ಬೆಂಗಳೂರು,ಜೂ.17- ಧರ್ಮಸ್ಥಳದ ಬೆಳವಣಿಗೆಗಳ ಬಗ್ಗೆ ಕಳವಳವಾಗಿದ್ದು ನಿಜ. ಸಾಮಾಜಿಕ ಕಳಕಳಿಯಿಂದ ನಾನು ಎಸ್ಐಟಿ ರಚನೆ ಮಾಡಬೇಕೆಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಿದ್ದೂ ನಿಜ ಎಂದು ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನನ್ನ ಹೆಸರು ತರಲಾಗಿದೆ. ಇದು ಸತ್ಯಕ್ಕೆ ದೂರ ಎಂದರು. ನಾನು ಒಂದು ಬಾರಿ ಧರ್ಮಸ್ಥಳಕ್ಕೆ ಹೋಗಿದ್ದೇನೆ ಅಷ್ಟೇ.
ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ನನಗೆ ದೂರವಾಣಿ ಕರೆ ಮಾಡಿದ್ದು ನಿಜ. ಆದರೆ, ಕೆಲ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರ ಎಂದು ಹೇಳಿದರು.
ಜನಸಾಮಾನ್ಯರ ಪರ ಮಾತನಾಡಿದರೆ ನಾನು ಹಿಂದೂ ವಿರೋಧಿ ಎಂದು ಹೇಳುತ್ತಾರೆ. ಚಿನ್ನಯ್ಯ ಹೇಳಿಕೆಯನ್ನು ತಿರುಚುವಂತಹ ಕೆಲಸವಾಗುತ್ತಿದೆ ಎಂದು ಅವರು ಆರೋಪಿಸಿದರು.
