ನವದೆಹಲಿ, ಜೂ.13 (ಪಿಟಿಐ)- ಓಮನ್ ಕೊಲ್ಲಿಯಲ್ಲಿ ವ್ಯಾಪಾರಿ ಹಡಗಿನ ಮೇಲೆ ಅಮೆರಿಕದ ಮಿಲಿಟರಿ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ ವಿಷಯವನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಪ್ರಸ್ತಾಪಿಸಿದರು.
ಪ್ರಸ್ತುತ ಯೂರೋಪ್ ಭೇಟಿಯಲ್ಲಿರುವ ಜೈಶಂಕರ್ ಅವರು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.ಇಂದು ಸಂಜೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಮಾತನಾಡಿದ್ದೇನೆ. ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ ಕೊಲ್ಲಿಯಲ್ಲಿ ಅಮೆರಿಕದ ನೌಕಾಪಡೆಯ ದಾಳಿಗೆ ಭಾರತದ ಬಲವಾದ ಪ್ರತಿಭಟನೆಯನ್ನು ನಾನು ಪುನರುಚ್ಚರಿಸಿದ್ದೇನೆ ಎಂದು ವಿದೇಶಾಂಗ ಸಚಿವ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ವಾಣಿಜ್ಯ ಸಾಗಣೆಯ ವಿರುದ್ಧ ಇಂತಹ ಮಾರಕ ಕ್ರಮಗಳು ಸಮರ್ಥನೀಯವಲ್ಲ ಎಂದು ಅವರು ಹೇಳಿದರು.ಭಾರತವು ಶುಕ್ರವಾರ ಚಾರ್ಜ್ ಡಿ ಅಫೇರ್ಸ್ ಜೇಸನ್ ಮೀಕ್್ಸ ಅವರನ್ನು ಕರೆಸಿ, ಓಮನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಸದಸ್ಯರೊಂದಿಗೆ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕದ ಮಿಲಿಟರಿಯ ಮಾರಕ ದಾಳಿಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
24 ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಪಲಾವ್ ಧ್ವಜ ಹೊಂದಿರುವ ತೈಲ ಟ್ಯಾಂಕರ್ ಮಾರಿವೆಕ್್ಸ ಅನ್ನು ಜೂನ್ 8 ರಂದು ಯುಎಸ್ ಪಡೆಗಳು ನಿಷ್ಕ್ರಿಯಗೊಳಿಸಿದವು. ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.
ಜೂನ್ 10 ರಂದು, ಅಮೆರಿಕವು ಪಲಾವ್ ಧ್ವಜ ಹೊತ್ತ ಮತ್ತೊಂದು ಟ್ಯಾಂಕರ್ ಸೆಟ್ಟೆಬೆಲ್ಲೊ ಮೇಲೆ ದಾಳಿ ಮಾಡಿತು, ಅದರಲ್ಲಿದ್ದ 24 ಭಾರತೀಯ ನಾವಿಕರಲ್ಲಿ ಮೂವರು ಸಾವನ್ನಪ್ಪಿದರು.20 ಭಾರತೀಯರನ್ನು ಹೊತ್ತ ಗಿನಿಯಾ-ಬಿಸ್ಸೌ ಧ್ವಜ ಹೊತ್ತ ಟ್ಯಾಂಕರ್ ಜಲವೀರ್ ಎಂಬ ಮತ್ತೊಂದು ಹಡಗಿನ ಮೇಲೆ ಗುರುವಾರ ದಾಳಿ ನಡೆಸಲಾಗಿತ್ತು.
