Homeಜಿಲ್ಲಾ ಸುದ್ದಿಗಳುಕಲ್ಬುರ್ಗಿ ಜಿಲ್ಲಾ ಎಸ್‌‍ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್‌ಇನ್ಸ್‌ಪೆಕ್ಟರ್ ನೇಣಿಗೆ ಶರಣು

ಕಲ್ಬುರ್ಗಿ ಜಿಲ್ಲಾ ಎಸ್‌‍ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್‌ಇನ್ಸ್‌ಪೆಕ್ಟರ್ ನೇಣಿಗೆ ಶರಣು

Sub-inspector commits suicide in Kalaburagi

ಬೆಂಗಳೂರು,ಜೂ.17- ಕಲ್ಬುರ್ಗಿ ಜಿಲ್ಲಾ ಎಸ್‌‍ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್‌ಇನ್ಸ್ ಪೆಕ್ಟರ್‌ ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ. ರಾಘವೇಂದ್ರ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಗಂಗಾನಗರದ ನಿವಾಸಿ ಬಸವರಾಜು (39) ಆತಹತ್ಯೆಗೆ ಶರಣಾಗಿರುವ ಸಬ್‌ಇನ್ಸ್ ಪೆಕ್ಟರ್‌.

ಕಲ್ಬುರ್ಗಿ ಜಿಲ್ಲಾ ಎಸ್‌‍ಪಿ ಕಚೇರಿಯ ಡಿಸಿ ಆರ್‌ಬಿ ವಿಭಾಗದಲ್ಲಿ ಬಸವರಾಜು ಕರ್ತವ್ಯ ನಿರ್ವಹಿಸುತ್ತಿದ್ದರು. ಬಸವರಾಜು ಅವರ ಪತ್ನಿ ತವರು ಮನೆಗೆ ಹೋಗಿದ್ದಾರೆ. ರಾತ್ರಿ 11 ಗಂಟೆ ಸುಮಾರಿನಲ್ಲಿ ತಮ ಬೆಡ್‌ರೂಮ್‌ನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ಸುದ್ದಿ ತಿಳಿದು ರಾಘವೇಂದ್ರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಸವರಾಜು ಅವರ ತಂದೆ ಪೊಲೀಸರಿಗೆ ದೂರು ನೀಡಿ, ಅನಾರೋಗ್ಯದಿಂದ ಜಿಗುಪ್ಸೆಗೊಂಡು ಮಗ ಆತಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News