Tuesday, April 14, 2026
Homeಜಿಲ್ಲಾ ಸುದ್ದಿಗಳುಲೈಂಗಿಕ ದೌರ್ಜನ್ಯಕ್ಕೊಳಗಾಗಿ ಬಾಲಕಿ ಆತ್ಮಹತ್ಯೆ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ , 7...

ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಬಾಲಕಿ ಆತ್ಮಹತ್ಯೆ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ , 7 ಲಕ್ಷ ದಂಡ

Girl commits suicide after being sexually assaulted: Convict sentenced to 20 years

ಮಂಡ್ಯ.ಏ.10- ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷ ಶಿಕ್ಷೆ ಹಾಗೂ 7 ಲಕ್ಷ ರೂ. ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್‌್ಸ ಮತ್ತು 2ನೇ ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಬಿ.ದಿಲೀಪ್‌ ಕುಮಾರ್‌ ತೀರ್ಪು ನೀಡಿದ್ದಾರೆ.

ಮಂಡ್ಯ ನಗರ 2ನೇ ಕ್ರಾಸ್‌‍, ತಾವರಗೆರೆಯಲ್ಲಿ ವಾಸವಾಗಿರುವ ವಾಯಿದ್‌ ಇಕ್ಬಾಲ್‌ ಅವರ ಮಗ ಅಖೀಬ್‌ ಆಲಂ ಶೇಖ್‌ ಅಖೀಬ್‌ ಆಲಂ ಶಿಕ್ಷೆಗೊಳಗಾದ ಅಪರಾಧಿ. ಅಪ್ರಾಪ್ತ ಬಾಲಕಿ ಸೆಂಟ್‌ ಜೋಸೆಫ್‌ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು, ಶಾಲೆಗೆ ಹೋಗುವಾಗ, ಬರುವಾಗ ಆಗಾಗ್ಗೆ ಹೋಗಿ ಬಾಲಕಿಯನ್ನು ಭೇಟಿ ಮಾಡುತ್ತಾ, ಪುಸಲಾಯಿಸಿನನ್ನನ್ನು ಪ್ರೀತಿಸದೇ ಹೋದರೆ ಕೈಯನ್ನು ಕುಯ್ದುಕೊಳ್ಳುತ್ತೇನೆಂದು ಹಾಗೂ ಆತಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿದ್ದ.

2023ರ ನವೆಂಬರ್‌ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಶ್ರೀರಂಗಪಟ್ಟಣ ತಾಲ್ಲೂಕಿನ ಕರೀಘಟ್ಟಬೆಟ್ಟದ ದೇವಸ್ಥಾನದ ಹಿಂಭಾಗದಲ್ಲಿ ಕಾರಿನಲ್ಲೇ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ. ನಂತರ ಈ ವಿಚಾರವನ್ನು ನಿಮ ತಂದೆ-ತಾಯಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದು, ಇದರಿಂದ ಮನನೊಂದ ಅಪ್ರಾಪ್ತ ಬಾಲಕಿ ಮನೆಯ ಕೊಠಡಿಯಲ್ಲಿ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಳು. ಲೈಂಗಿಕ ಹಲ್ಲೆಗೆ ಒಳಗಾಗಿದ್ದ ಬಾಲಕಿಯು ಗರ್ಭಿಣಿಯಾಗಿರುವುದು ಬಾಲಕಿಯ ಶವದ ವೈದ್ಯಕೀಯ ಪರೀಕ್ಷೆ ವೇಳೆ ದೃಡಪಟ್ಟಿತ್ತು.

ಈ ಸಂಬಂಧ ಮಂಡ್ಯ ಮಹಿಳಾ ಪೊಲೀಸ್‌‍ ಠಾಣೆಯಲ್ಲಿ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತನಿಖಾಧಿಕಾರಿಯಾದ ಈ ಹಿಂದೆ ಇದ್ದ ಮಂಡ್ಯ ಮಹಿಳಾ ಪೊಲೀಸ್‌‍ ಠಾಣಾ ಇನ್‌ಸ್ಪೆಕ್ಟರ್‌ ಹೆಚ್‌.ಆನಂದಕುಮಾರ್‌ ತನಿಖೆ ಕೈಗೊಂಡು, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನಿಗಧಿತ ಸಮಯದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ, ಆ ವ್ಯಕ್ತಿಯ ವಿರುದ್ದ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣವು ಸ್ಪೆಷಲ್‌ ಕೇಸ್‌‍ ನಂ:77/2024 ರಂತೆ (ಮಂಡ್ಯ ಮಹಿಳಾ ಪೊಲೀಸ್‌‍ ಠಾಣಾ ಮೊ.ನಂ.81/2023) ಮಂಡ್ಯದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಬಿ.ದಿಲೀಪ್‌ಕುಮಾರ್‌ ಅವರ ಮುಂದೆ ವಿಚಾರಣೆ ನಡೆದು ಅಖೀಬ್‌ ಆಲಂ ಶೇಖ್‌ ಅಖೀಬ್‌ ಆಲಂಗೆ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ.

ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀ ಹೆಬ್ಬಕವಾಡಿ ನಾಗರಾಜು ರವರು ವಾದ ಮಂಡಿಸಿದ್ದರು. ಎಂದು ಜಿಲ್ಲಾ ಎಫ್‌. ಟಿ. ಸಿ.-2 ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಸರ್ಕಾರಿ ಅಭಿಯೋಜಕರಾದ ನಾಗರಾಜು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News