಟಗಾರ ಸೋನಮ್‌ ವಾಂಗ್‌ಚುಕ್‌ ಅವರ ವೈದ್ಯಕೀಯ ಚಿಕಿತ್ಸೆ, ಸರ್ಕಾರಿ ಆಸ್ಪತ್ರೆಯಲ್ಲಿ ಅವರ ದಾಖಲಾತಿ ಹಾಗೂ ಶಾಂತಿಯುತ ಪ್ರತಿಭಟನೆಯ ಸಾಂವಿಧಾನಿಕ ಹಕ್ಕುಗಳ ಕುರಿತಾದ ಕಾನೂನು ಹೋರಾಟಗಳು ಪ್ರಸ್ತುತ ದೆಹಲಿ ಹೈಕೋರ್ಟ್‌ನಲ್ಲಿ ಮುಂದುವರಿದಿವೆ.

ಪ್ರತಿಭಟನೆಗಳು ಸೋನಮ್‌ ವಾಂಗ್ಚುಕ್‌ ಮತ್ತು ಸಿಜೆಪಿ ಸದಸ್ಯರಿಗೆ ಸಂಬಂಧಿಸಿವೆ. ನೀಟ್‌ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಮೇಲೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳು ಮತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಹವಾಮಾನ ಕಾರ್ಯಕರ್ತೆ ಸೋನಮ್‌ ವಾಂಗ್‌ಚುಕ್‌ ಮತ್ತು ಕಾಕ್ರೋಚ್‌ ಜನತಾ ಪಕ್ಷದ ಸದಸ್ಯರಿಗೆ ಈ ಪ್ರತಿಭಟನೆಗಳು ಸಂಬಂಧಿಸಿವೆ.

ಈ ಪ್ರತಿಭಟನೆಗಳು ದೆಹಲಿ ಹೈಕೋರ್ಟ್‌ನಲ್ಲಿ ಹಲವಾರು ಸುತ್ತಿನ ಮೊಕದ್ದಮೆಗಳಿಗೆ ಕಾರಣವಾಗಿವೆ, ಅವುಗಳಲ್ಲಿ ವಾಂಗ್‌ಚುಕ್‌ ಅವರ ವೈದ್ಯಕೀಯ ಚಿಕಿತ್ಸೆ, ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಮುಂದುವರಿದ ದಾಖಲಾತಿ, ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್‌‍ ಕಣ್ಗಾವಲು ಆರೋಪಗಳು ಮತ್ತು ಪ್ರದರ್ಶನಗಳ ಸಮಯದಲ್ಲಿ ದೆಹಲಿ ಪೊಲೀಸರ ನಡವಳಿಕೆಗೆ ಸಂಬಂಧಿಸಿದ ಅರ್ಜಿಗಳು ಸೇರಿವೆ.

RELATED ARTICLES

Latest News