Homeರಾಜ್ಯಆಪರೇಷನ್‌ ಸಿಂಧೂರ್‌ : ಮಾಜಿ ಪ್ರಧಾನಿ ದೇವೇಗೌಡರ ಶ್ಲಾಘನೆ

ಆಪರೇಷನ್‌ ಸಿಂಧೂರ್‌ : ಮಾಜಿ ಪ್ರಧಾನಿ ದೇವೇಗೌಡರ ಶ್ಲಾಘನೆ

Operation Sindhur: Appreciation of former Prime Minister Deve Gowda

ಬೆಂಗಳೂರು, ಮೇ 7- ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್‌ ಸಿಂಧೂರ್‌ಗೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬಲವಾದ, ಸುರಕ್ಷಿತ ಮತ್ತು ಏಕೀಕೃತ ಭಾರತಕ್ಕಾಗಿ ನಾವು ಕೆಲಸ ಮಾಡುವುದನ್ನು ಮುಂದುವರಿಸೋಣ ಎಂದು ಮಾಜಿ
ಪ್ರಧಾನಿ ಹೆಚ್‌.ಡಿ.ದೇವೇಗೌಡರು ಕರೆ ನೀಡಿದ್ದಾರೆ.

ಈ ಸಂಬಂಧ ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಮಾಜಿ ಪ್ರಧಾನಿಯಾಗಿ, ನಮ ಮಾತೃಭೂಮಿಯನ್ನು ಅಪ್ರತಿಮ ತ್ಯಾಗ ಮತ್ತು ಶಿಸ್ತಿನಿಂದ ರಕ್ಷಿಸುವ ಪ್ರತಿಯೊಬ್ಬ ಧೈರ್ಯಶಾಲಿ ಹೃದಯಕ್ಕೂ ನಾನು ಮನಃಪೂರ್ವಕ ಗೌರವದಿಂದ ನಮಸ್ಕರಿಸುತ್ತೇನೆ ಎಂದಿದ್ದಾರೆ.

ಒಂದು ವರ್ಷದ ಹಿಂದೆ, ಆಪರೇಷನ್‌ ಸಿಂಧೂರ್‌ ಒಂದು ಕಾಲಾತೀತ ಸತ್ಯವನ್ನು ಪುನರುಚ್ಚರಿಸಿತ್ತು. ಭಾರತವು ತನ್ನ ಸಾರ್ವಭೌಮತ್ವ ಮತ್ತು ಶಾಂತಿಗೆ ಎದುರಾಗುವ ಪ್ರತಿಯೊಂದು ಬೆದರಿಕೆಯ ವಿರುದ್ಧವೂ ಒಗ್ಗಟ್ಟಿನಿಂದ ಮತ್ತು ಅಚಲವಾಗಿ ನಿಂತಿದೆ ಎಂಬುದನ್ನು ತೋರಿಸಿತ್ತು ಎಂದು ಅವರು ಹೇಳಿದ್ದಾರೆ.

ಇದು ಕೇವಲ ಮಿಲಿಟರಿ ಕಾರ್ಯಾಚರಣೆಯಾಗಿರಲಿಲ್ಲ, ಬದಲಾಗಿ ನಮ ಸಶಸ್ತ್ರ ಪಡೆಗಳ ಧೈರ್ಯ, ನಮ ಜನರ ಸ್ಥಿತಿಸ್ಥಾಪಕತ್ವ ಮತ್ತು ಬಲಿಷ್ಠ ರಾಷ್ಟ್ರದ ಸಾಮೂಹಿಕ ಸಂಕಲ್ಪದ ಪ್ರತಿಬಿಂಬವಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ ಭಾರತ ರಾಷ್ಟ್ರವು ಪ್ರತಿಯೊಂದು ಸವಾಲಿಗೂ ಶಕ್ತಿ, ಏಕತೆ ಮತ್ತು ದೃಢಸಂಕಲ್ಪದಿಂದ ಪ್ರತಿಕ್ರಿಯಿಸುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸಿತು ಎಂದು ಅವರು ಹೇಳಿದ್ದಾರೆ.

RELATED ARTICLES

Latest News